News Karnataka Kannada
Monday, April 29 2024
ಮೈಸೂರು

ನಂಜನಗೂಡು ಉಪಚುನಾವಣೆ…ನೀತಿ ಸಂಹಿತೆ ಇಂದಿನಿಂದಲೇ ಜಾರಿ: ಜಿಲ್ಲಾಧಿಕಾರಿ

Photo Credit :

ನಂಜನಗೂಡು ಉಪಚುನಾವಣೆ...ನೀತಿ ಸಂಹಿತೆ ಇಂದಿನಿಂದಲೇ ಜಾರಿ: ಜಿಲ್ಲಾಧಿಕಾರಿ

ಮೈಸೂರು: ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರ(214) ಉಪಚುನಾವಣೆ ಘೋಷಣೆಯಾದ ಹಿನ್ನಲ್ಲೆಯಲ್ಲಿ ಕ್ಷೇತ್ರದಲ್ಲಿ ಇಂದಿನಿಂದ ಏಪ್ರಿಲ್ 15ರವರೆಗೆ ನೀತಿ ಸಂಹಿತೆ ಜಾರಿಯಲಿರುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಹೇಳಿದ್ದು ಅಲ್ಲದೆ ಕ್ಷೇತ್ರದಲ್ಲಿರುವ ಮತದಾರರ ಹಾಗೂ ಮತಗಟ್ಟೆ ಸಂಪೂರ್ಣ ವಿವರ ನೀಡಿದರು.  

ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರ ರಾಜೀನಾಮೆ ತೆರವಾಗಿದ್ದ ಸ್ಥಾನಕ್ಕೆ ಏಪ್ರಿಲ್ 9 ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 14 ರಿಂದ 21ರವರೆಗೆ ನಂಜನಗೂಡಿನ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಬೆಳಗ್ಗೆ 11 ರಿಂದ 3ರವೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಮಾರ್ಚ್ 22 ರಂದು ನಾಮಪತ್ರ ಪರೀಶಿಲನೆ ನಡೆಯಲಿದ್ದು, 23 ರಂದು ಉಮೇದುವಾರಿಕೆಯನ್ನ ಹಿಂಪಡೆಯಬಹುದಾಗಿದೆ. ಏಪ್ರಿಲ್ 14 ರಂದು ಈ ಎರಡು ಕ್ಷೇತ್ರದ ಮತದಾನದ ಏಣಿಕೆ ಕಾರ್ಯ ನಡೆಯಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.  

ನಂಜನಗೂಡು ಕ್ಷೇತ್ರದಲ್ಲಿ ಒಟ್ಟು 236 ಮತಗಟ್ಟೆಗಳಿದ್ದು, 1,01,267 ಪುರುಷ, 99,231 ಮಹಿಳಾ ಮತದಾರರು ಹಾಗೂ ಇತರೆ 08 ಮತದಾರರು ಸೇರಿದಂತೆ 2,00,506 ಮತದಾರರಿದ್ದಾರೆ ಎಂದು ತಿಳಿಸಿದರು.

ಇನ್ನೂ ಸರ್ಕಾರ ಘೋಷಣೆ ಮಾಡಿರುವ ಹಳೆಯ ಯೋಜನೆ ಅಥವಾ ಕಾಮಗಾರಿ ಮುಂದುವರಿಸಲು ಯಾವುದೇ ನಿರ್ಭಂಧವಿರುವುದಿಲ್ಲ, ಆದರೆ ಹೊಸ ಯೋಜನೆಗಳನ್ನ ಘೋಷಣೆ ಮಾಡುವಂತಿಲ್ಲ ಎಂದು ತಿಳಿಸಿದರು. ನಂಜಗೂಡಿನಲ್ಲಿ 72 ಅತಿಸೂಕ್ಷ, 124  ಸೂಕ್ಷ, 40 ಸಾಮಾನ್ಯ ಮತಗಟ್ಟೆಗಳನ್ನ ತೆರಯಲಾಗಿದೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು