ಮೈಸೂರು: ದಸರಾ ಉದ್ಘಾಟನೆಗೆ ಬಂದಿರುವುದು ಎಷ್ಟೂ ಸಂತೋಷವೂ ಅಷ್ಟೇ ವಿಷಾದವೂ ಆಗಿದೆ ಎಂದು ಇಂದಿನ ಕಾವೇರಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ತಮ್ಮ ವಿಷಾದವನ್ನು ನಾಡೋಜ ಚೆನ್ನವೀರಕಣವಿ ವ್ಯಕ್ತಪಡಿಸಿದ್ದಾರೆ.
ಕಾವೇರಿ, ಮಹಾದಾಯಿ ಹೊರಾಟಗಳು ಇಂದು ಜನಾಂದೋಲನವಾಗಿ ರೂಪುಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ಮದ್ಯ ಪ್ರವೇಶ ಮಾಡಿ ಸಮಸ್ಯೆ ಬಗೆ ಹರಿಸಬೇಕು ಇದು ಅವರ ಕರ್ತವ್ಯವೂ ಆಗಿದೆ. ಪ್ರಧಾನಿ ವಿದೇಶಗಳಲ್ಲಿ ಭಾರತದ ಬಾಂದವ್ಯವನ್ನ ಬೆಳಸಲು ಬಯಸುತ್ತಿದ್ದಾರೆ ಆದರೆ ನಮ್ಮ ರಾಷ್ಟ್ರದಲ್ಲಿ ಪ್ರತಿವೊಂದು ರಾಜ್ಯಕ್ಕೆ ಉತ್ತಮ ಬಾಂದವ್ಯ ಇಲ್ಲ. ಹೀಗಾದರೇ ದೇಶ ಕಟ್ಟೋದು ಹೇಗೆ ಎಂದು ಪ್ರಶ್ನೆ ಮಾಡಿದರು ಕಣವಿ.
ದೇಶದ ಎಲ್ಲಾ ನದಿಗಳ ವಿಚಾರದಲ್ಲೂ ವ್ಯಾಜ್ಯಾ, ಕಲಹ, ವಿವಾದ ಇದೆ, ಇದಕ್ಕೆ ಪರಿಹಾರ ರಾಷ್ಟ್ರೀಯಾ ಜಲನೀತಿ ರೂಪಿಸುವುದು ಅಗತ್ಯವಾಗಿದೆ. ಜಲವಿವಾದ ವಿಷಯವನ್ನು ನ್ಯಾಯಾಲಯಗಳು ಮಾನವೀತೆಯಿಂದ ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದರು.