ಮೈಸೂರು: ಲಲಿತಾದ್ರಿಪುರಂನ ನಿರ್ಜನ ಪ್ರದೇಶದಲ್ಲಿ ಕಳೆದ ತಿಂಗಳು ನಡೆದಿದ್ದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆ ಗುರುವಾರ ಮೈಸೂರಿನ ಜೈಲಿನಲ್ಲಿ ಆರೋಪಿಗಳ ಗುರುತು ಪತ್ತೆ ಕಾರ್ಯ ನಡೆಸಿದಳು. ಪ್ರಕರಣದಕ್ಕೆ ಸಂಬoಧಿಸಿದoತೆ ಯಾವುದೇ ಹೇಳಿಕೆಯನ್ನು ಪೊಲೀಸರಿಗೆ ನೀಡದಿದ್ದ ಸಂತ್ರಸ್ತೆಯನ್ನು ಮುಂಬೈಗೆ ಹುಡುಕಿಕೊಂಡು ಹೋಗಿ, ಆಕೆಯನ್ನು ಪತ್ತೆ ಹಚ್ಚಿ, ಮನವೊಲಿಸಿದ ಪೊಲೀಸರು, ಮೈಸೂರಿಗೆ ಆಕೆಯನ್ನು ಪೋಷಕರೊಂದಿಗೆ ಕರೆತಂದಿದ್ದರು.
ಬುಧವಾರ ನ್ಯಾಯಾಲಯ ಹಾಗೂ ತನಿಖಾಧಿಕಾರಿಯ ಮುಂದೆ ಪ್ರಕರಣಕ್ಕೆ ಸಂಬoಧಿಸಿದoತೆ ಹೇಳಿಕೆಯನ್ನು ನೀಡಿದ್ದಳು. ಇಂದುಮೈಸೂರಿನ ಜೈಲಿನಲ್ಲಿ ನಡೆದ ಐಡೆಂಟಿಫಿಕೇಷನ್ ಪರೇಡ್ ಸುಮಾರು ನಾಲ್ಕು ಗಂಟೆಗಳ ಕಾಲ ನಡೆಯಿತು. ಎರಡು ವಿಡಿಯೋ ಕ್ಯಾಮಾರಾಗಳನ್ನು ಅಳವಡಿಸಿ ಅದರಲ್ಲಿ ರೆಕಾರ್ಡ್ ಮಾಡಿಕೊಳ್ಳಲಾಗಿತ್ತು.
ತಹಶೀಲ್ದಾರರು ಹಾಗೂ ಪೋಲಿಸ್ ತನಿಖಾಧಿಕಾರಿ ಮುಂದೆ ಸಂತ್ರಸ್ತೆಯಿoದ ಐಡೆಂಟಿಫಿಕೇಷನ್ ಪರೇಡ್ ನಡೆಯಿತು. ಪತ್ತೆ ಕಾರ್ಯ 18 ಸುತ್ತುಗಳು ನಡೆಯಿತು. ಸಂತ್ರಸ್ತೆ ವಿದ್ಯಾರ್ಥಿನಿಯ ಪೋಷಕರು ಕೂಡ ಈ ವೇಳೆ ಹಾಜರಿದ್ದರು. ಆ ದಿನ ಧರಿಸಿದ್ದ ಬಟ್ಟೆಗಳನ್ನು ರೇಪಿಸ್ಟ್ ಗಳು ಮತ್ತೆ ಧರಿಸಿದ್ದರು.
ಆರು ಮಂದಿ ಆರೋಪಿಗಳನ್ನು ಸಾಲಾಗಿ ನಿಲ್ಲಿಸಲಾಗಿತ್ತು. ಅತ್ಯಾಚಾರ ಎಸಗಿದ ರೇಪಿಸ್ಟ್ ಗಳು ಇವರೆ ಎಂದು ಹೇಳಿದ ಸಂತ್ರಸ್ತೆ ಅವರ ಗುರುತು ಹಿಡಿದಳು. ಅತ್ಯಾಚಾರಿಗಳ ಆ ದಿನದ ವರ್ತನೆ, ತೊಟ್ಟ ಬಟ್ಟೆ, ಅವರು ಬಂದಿದ್ದ ವಾಹನ, ಪಾನ ಮತ್ತೆ ಸೇರಿದಂತೆ ಇವೇ ಹಲವು ಮಾಹಿತಿಗಳನ್ನು ತನಿಖಾಧಿಕಾರಿಗಳಿಗೆ ನೀಡಿದಳು. ಈ ವೇಳೆ ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾಪ್ರಸನ್ನ ಉಪಸ್ಥಿತರಿದ್ದರು.