ಮೈಸೂರು : ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ದಲ್ಲಿ ಭಾಗವಹಿಸಲೆಂದು ಆಗಮಿಸಿರುವ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುಗೆ ಶುಕ್ರವಾರ ಮರದ ಅಂಬಾರಿ ತಾಲೀಮು ನಡೆಸಲಾಯಿತು.
ಇಷ್ಟು ದಿನಗಳ ಕಾಲ ಬೆನ್ನ ಮೇಲೆ ನೂರಾರು ಕೆಜಿ ಮರಳಿನ ಮೂಟೆಯನ್ನು ಹೊತ್ತು ಯಶಸ್ವಿಯಾಗಿ ತಾಲೀಮು ನಡೆಸಿದ ಅಭಿಮನ್ಯು ಇದೀಗ 750 ಕೆ.ಜಿ.ತೂಕದ ಮರದ ಅಂಬಾರಿ ಯನ್ನು ಬೆನ್ನ ಮೇಲೆ ಹೊತ್ತುಕೊಂಡು ತಾಲೀಮು ನಡೆಸಿದ.
ಅರಮನೆಯ ಆವರಣದಲ್ಲಿ ಜಂಬೂಸವಾರಿ ಹಾದು ಹೋಗುವ ಮಾರ್ಗದಲ್ಲಿ ಮರದ ಅಂಬಾರಿ ತಾಲೀಮು ನ್ನು ನಿರಾಯಾಸವಾಗಿ ನಡೆಸಿದ ಆತನಿಗೆ ಗಜಪಡೆ ಸಾಥ್ ನೀಡಿದವು.