ಮೈಸೂರು : ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಆ.24, ಚಾಮುಂಡಿಬೆಟ್ಟದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಇಂದು ಮೈಸೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕರು ಪತ್ರಿಕಾ ಘೋಷ್ಠಿ ಕರೆದು ಮಾಹಿತಿ ನೀಡಿದರು
ಈ ವರೆಗೂ ಸಂತ್ರಸ್ತಯಿಂದ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ, ಅಂದು ಜೊತೆ ಇದ್ದ ಆಕೆಯ ಸ್ನೇಹಿತನ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸತತ 84 ಗಂಟೆಗಳ ಕಾರ್ಯಾಚರಣೆ ನಂತರ ಆರೋಪಿಗಳನ್ನು ಪೊಲೀಸರು ಮಟ್ಟ ಹಾಕಿದ್ದಾರೆ.
ಮೊದಲಿಗೆ ಆರೂಪಿಗಳೆಲ್ಲರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎಂದು ಭಾವಿಸಿದ್ದರು ಆದರೆ ನಂತರ ಅವರೆಲ್ಲರೂ ತಮಿಳುನಾಡು ಮೂಲದವರು ಹಾಗೂ ಎಲ್ಲರೂ ದಿನಗೂಲಿ ನೌಕರರು ಎಂದು ತಿಳಿದುಬಂದಿದೆ.
ಈ ಐವರು ಆರೂಪಿಗಳಲ್ಲಿ ಒಬ್ಬನು ಬಾಲಾಪರಾಧಿಯಾಗಿದ್ದು ಅವರೆಲ್ಲರೂ ಕೆಲಸದ ಮೇಲೆ ಪದೇ ಪದೇ ಮೈಸೂರಿಗೆ ಬರುತ್ತಿದ್ದರು.
ಮಂಗಳವಾರವೂ ಸಹ ಮೈಸೂರಿಗೆ ಕೆಲಸದ ಮೇಲೆ ಬಂದಿದ್ದ ಆರೋಪಿಗಳು 7 ಗಂಟೆಯ ಸುಮಾರಿಗೆ ಪಾರ್ಟಿ ಮಾಡಿ ವಾಪಸ್ಸು ಹೋಗುವಾಗ ಈ ದುಕೃತ್ಯ ಎಸಗಿದ್ದಾರೆ . ಬಂಧಿತ ಆರೋಪಿಗಳಲ್ಲಿ ಕೆಲವರು ಕ್ರಿಮಿನಲ್ ಹಿನ್ನಲೆಯುಳ್ಳವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳು ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತನಲ್ಲಿ 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸರಿಗೆ 5 ಲಕ್ಷ ರೂಪಾಯಿ ಬಹುಮಾನವನ್ನು ರಾಜ್ಯ ಮಹಾ ನಿರ್ದೇಶಕ ಪ್ರವೀಣ್ ಸೂದ್ ಘೋಷಿಸಿದರು.