News Karnataka Kannada
Saturday, April 27 2024
ಮೈಸೂರು

ಕಾದಂಬರಿ ಆಧಾರಿತ `ಪರ್ವ’ ನಾಟಕ ಪ್ರದರ್ಶನ ಸೆ.4 ರಿಂದ ಮತ್ತೆ ಪ್ರಾರಂಭ

New Project (9)
Photo Credit :

ಮೈಸೂರು: ಖ್ಯಾತ ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪನವರ ಕಾದಂಬರಿ ಆಧಾರಿತ `ಪರ್ವ’ ನಾಟಕ ಪ್ರದರ್ಶನ ಸೆ.4 ರಿಂದ ಮತ್ತೆ ಪ್ರಾರಂಭವಾಗಲಿದೆ.

ಡಾ.ಎಸ್.ಎಲ್.ಭೈರಪ್ಪನವರ ಪರ್ವ ಕಾದಂಬರಿಯನ್ನು ಮಹಾ ರಂಗಪ್ರಯೋಗವಾಗಿ ಪ್ರಕಾಶ್ ಬೆಳವಾಡಿ ರಂಗರೂಪಗೊಳಿಸಿ, ನಿರ್ದೇಶಿಸಿದ್ದಾರೆ. `ಪರ್ವ’ ಮಹಾ ರಂಗಪ್ರಯೋಗದ ಯಶಸ್ವಿ ಪ್ರದರ್ಶನ ನೀಡಿ, ದೇಶದಾದ್ಯಂತ ದೊಡ್ಡ ಗಮನ ಸೆಳೆದಿತ್ತು. ಆದರೆ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ಕಾರಣದಿಂದ ಇದರ ಪ್ರದರ್ಶನ ಸ್ಥಗಿತಗೊಂಡಿತ್ತು. ಆ ಸಮಯದಲ್ಲಿ 7 ಪ್ರದರ್ಶನಗಳು ಮಾತ್ರ ಆಗಿತ್ತು.

ಇದೀಗ ನಿರಂತರ ತಾಲೀಮಿನ ನಂತರ ಸೆಪ್ಟಂಬರ್ 4 ಮತ್ತು 05 ರಂದು ಮತ್ತೆ ಪರ್ವ ನಾಟಕ ಪ್ರದರ್ಶನಗೊಳ್ಳಲಿದೆ. ಇನ್ನು ಮುಂದೆ ಪ್ರತಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ 10 ಗಂಟೆಗೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಈ ನಾಟಕ ಪ್ರದರ್ಶನ ನಡೆಯಲಿದೆ. ಮುಂಗಡ ಟಿಕೆಟ್‌ಗಳನ್ನು ರಂಗಾಯಣದ `ಪರ್ವ’ ಕುಟೀರದಲ್ಲಿ ಕಾಯ್ದಿರಿಸಬಹುದಾಗಿದೆ ಮತ್ತು ಸಂಘ ಸಂಸ್ಥೆಗಳು, ವಿದ್ಯಾಸಂಸ್ಥೆಗಳು ಇಡೀ ಪ್ರದರ್ಶನವನ್ನು ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.

ಎಂದಿನoತೆ ನಾಟಕದಲ್ಲಿ 4 ವಿರಾಮಗಳಿದ್ದು, ಈ ವಿರಾಮಗಳಲ್ಲಿ ಪ್ರೇಕ್ಷಕರಿಗೆ ಉಪಹಾರ ಮತ್ತು ಚಹಾ ಮತ್ತು ಮಧ್ಯಾಹ್ನದ ಲಘು ಉಪಹಾರದ ವ್ಯವಸ್ಥೆಯ ಅವಕಾಶ ಕಲ್ಪಿಸಲಾಗಿದೆ. ಟಿಕೆಟ್ ದರ ರೂ.250 ಗಳಾಗಿದ್ದು, ಕೋವಿಡ್-19ರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ರಂಗಾಯಣದ ನಿರ್ದೇಕ ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು