ಮಂಗಳೂರು: ನಗರದಲ್ಲಿ ಭಾರಿ ಮಳೆಗೆ ತುಕ್ಕು ಹಿಡಿದ ವಿದ್ಯುತ್ ತಂತಿ ಕಡಿದು ಬಿದ್ದ ಪರಿಣಾಮ ಇಬ್ಬರು ದಾರುಣ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ರೊಸಾರಿಯೊ ಶಾಲಾ ಹಿಂಭಾಗದಲ್ಲಿ ನಡೆದಿದೆ.
ಉಪ್ಪಿನಂಡಿ ನಿವಾಸಿ ದೇವರಾಜ್ ಗೌಡ, ರಾಜು ಪಾಲ್ಯ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಆಟೋ ಚಾಲಕ ವಾಹನ ನಿಲ್ಲಿಸಿ ವಾಹನ ತೊಳೆಯಲು ಹೋದಾಗ ಘಟನೆ ಸಂಭವಿಸಿದೆ. ತಂತಿ ತುಂಡಾ ಆಟೋ ಚಾಲಕನ ಮೇಲೆ ಬಿದ್ದಿದ್ದು, ಆತನ ರಕ್ಷಣೆಗೆ ಮುಂದಾದ ಸ್ನೇಹಿತ ಕೂಡ ಪ್ರಾಣ ಕಳೆದುಕೊಂಡಿದ್ದಾರೆ.
ತಂತಿ ತುಕ್ಕು ಹಿಡಿದು ತುಂಡಾಗಿ ಬಿದ್ದಿದೆ ಎಂದು ಸ್ಥಳೀಯರ ಆರೋಪಿಸಿದ್ದಾರೆ. ಸ್ಥಳಕ್ಕೆ ಮೆಸ್ಕಾಂ ಮನಪ ಅಧಿಕಾರಿಗಳು ದೌಡಯಿಸಿದ್ದಾರೆ.
Ad