ಮಂಗಳೂರು : 2018ರ ವಿಧಾನಸಭಾ ಚುನಾವಣೆ ಸಂದರ್ಭ, ನೇತ್ರಾವತಿ ನದಿಗೆ ಕೊಳಚೆ ನೀರು ಸೇರುತ್ತಿರುವುದು ಹಾಗೂ ಅದೇ ನೀರನ್ನು ಲಿಫ್ಟ್ ಮಾಡಿ ಮಂಗಳೂರಿನ ಜನರು ಕುಡಿಯುತ್ತಿದ್ದಾರೆ ಎಂಬ ವಿಷಯ ಚುನಾವಣಾ ಪ್ರಚಾರದ ವಸ್ತುವಾಗಿತ್ತು. ಅದಾಗಿ ಮತ್ತೊಂದು ಚುನಾವಣೆ ಬಂತು, ವರ್ಷಗಳು ಏಳು ಉರುಳಿದರೂ ಸಮಸ್ಯೆ ಇನ್ನೂ ಜೀವಂತವಿದೆ.
ಮಂಗಳೂರಿಗೆ ಶುದ್ಧೀಕರಿಸಿದ ಜಲವನ್ನು ನೀಡಲಾಗುತ್ತದೆ ಎಂದರೂ ಅದಕ್ಕೂ ಮುನ್ನ ಸಂಪೂರ್ಣವಾಗಿ ಕೊಚ್ಚೆ ನೀರನ್ನು ನದಿಗೆ ಹರಿಯಬಿಡಲಾಗುತ್ತಿರುವುದು ಆತಂಕಕಾರಿ. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೆ ಇಲ್ಲಿನ ಸುಮಾರು 10 ಸಾವಿರಕ್ಕೂ ಅಧಿಕ ಮನೆಗಳ ಕೊಳಚೆ ನೀರು ನದಿಯ ಒಡಲು ಸೇರುತ್ತಿದೆ.
2018ರ ವಿಧಾನಸಭಾ ಚುನಾವಣೆ ಸಂದರ್ಭ, ನೇತ್ರಾವತಿ ನದಿಗೆ ಕೊಳಚೆ ನೀರು ಸೇರುತ್ತಿರುವುದು ಹಾಗೂ ಅದೇ ನೀರನ್ನು ಲಿಫ್ಟ್ ಮಾಡಿ ಮಂಗಳೂರಿನ ಜನರು ಕುಡಿಯುತ್ತಿದ್ದಾರೆ ಎಂಬ ವಿಷಯ ಚುನಾವಣಾ ಪ್ರಚಾರದ ವಸ್ತುವಾಗಿತ್ತು. ಅದಾಗಿ ಮತ್ತೊಂದು ಚುನಾವಣೆ ಬಂತು, ವರ್ಷಗಳು ಏಳು ಉರುಳಿದರೂ ಸಮಸ್ಯೆ ಇನ್ನೂ ಜೀವಂತವಿದೆ. ಮಂಗಳೂರಿಗೆ ಶುದ್ಧೀಕರಿಸಿದ ಜಲವನ್ನು ನೀಡಲಾಗುತ್ತದೆ ಎಂದರೂ ಅದಕ್ಕೂ ಮುನ್ನ ಸಂಪೂರ್ಣವಾಗಿ ಕೊಚ್ಚೆ ನೀರನ್ನು ನದಿಗೆ ಹರಿಯಬಿಡಲಾಗುತ್ತಿರುವುದು ಆತಂಕಕಾರಿ.
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೆ ಇಲ್ಲಿನ ಸುಮಾರು 10 ಸಾವಿರಕ್ಕೂ ಅಧಿಕ ಮನೆಗಳ ಕೊಳಚೆ ನೀರು ನದಿಯ ಒಡಲು ಸೇರುತ್ತಿದೆ. ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್ಟಿಪಿ)ಗಳ ನಿರ್ಮಾಣಕ್ಕೆ ಜಾಗದ ವಿವಾದ ಅಂತಿಮಗೊಳ್ಳದೇ ಇರುವುದರಿಂದ ಒಳಚರಂಡಿ ವ್ಯವಸ್ಥೆ ಅನುಷ್ಠಾನ ಸಾಧ್ಯವಾಗಿಲ್ಲ. ಹಲವು ವರ್ಷಗಳ ಹಿಂದೆ ಪೈಪ್ಲೈನ್ ಅಳವಡಿಸಿ ಅಲ್ಲಲ್ಲಿ ಮ್ಯಾನ್ಹೋಲ್ಗಳನ್ನು ಮಾಡಿದ್ದರೂ ವ್ಯರ್ಥವಾಗಿದೆ.
ಮೋರಿ, ರಾಜಕಾಲುವೆ ಮೂಲಕ ನದಿಗೆ
ಬಡ್ಡಕಟ್ಟೆ, ಕೆಳಗಿನ ಪೇಟೆ, ಕಂಚಿಗಾರ ಪೇಟೆ, ಗೂಡಿನಬಳಿ, ಕೈಕುಂಜೆ, ಪಾಣೆಮಂಗಳೂರು, ಪರ್ಲಿಯಾ, ತಲಪಾಡಿವರೆಗೆ ಸುಮಾರು 20ಕ್ಕೂ ಅಧಿಕ ಕಡೆಗಳಲ್ಲಿ ಮೋರಿ, ರಾಜಕಾಲುವೆಗಳ ಮೂಲಕ ಹರಿದು ಹೋಗುವ ಕೊಳಚೆ ನೀರು ನೇರವಾಗಿ ನದಿ ಸೇರುತ್ತಿದೆ.
ಮನೆಗಳು, ವಸತಿ ಸಮುಚ್ಚಯಗಳ ಶೌಚಾಲಯಗಳ ನೀರು, ಹೋಟೆಲ್ ತ್ಯಾಜ್ಯಗಳು, ಕೋಳಿ ಸಹಿತ ಮಾಂಸದಂಗಡಿಗಳ ನೀರು ಸೇರಿದಂತೆ ಎಲ್ಲ ರೀತಿಯ ಕೊಳಚೆ ನೀರು ಕೂಡ ನೇರವಾಗಿ ನದಿ ಸೇರುತ್ತಿದೆ ಎಂದು ಸ್ಥಳೀಯರು ಆಪಾದಿಸಿದ್ದಾರೆ. ಗಮನಾರ್ಹ ಅಂಶವೆಂದರೆ, ತಲಪಾಡಿಯ ಕೂಗಳತೆಯ ದೂರದಲ್ಲಿ ತುಂಬೆ ವೆಂಟೆಡ್ ಡ್ಯಾಮ್ ಮೂಲಕ ನೀರನ್ನು ಲಿಫ್ಟ್ ಮಾಡಲಾಗುತ್ತಿದೆ. ಡ್ಯಾಮ್ ಇರುವ ಕಾರಣಕ್ಕೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ವ್ಯಾಪಕ ಪ್ರಮಾಣದಲ್ಲಿಕೊಳಚೆ ನೀರು ನದಿ ಸೇರಿದ್ದರೂ ಅರಿವಿಗೆ ಬಾರದ ಸ್ಥಿತಿ ಇದೆ.

