ಪುತ್ತೂರು : ಕರಾವಳಿಯಲ್ಲಿ ಭಾರೀ ಮಳೆಯ ಪರಿಣಾಮದಿಂದಾಗಿ ಧರೆ ಕುಸಿದಿರುವ ಘಟನೆ ಪುತ್ತೂರಿನ ಸಿಂಗಾಣಿ ಪ್ರದೇಶದಲ್ಲಿ ನಡೆದಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಮಳೆಯ ಪರಿಣಾಮದಿಂದಾಗಿ ಪುತ್ತೂರಿನ ಸಿಂಗಾಣಿಯಲ್ಲಿ ಗುಡ್ಡ ಪ್ರದೇಶದಲ್ಲಿ ಹಲವಾರು ಮನೆಗಳು ಅಪಾಯದಂಚಿನಲ್ಲಿ ಸಿಲುಕಿಕೊಂಡಿದೆ.
ಪುತ್ತೂರಿನಾದ್ಯಂತ ಭಾರೀ ಧಾರಾಕಾರ ಮಳೆಗೆ ಧರೆ ಕುಸಿತ ಸಂಭವಿಸಿದೆ. ಧರೆ ಕುಸಿದ ಸಿಂಗಾಣಿ ಪ್ರದೇಶಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದ್ದಾರೆ. ಸಂಬಂಧಪಟ್ಟ ನಗರಸಭಾ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸಂಜೀವ ಮಠಂದೂರು ಸೂಚಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
Ad