ಮಂಗಳೂರು: ಕರ್ನಾಟಕದ ಯುವ ಜನತೆಯಲ್ಲಿ HIV ಸೋಂಕು ಏರಿಕೆ ಆತಂಕ ಸೃಷ್ಟಿಯಾಗಿದ್ದು, 7000ಕ್ಕೂ ಅಧಿಕ ಯುವ ಜನಾಂಗದಲ್ಲಿ HIV ಪತ್ತೆ ಎಂದು ವರದಿ ವಿಚಾರವಾಗಿ ಮಂಗಳೂರಿನಲ್ಲಿ ಆರೋಗ್ಯ ಸಚಿವ ಯು ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.

ಕಡ್ಡಾಯ ಎಚ್ ಐ ವಿ ಪರೀಕ್ಷೆ ಮಾಡಬೇಕು ಎಂದು ಯಾವುದೇ ಆದೇಶ ಎಲ್ಲಿಯೂ ಕೊಟ್ಟಿಲ್ಲ. ಕಡ್ಡಾಯ ಟೆಸ್ಟ್ ನಡೆಸಲು ಸಾಧ್ಯವೂ ಇಲ್ಲ. ಕೆಲವು ಕಡೆ ಕ್ಯಾಂಪ್ ಮಾದರಿಯಲ್ಲಿ ಮಾಡುತ್ತೇವೆ, ಆದರೆ ಕಡ್ಡಾಯ ಮಾಡಬೇಕು ಎಂದಿಲ್ಲ. ಹಿಂದಿನ ಅನುಪಾತವಿದೆ ಹೊರತು ಹೆಚ್ಚು ಅಥವಾ ಕಡಿಮೆಯಾಗಿಲ್ಲ. ನನ್ನ ಇಲಾಖೆಯ ಅಧಿಕಾರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದರು. ನಾಳೆ ಮತ್ತೆ ಸಂಪೂರ್ಣ ಮಾಹಿತಿ ತಗೊಳುತ್ತೇನೆ. ಯಾಕೆ ಈ ರೀತಿ ಸುದ್ದಿ ಹರಡಿತು ಎಂದು ಪರಿಶೀಲಿಸುತ್ತೇನೆ ಎಂದರು.

View this post on Instagram

A post shared by News Karnataka (@newskarnataka)