ಮಂಗಳೂರು : ಮರವೂರು ಕೆಂಜಾರು ಬಳಿ ಗೋವುಗಳನ್ನು ದರೋಡೆ ಮಾಡಿ – ಗೋವುಗಳನ್ನು ಹತ್ಯೆ ಮಾಡಿ ತ್ಯಾಜ್ಯಗಳನ್ನ ಬಿಸಾಕಿದ್ದು ಗೋ ದರೋಡೆ ಜಾಲವನ್ನು ಮಟ್ಟ ಹಾಕುವಂತೆ ಆಗ್ರಹಿಸಿ ಮತ್ತು ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ಕ್ರೌರ್ಯವನ್ನು ಖಂಡಿಸಿ ಮಂಗಳವಾರ ಮಂಗಳೂರಿನ ಮಿನಿವಿಧಾನ ಎದುರು ವಿಶ್ವ ಹಿಂದೂ ಪರಿಷತ್, ಭಜರಂಗದಳ ಮಂಗಳೂರು ವತಿಯಿಂದ ಪ್ರತಿಭಟನೆ ನಡೆಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡಿದ ಮುರಳಿಕೃಷ್ಣ ಹಸಂತಡ್ಕ ನಿಕಟಪೂರ್ವ ಪ್ರಾಂತ ಗೋರಕ್ಷ ಪ್ರಮುಖ್ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ಕ್ರೌರ್ಯವನ್ನು ಖಂಡಿಸಿ ಮರವೂರು ಕೆಂಜಾರು ಬಳಿ ಗೋವುಗಳನ್ನು ದರೋಡೆ ಮಾಡಿ – ಗೋವುಗಳನ್ನು ಹತ್ಯೆ ಮಾಡಿ ತ್ಯಾಜ್ಯಗಳನ್ನ ಬಿಸಾಕಿದ್ದು ಗೋ ದರೋಡೆ ಜಾಲವನ್ನು ಮಟ್ಟ ಹಾಕುವಂತೆ ಆಗ್ರಹಿಸಿ ಆಕ್ರೋಶದ ಮಾತುಗಳನ್ನ ಆಡಿದರು.

ಎಚ್ ಕೆ ಪುರುಷೋತ್ತಮ ಜಿಲ್ಲಾಧ್ಯಕ್ಷರು, ಶಿವಾನಂದ್ ಮೆಂಡನ್ ವಿಭಾಗ ಕಾರ್ಯದರ್ಶಿ, ಭುಜಂಗ ಕುಲಾಲ್ ಪ್ರಾಂತ ಸಹಸಂಯೋಜಕರು, ಮುರಳಿಕೃಷ್ಣ ಹಸಂತಡ್ಕ ನಿಕಟಪೂರ್ವ ಪ್ರಾಂತ ಗೋರಕ್ಷ ಪ್ರಮುಖ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.