Bengaluru 27°C
Ad

ರಾಷ್ಟ್ರೀಯ ವೈದ್ಯರ ದಿನ : ಕೆಎಂಸಿ ಆಸ್ಪತ್ರೆ ವತಿಯಿಂದ ಪ್ರಮುಖ ವೈದ್ಯರಿಗೆ ಸನ್ಮಾನ

ನಗರದ ಪ್ರಮುಖ ಆಸ್ಪತ್ರೆಯಲ್ಲಿ ಒಂದಾದ ಕೆಎಂಸಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನ ಪ್ರಯುಕ್ತ ಪ್ರಮುಖ ವೈದ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಮಂಗಳೂರು : ನಗರದ ಪ್ರಮುಖ ಆಸ್ಪತ್ರೆಯಲ್ಲಿ ಒಂದಾದ ಕೆಎಂಸಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನ ಪ್ರಯುಕ್ತ ಪ್ರಮುಖ ವೈದ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

Ad
300x250 2

ಪಣಂಬೂರಿನ ಡಾ.ಕೆ.ಯೋಗೀಶ್‌ ಇವರು ಜಂಟಿ ಪ್ರಧಾನ ವ್ಯವಸ್ಥಾಪಕ ಮತ್ತು ವೈದ್ಯಕೀಯ ಸೇವೆಗಳು ನಿರ್ವಹಿಸುತ್ತಾರೆ. ಇವರು ಎಂಬಿಬಿಎಸ್, ಡಿಎಲ್ಒ (ಇಎನ್ಟಿ), ಎಎಫ್ಐಎಚ್ (ಫೆಲೋಶಿಪ್) ಪೂರ್ಣಗೊಳಿಸಿದ್ದಾರೆ.

ಟ್ರೂಮೆಡ್ ಹೆಲ್ತ್ ಕೇರ್ ನ ಸ್ಥಾಪಕ ಮತ್ತು ನಿರ್ದೇಶಕ ಡಾ.ಮುನಾವರ್ ಧನೀಶ್ ಮೊಹಮ್ಮದ್ ಅವರಿಗೂ ಸನ್ಮಾನಿಸಲಾಯಿತು. ಇವರು ಎಂಬಿಬಿಎಸ್, ಎಂಡಿ ಪೂರ್ಣಗೊಳಿಸಿದ್ದುಕಾಸರಗೋಡಿನ ವಿಂಟಚ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್ ನಲ್ಲಿ ವೈದ್ಯಕೀಯ ನಿರ್ದೇಶಕ ಮತ್ತು ಪ್ರಮುಖ ಸಲಹೆಗಾರರಾಗಿ ಸೇವೆ ಸಲ್ಲಿಸಿತ್ತಿದ್ದಾರೆ.

ಜನನಿ ಅರ್ಥ್ & ಇರುವೆ ಡೇ ಸೆಂಟರ್‌ನಲ್ಲಿ ಸೇವೆ ಸಲ್ಲಿಸಿತ್ತಿರುವ ದೀಪಕ್ ಕೆ ನಾಯಕ್, ಡಾ. ಅವರನ್ನು ಸನ್ಮಾನಿಸಲಾಯಿತು.ಎಂಬಿಬಿಎಸ್, ಡಾರ್ತ್ ನ್ನು ಪೂರ್ಣಗೊಳಿಸಿದ್ದಾರೆ. ಡಾ.ಸಾತ್ವಿಕ್ ಜೈನ್,ಎಸ್.ಡಿ.ಎಂ ಆಸ್ಪತ್ರೆ ಉಜಿರೆಯ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಮತ್ತು ಐಎಂಎ ಬೆಳ್ತಂಗಡಿಯ ಪ್ರಸ್ತುತ ಕಾರ್ಯದರ್ಶಿ ಇವರಿಗೂ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕೆಎನ್ಎಚ್ ಆಸ್ಪತ್ರೆ, ಉಪ್ಪಳ ಇಲ್ಲಿ ಸೇವೆ ಸಲ್ಲಿಸಿತ್ತಿರುವ ವೀರೇಂದ್ರ ಕೆ.ಎಚ್.ಎಂಬಿಬಿಎಸ್, ಎಂಡಿ, ಇವರಿಗೂ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಪ್ರಸಾದ್, ಡಾ. ಬಿ.ಶೆಟ್ಟಿ ವಿಜಯಾ ಪಾಲಿಕ್ಲಿನಿಕ್ ಹೊಸ್ಮಾರ್ ಇವರಿಗೂ ಸನ್ಮಾನಿಸಲಾಯಿತು.

ಅಗತ್ಯವಿರುವವರಿಗೆ ಭರವಸೆಯ ಕಿರಣವಾಗಿ ಸೇವೆ ಸಲ್ಲಿಸುತ್ತಿರುವ ಈ ವೈದ್ಯರು ನೈತಿಕ ಅಭ್ಯಾಸ ಮತ್ತು ಸಮುದಾಯಕ್ಕೆ ಸೇವೆಯ ರಕ್ಷಕರಾಗಿದ್ದಾರೆ ಗೌರವಾನ್ವಿತ ವೈದ್ಯರು ತಮ್ಮ ರೋಗಿಗಳ ಅಗತ್ಯಗಳಿಗಾಗಿ ಕೆಎಂಸಿ ಆಸ್ಪತ್ರೆಯೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ಉತ್ಕೃಷ್ಟತೆಗೆ ನಮ್ಮ ಬದ್ಧತೆಯಲ್ಲಿ ಅವರ ನಂಬಿಕೆಯು ರೋಗಿಗಳಿಗೆ ಉತ್ತಮ ಆರೈಕೆಯನ್ನು ನೀಡಲು ಕಾರಣವಾಗಿದೆ

ಇನ್ನು ಈ ಕಾರ್ಯಕ್ರಮದಲ್ಲಿ ಉನ್ನಿ ಕೃಷ್ಣನ್ ಬಿ., ಡೀನ್-ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮಂಗಳೂರು, ಸಗೀರ್ ಸಿದ್ದಿಕಿ, ಕೆಎಂಸಿ ಆಸ್ಪತ್ರೆಯ ಮಂಗಳೂರು ಪ್ರಾದೇಶಿಕ ಸಿಒಒ ನರಸಿಂಹ ಪೈ, ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ನರಸಿಂಹ ಪೈ ಹಾಗೂ ಇತರ ಹಿರಿಯ ವೈದ್ಯರು ಉಪಸ್ಥಿತರಿದ್ದರು.

 

Ad
Ad
Nk Channel Final 21 09 2023
Ad