ಮುಲ್ಕಿ : ಕೆಮ್ರಾಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಂಜ, ಕೊಯ್ಕುಡೆ, ಉಳ್ಯ, ಬೈಲಗುತ್ತು, ಮೊಗಪಾಡಿ ನೆರೆಪೀಡಿತ ಪ್ರದೇಶಕ್ಕೆ ಕಳೆದ ಎರಡು ದಿವಸದಿಂದ ಸತತವಾಗಿ ಮಳೆ ಸುರಿದರಿಂದ ಕೃಷಿ ಭೂಮಿ ಸಂಪೂರ್ಣವಾಗಿ ನಾಶವಾಗಿದೆ.
ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕೆಮ್ರಾಲ್ ಪಂಚಾಯತ್ ಅಧ್ಯಕ್ಷರಾದ ಮಯ್ಯಧಿ ಪಕ್ಷಿಕೆರೆ, ಪಂಚಾಯತ್ ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜಾ, ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಪಂಜ,
ಕೇಶವ ಪೂಜಾರಿ, ಪಂಚಾಯತ್ ಸಿಬ್ಬಂದಿಯಾದ ಕೇಶವ ದೇವಾಡಿಗ, ಪ್ರಜ್ವಲ್ ಗ್ರಾಮಸ್ಥರಾದ ಸಂತೋಷ್ ಶೆಟ್ಟಿ ಪಂಜದ ಗುತ್ತು, ಗಣೇಶ್ ಶೆಟ್ಟಿ ಪಂಜ, ಮತ್ತಿತರು ಉಪಸ್ಥಿತರಿದ್ದರು
Ad