ಪುತ್ತೂರು: ಸಂಸ್ಕಾರ ಭಾರತೀ ಪುತ್ತೂರು ವಿಭಾಗದ ಆಶ್ರಯದಲ್ಲಿ, ಪುತ್ತೂರಿನ ರೇಡಿಯೋ ಪಾಂಚಜನ್ಯ ಮತ್ತು ಇನ್ನರ್ ವೀಲ್ ಕ್ಲಬ್ ಸಹಯೋಗದೊಂದಿಗೆ ನಡೆದ ತಾಲೂಕು ಮಟ್ಟದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ವಿದ್ಯಾರ್ಥಿಗಳು ಬಹುಮಾನ ಗಳಿಸಿರುತ್ತಾರೆ.
News Photo Deshabhaktigeethe Prize Winner Raksha S S

ಐದನೇ ತರಗತಿಯಿಂದ ಏಳನೇ ತರಗತಿಯ ವಿಭಾಗದಲ್ಲಿ ಎಂ. ಆದಿಶ್ರೀ, ಸ್ಪಂದನ ಭಟ್ ಎಂ, ಜೀವಿಕಾ ಪಿ ಭಟ್, ರೋಚನ ಎ, ರೋಚಿಕ ಎ, ಮಯೂರ್ ಎಸ್ ಮಯ್ಯ, ಶ್ರೀಯ ವಿ ಎಂ ಇವರು ಪ್ರಥಮ ಸ್ಥಾನ ಪಡೆದಿರುತ್ತಾರೆ. ಎಂಟನೇ ತರಗತಿಯಿಂದ ಒಂಬತ್ತನೇ ತರಗತಿಯ ವೈಯಕ್ತಿಕ ವಿಭಾಗದಲ್ಲಿ ರಕ್ಷಾ ಎಸ್ ಎಸ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.