ದಕ್ಷಿಣ ಕನ್ನಡ : ಪುತ್ತೂರಿನಲ್ಲಿ ಮದುವೆ ಮುಗಿಸಿ ಹೆಬ್ರಿಗೆ ಹೋಗುವ ಮದುವೆಯ  ಖಾಸಗಿ ಬಸ್ಸನ್ನು ಮೂಡಬಿದಿರೆಯ ಹೋಟೆಲ್ ಗೋಳಿಬಜೆ ಸೆಂಟರ್ ನಲ್ಲಿ ಚಹಾ ಕುಡಿಯುವುದಕ್ಕಾಗಿ  ನಿಲ್ಲಿಸಿದ್ದರು.

ಬಸ್ಸಿನ ಡ್ರೈವರ್ ಬಸ್ಸನ್ನು ಗಮನಿಸಿದ ಸಂದರ್ಭದಲ್ಲಿ ಒಂದು ಬೃಹತ್ ಗಾತ್ರದ ಹಾವು  ಬಸ್ಸಿನೊಳಗೆ ಇರುವುದು ತಿಳಿಯಿತು. ಈ ಸಮಯದಲ್ಲಿ ಸ್ಥಳಿಯರ ಸಹಕಾರದಿಂದ ಹಾವು ಹಿಡಿಯೋರನ್ನು ಸಂಪರ್ಕಿಸಿದರು.

ತದನಂತರ ಅಲ್ಲಿಗೆ ಹಾವು ಹಿಡಿಯುವ  ದಿನೇಶ್ ಬಂದು ಬಸ್ಸಿನೊಳಗೆ ಮಲಗಿದ್ದ ಹಾವನ್ನ ಹೊರತೆಗೆದರು.  ಗಡ್ಡ ದಿನೇಶ್ ಪಡುಕೊಣಾಜೆ&ಟೀಮ್ ಅವರಿಗೆ ಈ ವೇಳೆ ಧನ್ಯವಾದ ತಿಳಿಸಿದರು.