Bengaluru 23°C
Ad

ಮಳೆಯಿಂದಾಗಿ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು

Baby Python

ಮಂಗಳೂರು: ಮಳೆ ಹಿನ್ನಲೆ ಮಂಗಳೂರು ನಗರದ ಕೊಡಿಯಾಲ್ ಬೈಲ್ ಬಳಿ ಇರುವ ಯೂನಿಯನ್ ಬ್ಯಾಂಕ್​ನ ಎಸಿ ಯೊಳಗಡೆ ಹೆಬ್ಬಾವು ಮರಿ ಸೇರಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಇನ್ನು ಹೆಬ್ಬಾವಿನ ಮರಿಯನ್ನ ನೋಡುತ್ತಿದ್ದಂತೆ ಕಂಗಾಲಾದ ಬ್ಯಾಂಕ್​ ಸಿಬ್ಬಂದಿ, ಸ್ಥಳೀಯ ಉರಗ ತಜ್ಞ ಗಂಗೇಶ್ ಬೋಳಾರ್ ಅವರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅವರು, ಎಸಿ ಪ್ಯಾನಲ್‌ ಒಳಗಿದ್ದ ಹೆಬ್ಬಾವು ಮರಿಯನ್ನ ಹೊರಗೆ ತೆಗೆದು ರಕ್ಷಿಸಿದ್ದಾರೆ. ಬಳಿಕ ಬ್ಯಾಂಕ್​ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನು ಈ ಹೆಬ್ಬಾವು‌ ಮರಿ ಎಸಿ ಔಟ್ ಡೋರ್​​ನ ಕೇಬಲ್ ಮೂಲಕ ಒಳ ಬಂದಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಉರಗ ತಜ್ಞ ಗಂಗೇಶ್ ಹೇಳುವಂತೆ ಇದಕ್ಕೆ 180 ಹಲ್ಲುಗಳಿದ್ದು, ಇದು ಕಚ್ಚುತ್ತದೆ. ಆದರೆ, ಇದರಲ್ಲಿ ಯಾವುದೇ ವಿಷ ಇರುವುದಿಲ್ಲವಂತೆ. ಒಟ್ಟಿನಲ್ಲಿ ಮಂಗಳೂರಿನ ಬ್ಯಾಂಕ್​ಗೆ ಎಂಟ್ರಿ ಕೊಟ್ಟಿದ್ದ ಮರಿ ಹೆಬ್ಬಾವನ್ನು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ.

Ad
Ad
Nk Channel Final 21 09 2023
Ad