ಮೈಸೂರು: ಸಾಲಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮದಲ್ಲಿ ನಡೆದಿದೆ.

ರಮೇಶ್ 42 ಆತ್ಮಹತ್ಯೆ ಮೃತ ದುರ್ದೈವಿ. ಕೃಷಿಯ ಜೊತೆಗೆ ಪಾರ್ಟ್ ಟೈಮ್ ರಮೇಶ್ ಆಟೋ ಓಡಿಸುತ್ತಿದ್ದರು. ಕೃಷಿಗಾಗಿ ಸೊಸೈಟಿಯಲ್ಲಿ ಸಾಲ ಹಾಗೂ ಕೈ ಸಾಲ ಪಡೆದುಕೊಂಡಿದ್ದು, ಸಾಲ ತೀರಿಸಲಾಗದೆ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.