ಶಿವಮೊಗ್ಗ: ಶಿಕಾರಿಪುರದ ಶ್ರೀ ಶಿವಯೋಗಾಶ್ರಮ, ಕಾಳೇನಹಳ್ಳಿ – ಕಪ್ಪನಹಳ್ಳಿಯಲ್ಲಿ ಪೂಜ್ಯ ಲಿಂ.ರುದ್ರಮುನಿ ಮಹಾ ಶಿವಯೋಗಿಗಳ 34ನೇ ವರ್ಷದ ಪುಣ್ಯರಾಧನೆ, ಜೀವನ ದರ್ಶನ ಮತ್ತು ಪ್ರವಚನದ ಕೊನೆಯ ದಿನದ ಕಾರ್ಯಕ್ರಮದಲ್ಲಿ ರಾಜ್ಶ ಬಿಜೆಪಿ ಉಪಾಧ್ಶಕ್ಷರಾದ ಸನ್ಮಾನ್ಶ ಶ್ರೀ ಬಿ ವೈ ವಿಜಯೇಂದ್ರರವರು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸದರಾದ ಶ್ರೀ ಬಿ ವೈ ರಾಘವೇಂದ್ರಅವರು ವಹಿಸಿದ್ದರು.
ದಿವ್ಯಸಾನಿಧ್ಯವನ್ನು ಸುಕ್ಷೇತ್ರ ಕಾಳೇನಹಳ್ಳಿ ಮಠದ ಸಿದ್ದಲಿಂಗ ಮಹಾಸ್ವಾಮಿಗಳು,ಶ್ರೀಮಾನ್ ನಿರಂಜನ ಪ್ರಣವ ಸ್ವರೂಪಿ ಅಭಿನವ ಕಾಡು ಸಿದ್ದೇಶ್ವರ ಮಹಾಸ್ವಾಮಿಗಳು ನೋಣವಿನ ಕೆರೆ, ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಕೃಷಿ ಸಚಿವರಾದ ಶ್ರೀ ಬಿ ಸಿ ಪಾಟೀಲ್ ರವರು,ಶಾಸಕರಾದ ಶ್ರೀ ಬಸವರಾಜ್ ಮತ್ತಿಮೊಡ್, ಸೇರಿದಂತೆ ಮುಖಂಡರು ಹಾಗೂ ಭಕ್ತರು ಪಾಲ್ಗೊಂಡಿದ್ದರು.