News Karnataka Kannada
Wednesday, May 01 2024
ಶಿವಮೊಗ್ಗ

ಶಿವಮೊಗ್ಗ: ರಾಜ್ಯ ಬಿಜೆಪಿ ಪ್ರಶಿಕ್ಷಣ ವರ್ಗದ ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿ

State BJP's training class programme inaugurated
Photo Credit : By Author

ಶಿವಮೊಗ್ಗ: ಗುಜರಾತ್ ಚುನಾವಣೆಯ ನಂತರ ಸಚಿವ ಸಂಪುಟ ವಿಸ್ತರಣೆ ಕುರಿತು ವರಿಷ್ಠರ ಜೊತೆ ಮಾತನಾಡಿ ಮಾಧ್ಯಮದವರಿಗೆ ತಿಳಿಸಿ ನಂತರ ವಿಸ್ತರಿಸಲಾಗುವುದು ಎಂದು ಹೇಳಿರುವುದು ಮತ್ತೆ ಸಚಿವ ಸಂಪುಟಕ್ಕೆ ಸೇರಬಯಸುವ ವಿಷಯ ಗರಿಗೆದರಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು

ಇಂದು ಖಾಸಗಿ ರೆಸಾರ್ಟ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಬಿಜೆಪಿ ಪ್ರಶಿಕ್ಷಣ ವರ್ಗದ ಉದ್ಘಾಟನೆ ಕಾರ್ಯಕ್ರಮವನ್ನ ಉದ್ಘಾಟಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 2023 ಮಾರ್ಚ್ ನಿಂದ ಮೇ ತಿಂಗಳಲ್ಲಿ ಚುನಾವಣೆಗೆ ಮತದಾನ ನಡೆಯಲಿದೆ. ಗುಜರಾತ್ ಚುನಾವಣೆಯ ಫಲಿತಾಂಶ 8 ರ ನಂತರ ಪ್ರಕಟವಾಗಲಿದೆ. ಈ ಚುನಾವಣೆಯ ನಂತರ ವರಿಷ್ಠರ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂಬ ಸಿಎಂ ಮಾತು ಬಿಜೆಪಿಯ ಹಲವು ಆಕಾಂಕ್ಷಿಗಳಲ್ಲಿ ಹುರುಪು ಮೂಡಿಸಿದೆ.

ಜಿಲ್ಲೆಯ ಶರಾವತಿ ಮುಳುಗಡೆ ಸಂತ್ರಸ್ತ್ರರ ಭೂಮಿ ಸಮಸ್ಯೆ ಸಂತ್ರ್ತರ ತಲೆಯ ಮೇಲೆ ತೂಗುಕತ್ತಿಯಂತಾಗಿದೆ. ಚುನಾವಣೆಯ ವೇಳೆ ನ್ಯಾಯಾಲಯದ ಆದೇಶ ರಾಜಕೀಯ ಶಕ್ತಿಪ್ರದರ್ಶಕ್ಕೆ ಸಂತ್ರಸ್ತ್ರರ ಸಮಸ್ಯೆ ಅಸ್ತ್ರವಾಗಲಿದೆಯಾ ಅಥವಾ ರಾಜಕೀಯ ಪಕ್ಷಗಳು ಬಗೆಹರಿಸಲಿದೆಯಾ ಕಾದುನೋಡಬೇಕಿದೆ.

ಒಂದೆಡೆ ಇದೇ ವಿಷಯವನ್ನ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಪಾದಯಾತ್ರೆಗೆ ಹೊರಟಿದೆ. ಆಡಳಿತ ಪಕ್ಷ ಇದಕ್ಕೆ ಟಾಂಗ್ ಸಹ ನೀಡಲು ಮುಂದಾಗಿದೆ. ಆದರೆ ಈ ಟಾಂಗ್ ನಿಂದಾಗಿಯೇ ಸಂತ್ರಸ್ತ್ರರ ಸಮಸ್ಯೆ ರಾಜಕೀಯಗೊಂಡಿದೆ. ಇಂದು ಶಿವಮೊಗ್ಗಕ್ಜೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಹ ಶರಾವತಿ ಸಂತ್ರಸ್ತ್ರ ಸಮಸ್ಯೆ ಬಗೆಹರಿಸುವುದಾಗಿ ಮಾತನಾಡಿದ್ದಾರೆ.

ಮುಖ್ಯಮಂತ್ರಿಗಳು ಈ ಶರಾವತಿ ಸಂತ್ರಸ್ತ್ರ ಸಂಕಷ್ಟವನ್ನ ಪರಿಹರಿಸಲು ಡಿಸಿಯವರಿಗೆ ವರದಿ ನೀಡಲು ಸೂಚಿಸಿದ್ದಾರೆ. ಡಿಸಿ ವರದಿಯನ್ನ ಡಿಸೆಂಬರ್ ಮೂರನೇ ವಾರದ ಒಳಗೆ ತಲುಪಿಸಲು ಸೂಚಿಸಿರುವುದಾಗಿ ಇಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ ತಿಳಿಸಿದರು.

ಡಿಸೆಂಬರ್ ಮೂರನೇ ವಾರದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಅಧಿವೇಶನದ ಒಳಗೆ ವರದಿ ಪಡೆದು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಶರಾವತಿಯ ಮುಳುಗಡೆ ಸಂತ್ರಸ್ತ್ರರ ಸಮಸ್ಯೆಯನ್ನ ಬಿಜೆಪಿ ಬಗೆಹರಿಸಲಿದೆ. ಕೇಂದ್ರದ ಅನುಮತಿಯನ್ನ ಪಡೆದು ನ್ಯಾಯಾಲಯಕ್ಕೆ ವರದಿಯನ್ನ ಹಾಜರಿ ಪಡಿಸಲಾಗುವುದು ಎಂದರು.

ಸಿಎಂ ಹೇಳಿದಂತೆ ಸಮಸ್ಯೆ ಬಗೆಹರಿಸಲಾಗುತ್ತಾದ ಅಥವಾ ಚುನಾವಣೆಗೆ ಶರಾವತಿ ಸಂತ್ರಸ್ತ್ರರ ಸಂಕಷ್ಟ ರಾಜಕೀಯ ಅಸ್ತ್ರವಾಗಲಿದೆಯಾ ಕಾದುನೋಡಬೇಕಿದೆ. ಶರಾವತಿ ಮುಳುಗಡೆ ಸಂತ್ರಸ್ತ್ರರ ವಾಸದ ಮತ್ತು ಬೇಸಾಯದ ಭೂಮಿಯನ್ನ ರಾಜ್ಯ ಸರ್ಕಾರ ಮಾಡಿಕೊಟ್ಟಿದ್ದ ಡಿನೋಟಿ ಫಿಕೇಷನ್ ಮಾಡುವಾಗ ಕೇಂದ್ರ ಸರ್ಕಾರದ ಆದೇಶ ಪಡೆದು ನಡೆಸಿಲ್ಲ ಹಾಗಾಗಿ ಆದೇಶ ಸರಿಯಿಲ್ಲವೆಂದು ನ್ಯಾಯಾಲಯ ಆದೇಶಿರುವುದು ಉರುಳುಕತ್ತಿಯಾಗಿದೆ. ಇದು ಬಗೆಹರಿಸಲಾಗುವುದಾ ಅಥವಾ ರಾಜಕೀಯವಾಗಿಯೇ ಉಳಿಯಲಿದೆಯಾ ಕಾದುನೋಡಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು