ಶಿವಮೊಗ್ಗ: ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತರಾದ ಜಿಲ್ಲಾ ವರದಿಗಾರರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡರಿಂದ ಸನ್ಮಾನ ನಡೆಯಿತು.
ಪ್ರಜಾವಾಣಿಯ ವೆಂಕಟೇಶ್, ವಿಜಯವಾಣಿ ಪತ್ರಿಕೆಯ ಶಾಂತಕುಮಾರ್, ಅರವಿಂದ ಅಕ್ಲಾಪುರ, ನಾವಿಕ ಪತ್ರಿಕೆಯ ಸಂಪಾದಕಿ ಲತಾ ರಂಗಸ್ವಾಮಿ, ರೋಹಿತ್, ದೀಪಕ್ ಸಾಗರ್, ಬಂಡಿಗಡಿ ನಂಜುಂಡಪ್ಪನವರಿಗೆ ಮೀಡಿಯಾ ಹೌಸ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಂತಕುಮಾರ್ ವರದಿ ಅಥವ ಲೇಖನಕ್ಕೆ ಏನಾದರೂ ಪ್ರತಿಕ್ರಿಯೆ ಬಂದು ಚರ್ಚೆ ಆದಾಗ ಮಾತ್ರ ವರದಿ ಬರೆದಿದ್ದು ಸಾರ್ಥಕತೆ ಎನಿಸಿಕೊಳ್ಳುತ್ತದೆ. ನೆಗೆಟಿವ್ ಮತ್ತು ಪಾಸಿಟಿವ್ ಪ್ರತಿಕ್ರಿಯೆ ಎರಡನ್ನೂ ಸಮನವಾಗಿ ಪತ್ರಕರ್ತ ಸ್ವೀಕರಿಸಬೇಕೆಂದರು.
ಪತ್ರಕರ್ತನಾದವನು ನಿಷ್ಠೂರವಾಗಿಯೇ ಬರೆದು ಸಮಾಜವನ್ನ ಎದುರಿಸಬೇಕೆಂದು ಕರೆ ನೀಡಿದರು. ಪತ್ರಕರ್ತರಿಗೆ ಇತ್ತೀಚೆಗೆ ಮಾನನಷ್ಠ ಮೊಕದ್ದಮೆಗಳನ್ನ ಹಾಕುವ ಘಟನೆಗಳು ಹೆಚ್ಚಾಗುತ್ತಿದೆ. ಶಿಬಿರಗಳ ಮೂಲಕ ಕಾನೂನಿನ ಅರಿವು ಮೂಡಿಸಿಕೊಡುವಂತೆ ಕೋರಿದರು.
ಸನ್ಮಾನಿಸಿದ ನ್ಯಾ.ಮಲ್ಲಿಕಾರ್ಜುನ ಗೌಡ, ಸಮಾಜವನ್ನ ಸರಿ ದಾರಿಗೆ ತರುವಲ್ಲಿ ಮಾಧ್ಯಮಗಳ ಪಾತ್ರ ಅಪಾರ, ಎಲ್ಲಾವನ್ನು ತಿಳಿಸಿಪಡಿಸುವ ಕೆಲಸ ಇರೋದು ಪತ್ರಿಕಾರಂಗಕ್ಕೆ. ಶಿವಮೊಗ್ಗ ನಿಸರ್ಗದಿಂದ, ಶರಣು, ಶರಣಿಯರಿಂದ, ರಾಜಕಾರಣಿಗಳು, ಸಾಧಕರ ಬೀಡಾಗಿದೆ. ಸಮಾಜದ ಬಗ್ಗೆ ಕಾಳಜಿ ಹೊಂದಿರುವರೆ ಶಿವಮೊಗ್ಗದಲ್ಲಿ ಹೆಚ್ಚು ಇದ್ದಾರೆ ಎಂದರು.
ಬೇಧ ಭಾವ ಯಾವುದೇ ಹಂಗಿಲ್ಲದೆ ಪತ್ರಿಕಾ ರಂಗ ಬರೆಯುತ್ತದೆ. ಸಂಯುಕ್ತ ಕರ್ನಾಟಕ ಪತ್ರಿಕೆಯನ್ನ 20 ಪೈಸೆಗೆ ಕರಿದಿಸುತ್ತಿದ್ದ ದಿನಗಳನ್ನ ನೆನಪಿಸಿಕೊಂಡ ನ್ಯಾಯಾಧೀಶರು. ಅಗೆಲ್ಲಾ ಎಸ್ ಎಸ್ ಎಲ್ ಸಿ ಫಲಿತಾಂಶ ಪತ್ರಿಕೆಯಲ್ಲಿ ಬರ್ತಾ ಇತ್ತು. ರೈಲಿಗೆ ಕಾದು ಪತ್ರಿಕೆ ಕೊಂಡು ಓದುತ್ತಿದ್ದ ದಿನಗಳನ್ನ ನ್ಯಾಯವಾದಿಗಳು ನೆನಪಿಸಿಕೊಂಡರು.
ಜಿಲ್ಲೆಯಲ್ಲಿ ತಿಂಗಳಿಗೆ ಒಮ್ನೆ ಗೆಟ್ ಟುಗೆದರ್ ತರ ಪತ್ರಿಕಾರಂಗ ಮತ್ತು ಕಾನೂನುರಂಗದ ಕಡೆಯಿಂದ ನಡೆದರೆ ಪತ್ರಕರ್ತರಿಗೆ ಬದಲಾವಣೆ ಮಾಡಿಕೊಳ್ಳಬಹುದು. ವಯಸ್ಸಿಗೆ ವಿದ್ಯೆಗೆ ಸಮವಿಲ್ಲ. ಮನುಷ್ಯ ಸಾಯುವರೆಗೂ ವಿದ್ಯಾರ್ಥಿನೇ. ಇಂದು ಡಿಜಿಟಲ್ ಯುಗದಲ್ಲಿ ಎಲ್ಲವೂ ವೇಗವೇ. ಆದರೆ ಪುಸ್ತಕ ಓದುವುದು ಮಾತ್ರ ಜ್ಞಾನಾರ್ಜನೆ ಹೆಚ್ಚಿಸುತ್ತದೆ. ಜ್ಞಾನ ಹೆಚ್ಚಾಗಲು ಓದಬೇಕು, ನ್ಯಾಯಾ ನೀಡುವಾಗ ಕಾನೂನ ಅಡಿ ನೀಡಬೇಕು ಪತ್ರಕರ್ತರಿಗೆ ಯಾವುದೇ ಕಾನೂನು ಇಲ್ಲ. ಅಭಿಪ್ರಾಯ ವ್ಯಕ್ತಗೊಳಿಸಲು ಹೆಚ್ಚು ಅವಕಾಶವಿದೆ. ಸಿಟ್ಟಿನಲ್ಲಿ, ಯಾರೋ ಹೇಳಿದ ವರದಿ ಬರೆಯಬಾರದು. ಇದು ಕಾನೂನು ಉಲ್ಲಂಘನೆಗೆ ಗುರಿಯಾಗುವ ಅವಕಾಶ ಹೆಚ್ಚುತ್ತದೆ ಎಂದರು.
ಕಾನೂನು ಪ್ರಾಧಿಕಾರ ರಾಜಣ್ಣ ಸಂಕಣ್ಣನವರ್, ಸಂಘದ ಜಿಲ್ಲಾಧ್ಯಕ್ಷ ಶಿವುಕುಮಾರ್, ರಾಜ್ಯ ಸಮಿತಿ ಸದಸ್ಯ ರವಿ ಕುಮಾರ್ ಟೆಲೆಕ್ಸ್ ಉಪಸ್ಥಿತರಿದ್ದರು.