ಶಿವಮೊಗ್ಗ: ಹೊಸವರ್ಷಾಚರಣೆಯನ್ನ ಬೇರೆ ರೀತಿಯಲ್ಲಿ ಆಚರಿಸಲು ಹೋಗಿ ವೇಳೆ ಮಿಸ್ ಫೈಯರಿಂಗ್ ಆಗಿರುವ ಘಟನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿದ್ದು, ಗುಂಡೇಟು ತಗುಲಿದ ವಿನಯ್ ಗೆ ಶಸ್ತ್ರ ಚಿಕಿತ್ಸೆ ಮುಗಿಸಿದ್ದು. ಅವರನ್ನ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು ಆದರೆ ಸಾವುಕಂಡಿದ್ದಾನೆ.
ವಿದ್ಯಾನಗರದಲ್ಲಿ ಹೊಸವರ್ಷಕ್ಕೆ ಪರವಾನಗಿ ಇದ್ದ ಡಬ್ಬಲ್ ಬ್ಯಾರೆಲ್ ಬಂದೂಕಿನಿಂದ ಗುಂಡು ಹಾರಿಸಿದ ಮಂಜುನಾಥ್ ಓಲೇಕಾರ್ ಗಾಬರಿಗೊಂಡು ಹೃದಯಾಘಾತವಾಗಿದೆ ಎನ್ನಲಾಗುತ್ತಿದೆ. ಆದರೆ ಮಂಜುನಾಥ್ ಓಲೇಕಾರ್ ಅವರ ಮೃತದೇಹವನ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ವಿನಯ್ (35) ಪಿಹೆಚ್ ಡಿ ವಿದ್ಯಾರ್ಥಿಯಾಗಿದ್ದು, ಮೂಲತಃ ಹೊಸನಗರದ ಹುಡುಗ ಎನ್ನಲಾಗಿದೆ. ಜಿಮ್ಮಿ ಸ್ಪೋರ್ಟ್ಸ್ ನಲ್ಲಿ ವಾಲಿ ಬಾಲ್ ಆಟಗಾರನಾಗಿದ್ದ ವಿನಯ್ ಶಿವಮೊಗ್ಗಕ್ಕೆ ಬಂದು 6-7 ವರ್ಷ ಕಳೆದಿದೆ. ಮಂಜುನಾಥರ ಮಗ ಸಂದೀಪನ ಸ್ನೇಹಿತ ಹಾಗೂ ಬಾಲರಾಜ್ ಅರಸ್ ರಸ್ತೆಯ ಪಿಡಬ್ಲುಡಿ ಕ್ವಾಟ್ರಸ್ ನಲ್ಲಿರುವ ವಿನಯ್ ಹೊಸ ವರ್ಷದ ಆಚರಣೆಗಾಗಿ ಮಂಜುನಾಥ್ ಮನೆಗೆ ಬಂದಿದ್ದನು. ಹೊಸ ವರ್ಷದ ಆಚರಣೆಯ ವೇಳೆ ಮಂಜುನಾಥ್ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಇಳಿವಯಸ್ಸಿನಲ್ಲಿ ಶೋಕಿ ಮಾಡಲು ಹೋದ ವ್ಯಕ್ತಿ ಯುವಕನ ಪ್ರಾಣಕ್ಕೆ ಕುತ್ತು ತಂದಿದ್ರಾ ಎಂಬ ಅನುಮಾನ ವ್ಯಕ್ತವಾಗಿದೆ.
ಮದ್ಯರಾತ್ರಿ ವಿನಯ್ ನನ್ನ ಖಾಸಗಿ ಆಸ್ಪತ್ರೆಗೆ ತಂದು ಸೇರಿಸಲಾಗಿದೆ. ಆದರೆ ಆಸ್ಪತ್ರೆಗೆ ತಂದು ಸೇರಿಸಿರುವ ಬಗ್ಗೆಯೂ ರೋಚಕವಾಗಿದೆ ಎನ್ನಲಾಗಿದೆ. ಸಧ್ಯ ವಿನಯ್ ಗೆ ಶಸ್ತ್ರ ಚಿಕಿತ್ಸೆ ನೀಡಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು ಈಗ ಆತ ಸಾವು ದೃಢಪಟ್ಟಿದೆ. ಮ್ಯಾಕ್ಸ್ ನಲ್ಲಿ ಚಿಕಿತ್ಸೆ ಫಲಿಸಿದೆ ಸಾವು ಕಂಡಿದ್ದಾನೆ.
ಈ ಘಟನೆ ಹೈಪ್ರೊಫೆಲ್ ಘಟನೆ ಎಂದು ಹೇಳಲಾಗುತ್ತಿದೆ. ಬೆಳಗ್ಗೆನೆ ಗ್ಲಾಜಿನಲ್ಲಿರಿಸಿದ್ದ ಮಂಜುನಾಥ್ ಮೃತದೇಹವನ್ನ ಈಗ ಮೆಗ್ಗಾನ್ ನ ಶವ ಪರೀಕ್ಷೆ ಕೇಂದ್ರದಲ್ಲಿ ಇರಿಸಲಾಗಿದೆ. ಹೃದಯಾಘಾತ ಸಂಭವಿಸಿದ ತಕ್ಷಣ ಬಹುತೇಕ ಪ್ರಕರಣದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಆಸ್ಪತ್ರೆಗೆ ಕರೆದೊಯ್ದಾಗ ಮೃತ ಪಟ್ಟರೆ ಆತನನ್ನ brought to death ಎಂದು ಘೋಷಿಸಲಾಗುತ್ತದೆ.
ಹೃದಯಾಘಾತಗೊಂಡ ಮಂಜುನಾಥರನ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಈಗ ಮತ್ತೆ ಮೆಗ್ಗಾನ್ ಮರಣೋತ್ತರ ಪರೀಕ್ಷೆಗೆ ಶವ ರವಾನಿಸಲಾಗಿದೆ. ಆತ್ಮರಕ್ಷಣೆಗೆ ಇಟ್ಟುಕೊಳ್ಳುವ ಡಬ್ವಲ್ ಬ್ಯಾರಲ್ ಗನ್ ನಿಂದ ಫೈಯರ್ ಆಗಿದೆ. ಮನೆಯಲ್ಲಿ ಜೀವಂತ ಗುಂಡುಗಳು ಪತ್ತೆಯಾಗಿದ್ದು ಅವುಗಳನ್ನ ಪರಿಶೀಲಿಸಲಾಗಿದೆ. ಆದರೂ ಪ್ರಕರಣ ನಿಗೂಢವಾಗಿದೆ ಎಙದು ಕೇಳಿ ಬರುತ್ತಿದೆ.