ಶಿವಮೊಗ್ಗ: ಪೌರಕಾರ್ಮಿಕನನ್ನ ಸುಲಿಗೆ ಮಾಡಿದ ಪ್ರಕರಣವನ್ನ ಬೆನ್ನು ಹತ್ತಿದ ದೊಡ್ಡ ಪೇಟೆ ಪೊಲೀಸರು ಬಚ್ಚಾ ಫೈಜಲ್ ಮತ್ತು ಅಲ್ತಾಫ್ ಯಾನೆ ಕುಯ್ಯನನ್ನ ಬಂಧಿಸಲಾಗಿದೆ. ಘಟನೆ ನಡೆದು 24 ಗಂಟೆಯಲ್ಲಿ ಪ್ರಕರಣವನ್ನ ಬೇಧಿಸಿ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ಮನೆಯ ಮುಂದೆ ನಿಲ್ಲಿಸಿದ್ದ ಪೌರ ಕಾರ್ಮಿಕನ ದ್ವಿಚಕ್ರವಾಹನದ ಸೀಟನ್ನ ತೆಗೆದು ಡಿಕ್ಕಿಯಲ್ಲಿದ್ದ ವಸ್ತುಗಳನ್ನ ಕದಿಯಲು ಯತ್ನಿಸಿದ್ದ ಬಚ್ಚಾ ಫೈಜಲ್ ಮತ್ತು ಅಲ್ತಾಫ್ ಯಾನೆ ಕುಯ್ಯನ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಅಲ್ತಾಫ್ ಯಾನೆ ಕುಯ್ಯ ಮತ್ತು ಬಚ್ಚಾ ಫಾಜಿಲ್ ಇಬ್ಬರೂ ಟೆಂಪೋ ಸ್ಟ್ಯಾಂಡ್ ಬಳಿ ಇದ್ದ ಪೌರಕಾರ್ಮಿಕ ತೇಜಸ್ ಎಂಬುವರ ಮನೆಯ ಮುಂದೆ ನಿಲ್ಲಿಸಿದ್ದ ಆಕ್ಟಿವ್ ಹೋಂಡಾದ ಬೈಕ್ ನ ಸೀಟು ಕಿತ್ತು ತಪಾಸಣೆ ಮಾಡುತ್ತಿದ್ದದ್ದನ್ನ ಗಮನಿಸಿದ್ದಾರೆ.
ಅದೇ ವೇಳೆ ತೇಜಸ್ ನೀರುಗಂಟಿ ಕೆಲಸ ಮಾಡುತ್ತಿದ್ದು, ಬೆಳಿಗ್ಗೆನೇ ಬಡಾವಣೆಗಳಿಗೆ ನೀರು ಬಿಡಲು ಎದ್ದು ಕರ್ತವ್ಯಕ್ಕೆ ಹೋಗುವಾಗ ಇಬ್ಬರನ್ನ ನೋಡಿ ಯಾಕೆ ಸೀಟು ತೆಗೆದಿದ್ದೀರ ಎಂದು ಪ್ರಶ್ನಿಸಿದ್ದಾರೆ. ಫೈಜಲ್ ಮತ್ತು ಕುಯ್ಯ ಇಬ್ವರು ಆತನನ್ನ ಕೈಗಳಿಂದ ಹೊಡೆದಿದ್ದಾರೆ. ಇದನ್ನ ನೋಡಿದ ತೇಜಸ್ ತಂದೆ ತಾಯಿ ಬಂದು ಜಗಳ ಬಿಡಿಸಿದ್ದಾರೆ.
ಹೋಗುವ ವೇಳೆ ತೇಜಸ್ ನ 7 ಸಾವಿರ ರೂ ಮೌಲ್ಯದ ವೀವೋ ಮೊಬೈಲ್ ಕದ್ದು ಹೋದ ಪ್ರಕರಣವೊಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಕುಯ್ಯನ ವಿರುದ್ಧ ಗಾಂಜಾ ಪ್ರಕರಣ ದಾಖಲಾಗಿವೆ. ಬ್ಬಚ್ಚಾ ಫೈಜಲ್ ಸಹ ಈತನ ವಿರುದ್ಧ ದೂರುಗಳಿವೆ ಎಂದು ತಿಳಿದು ಬಂದಿದೆ. ಇಬ್ಬರಿಗೂ ಜೆಸಿಯಾಗಿದೆ
ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ.
ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…
ಜಿಪ್ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್ನಲ್ಲಿ ನಡೆದಿದೆ.
ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…