ಶಿವಮೊಗ್ಗ: ಶೀಘ್ರದಲ್ಲಿಯೇ ಆರಂಭವಾಗಲಿದೆ ಸೈನ್ಸ್ ಮ್ಯೂಸಿಯಂ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಂಸದ ಬಿ.ವೈ.ರಾಘವೇಂದ್ರ ಸಹ್ಯಾದ್ರಿ ಕಾಲೇಜಿನಲ್ಲಿ ಖೇಲೋ ಇಂಡಿಯಾ ಯೋಜನೆಯನ್ನ ಕೈ ಬಿಟ್ಟು ಸೈನ್ಸ್ ಮ್ಯೂಸಿಯಂ ಆರಂಭವಾಗುತ್ತಿದೆ ಎಂದು ಸಿಹಿ ಸುದ್ದಿ ನೀಡಿದ್ದಾರೆ.
ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗೆ ಜಿಲ್ಲಾಡಳಿತ ಸಹ್ಯಾದ್ರಿ ಕಾಲೇಜನ್ನ ನೀಡಲು ಮುಂದಾಗಿತ್ತು. ಇದನ್ನ ವಿರೋಧಿಸಿ ಅನೇಕ ಪ್ರಗತಿಪರ ಚಿಂತಕರು ಸಹ್ಯಾದ್ರಿ ಕಾಲೇಜಿನ ಹಳೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.
ಈಗ ಖೇಲೋ ಇಂಡಿಯಾ ಯೋಜನೆಗೆ ಬ್ರೇಕ್ ಬಿದ್ದಿದೆ. ಖೇಲೋ ಇಂಡಿಯಾ ಬದಲು 15 ಕೋಟಿ ವೆಚ್ಚದಲ್ಲಿ ಸೈನ್ಸ್ ಮ್ಯೂಸಿಯಂ ಆರಂಭಗೊಳ್ಳಲಿದೆ ಎಂದು ಸಂಸದರು ಸಿಹಿ ಸುದ್ದಿ ನೀಡಿದ್ದಾರೆ.
ಕೇಂದ್ರ ಮತ್ತು ರಾಜ್ಯದ ಸಹಕಾರದಿಂದ ನ್ಯಾಷನಲ್ ಕೌನ್ಸಿಲ್ ಆಫ್ ಸೈನ್ಸ್ ಮ್ಯೂಜಿಂ ವಿಜ್ಞಾನ ಕೇಂದ್ರ ಕೆಟಗರಿ 2 ಕ್ಕೆ ಒಪ್ಪಿಗೆ ದೊರೆತಿದೆ. ಇದಕ್ಕೆ ಒಟ್ಟು 11 ಕೋಟಿ 70 ಲಕ್ಷ ನಿಗದಿ ಪಡಿಸಲಾಗಿದ್ದು, ನಿರ್ವಹಣೆಗೆ 3.350 ಕೋಟಿ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರ 6.55 ಕೋಟಿ ರಾಜ್ಯ 8.65 ಕೋಟಿ ವೆಚ್ಚದಲ್ಲಿ ಮ್ಯೂಜಿಂ ಆರಂಭಿಸಲಾಗುತ್ತಿದೆ. ಇದನ್ನ ಮುಂದಿನ ದಿನಗಳಲ್ಲಿ ಕೆಟಗರಿ-1 ಕ್ಕೆ ಏರಿಸಲಾಗುವುದು ಎಂದು ರಾಘವೇಂದ್ರ ತಿಳಿದಿದರು.
ಇದರ ಮುಖಾಂತರ ವಿಜ್ಞಾನದ ಬಗ್ಗೆ ಆಸಕ್ತರಿಗೆ ಸಂಶೋಧನೆಗೆ ಅನುಕೂಲವಾಗಲಿದೆ. ಉಪನ್ಯಾಸಕರಿಗೆ ವರ್ಕ್ ಶಾಪ್ ಅನುಕೂಲವಾಗಲಿದೆ, ವೈಜ್ಞಾನಿಕ ವಿಚಾರಣೆಗಳಿಗೆ ಅನುಕೂಲ ಮಾಡಕೊಡುವ ಮೂಲಕ ಶಕ್ತಿ ತುಂಬಲಾಗುವುದು ಎಂದು ರಾಘವೇಂದ್ರ ತಿಳಿಸಿದ್ದಾರೆ.
ಸಹ್ಯಾದ್ರಿ ಕಾಲೇಜಿನಲ್ಲಿ ಆರಂಭವಾಗಬೇಕಿದ್ದ ಖೆಲೋ ಇಂಡಿಯಾ ಯೋಜನೆಯನ್ನ ಕೃಷಿ ಮತ್ತು ತೋಟಗಾರಿಕೆ ಪಕ್ಕದ ಮೈದಾನದಲ್ಲಿ, ಪಶು ಸಂಗೋಪನೆ ವಿವಿಯ ಬಳಿ ಸೇರಿದಂತೆ ಇತರೆ ಮೂರು ಜಾಗದಲ್ಲಿ 70 ಕೋಟಿ ವೆಚ್ಚದಲ್ಲಿ ಸ್ಪೋರ್ಟ್ಸ್ ಆರಂಭವಾಗಲಿದೆ ಎಂದರು.