ಶಿವಮೊಗ್ಗ: ಶಿಕಾರಿಪುರ ಟೌನ್ ಠಾಣಾ ವ್ಯಾಪ್ತಿ ಮುದಿಗೌಡರ ಕೇರಿಯಲ್ಲಿ ಶ್ರೀ ಗಂಧದ ಮರವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪ್ರಕರಣ ದಾಲಿಸಿ ಆಗಿನ ತನಿಖಾಧಿಕಾರಿಗಳಾದ ಬಸವರಾಜ್, ಸಿಪಿಐ, ಶಿಕಾರಿಪುರ ವೃತ್ತರವರು ತನಿಖೆ ಕೈಗೊಂಡು ಆರೋಪಿತರನ್ನು ದಸ್ತಗಿರಿ ಮಾಡಿ, ದೋಷಾರೋಪಣಾ ಪತ್ರ ಸಲ್ಲಿಸಿರುತ್ತಾರೆ.
ಮಮತ, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, 1ನೇ ಹೆಚ್ಚುವರಿ ಜಿಲ್ಲಾ&ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ ಶ್ರೀ ಮಾನು ಕೆ. ಎಸ್ ರವರು ಅ.18 ರಂದು ಆರೋಪಿತರಾದ 1)ಮಹಮ್ಮದ್ ರಿಜ್ವಾನ್, 25 ವರ್ಷ, ಬಿಲ್ಲಹಳ್ಳಿ, ತರಿಕೆರೆ 2)ಮಹಮ್ಮದ್ ಆಜಂ, 25 ವರ್ಷ, ಹೊನ್ನೆಬಾಗಿ,ಚನ್ನಗಿರಿ, & 3) ಬರ್ಕತ್ ಅಲಿ 54 ವರ್ಷ, ಬಿಲ್ಲಹಳ್ಳಿ, ತರಿಕೆರೆ ಇವರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ 5 ವರ್ಷ ಸಾಧಾ ಕಾರಾವಾಸ ಶಿಕ್ಷೆ & 50,000ರೂ ದಂಡ, ದಂಡ ಕಟ್ಟಲು ವಿಫಲರಾದರೆ ಹೆಚ್ಚುವರಿ 6 ತಿಂಗಳು ಸಾದಾ ಕಾರವಾಸ ಶಿಕ್ಷೆ ವಿಧಿಸಿ ಆದೇಶ ನೀಡಿರುತ್ತಾರೆ.