ಶಿವಮೊಗ್ಗ: ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿಗೆ ಭಂಗತರುವಂತಹ ಕೃತ್ಯಗಳನ್ನೆಸಗಿ, ಸಾರ್ವಜನಿಕವಾಗಿ ಗೂಂಡಾವರ್ತನೆಯನ್ನು ಪ್ರದರ್ಶಸುತ್ತಾ, ಸಾರ್ವಜನಿಕರಲ್ಲಿ ಭಯವನ್ನುಟ್ಟಿಸುವ 45 ಜನರ ಗಡಿಪಾರಿಗೆ ಪೊಲೀಸ್ ಇಲಾಖೆ ಪಟ್ಟಿ ಸಿದ್ದಪಡಿಸಿದೆ.
45 ಜನ ಎಂಒಬಿ, ರೌಡಿ ಹಾಗೂ ರೂಢಿಗತ ಅಪರಾಧಿಗಳ ಗಡಿಪಾರಿಗೆ ಖಾಕಿಪಡೆ ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತಾವನೆ ಆಯಾ ಉಪವಿಭಾಗಾಧಿಕಾರಿಗಳ ಅಂಗಳದಲ್ಲಿದೆ.
ರೌಡಿ ಮತ್ತು ಎಂಓಬಿ ಆಸಾಮಿಗಳು ಹಾಗೂ ರೂಢಿಗತ ಅಪರಾಧಿಗಳ ವಿರುದ್ಧ ದಿನಾಂಕಃ- 01-01-2022 ರಿಂದ ಇಲ್ಲಿಯ ವರೆಗೆ ಶಿವಮೊಗ್ಗ ಉಪ ವಿಭಾಗದಿಂದ 31 ಜನ, ಭದ್ರಾವತಿ ಉಪ ವಿಭಾಗದಿಂದ 02 ಜನ, ಸಾಗರ ಉಪ ವಿಭಾಗದಿಂದ 02 ಜನ, ಶಿಕಾರಿಪುರ ಉಪ ವಿಭಾಗದಿಂದ 05 ಜನ ಮತ್ತು ತೀರ್ಥಹಳ್ಳಿ ಉಪ ವಿಭಾಗದಿಂದ 05 ಜನರು ಸೇರಿ ಒಟ್ಟು 45 ಜನರನ್ನು ಗಡಿಪಾರು ಮಾಡಲು ಆಯಾ ಉಪ ವಿಭಾಗಾಧಿಕಾರಿಗಳಿಗೆ ಪ್ರಸ್ಥಾವನೆಯನ್ನು ಸಲ್ಲಿಸಲಾಗಿದೆ.
ಈಗಾಗಲೇ 03 ಜನರನ್ನು ಗಡಿಪಾರು ಆದೇಶ ಹೊರಬಿದ್ದಿದೆ. ಮೇಲ್ಕಂಡ 45 ಜನರ ಗಡಿಪಾರು ಪ್ರಸ್ಥಾವನೆಯಲ್ಲಿ, ಕಳೆದ ಎರಡು ತಿಂಗಳಲ್ಲಿ ಶಿವಮೊಗ್ಗ ಉಪ ವಿಭಾಗದಿಂದ 15 ಜನ, ಭದ್ರಾವತಿ ಉಪ ವಿಭಾಗದಿಂದ ಒಬ್ವರು, ಸಾಗರ ಉಪ ವಿಭಾಗದಿಂದ ಇಬ್ಬರು ಮತ್ತು ಶಿಕಾರಿಪುರ ಉಪ ವಿಭಾಗದಿಂದ ನಾಲ್ವರು ಸೇರಿದಂತೆ ಒಟ್ಟು 22 ಜನರನ್ನು ಗಡಿಪಾರು ಮಾಡಲು ಆಯಾ ಉಪ ವಿಭಾಗಾಧಿಕಾರಿಗಳಿಗೆ ಪ್ರಸ್ಥಾವನೆಯನ್ನು ಸಲ್ಲಿಸಲಾಗಿರುತ್ತದೆ.
ಹಿರಿಯಡ್ಕ ನಿವಾಸಿ ವಿದ್ಯಾಲಕ್ಷ್ಮೀ (20) ಎಂಬ ಯುವತಿಯು ಏಪ್ರಿಲ್ 19 ರಂದು ಕಾಲೇಜಿಗೆಂದು ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.
ಅಫಜಲಪುರ ತಾಲೂಕು ಆಡಳಿತ ಸೌಧ ಅಕ್ಷರಶಃ ಕೆಸರು ಗದ್ದೆಯಾಗಿದೆ. ದಿನಾಲು ಸಾವಿರಾರು ಜನರು ತಹಶೀಲ್ದಾರ ಕಚೇರಿಗೆ ತಮ್ಮ ಕೆಲಸಗಳಿಗೆ ಬಂದು…
ಯಕ್ಷಗಾನದ ಹಿರಿಮೆ ಇದೀಗ ಗಡಿದಾಟಿ ಮಹಾರಾಷ್ಟ್ರದಲ್ಲೂ ಸದ್ದು ಮಾಡಿದೆ. ಸಂಪೂರ್ಣ ಮರಾಠಿ ಭಾಷೆಯಲ್ಲಿ ನಡೆದ ಅಪರೂಪದ ಯಕ್ಷಗಾನ ಮಹಾರಾಷ್ಟ್ರ ಪ್ರೇಕ್ಷಕರ…
ಪುಟಾಣಿ ಕಲಾವಿದೆ ಹತ್ತು ವರ್ಷದ ಕುಮಾರಿ ಗಂಗಾ ಶಶಿಧರ್ ಬಳಗದ ವಯೋಲಿನ್ ವಾದನ ಕಛೇರಿ ಕಾರ್ಯಕ್ರಮ ಉಡುಪಿಯ ಶ್ರೀ ಕೃಷ್ಣಮಠದ…
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಹುದಿನದ ಬೇಡಿಕೆಯಾಗಿದ್ದ ಗ್ರಾಮೀಣ ಪತ್ರಕರ್ತರರಿಗೆ ಬಸ್ ಪಾಸ್ ನೀಡುವ ಸಂಬಂಧ ಇತ್ತಿಚೆಗೆ ದಾವಣಗೆರೆಯಲ್ಲಿ ನಡೆದ…
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ…