ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತ್ರರನ್ನ ಒಕ್ಕಲೆಬ್ಬಿಸದಂತೆ ಹಾಗೂ ಕಾನೂನು ಬದ್ಧವಾಗಿ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನ.28 ರಂದು ಜನಾಕ್ರೋಶ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಹಿಂದುಳಿದ ವಿಭಾಗದ ರಾಜ್ಯಾಧ್ಯಕ್ಷ ಮಧುಬಂಗಾರಪ್ಪ ನಾವು ಶರಾವತಿ ಮುಳುಗಡೆ ಸಂತ್ರಸ್ತ್ರರ ಪರವಾಗಿ ಸಭೆ ನಡೆಸಿದ ಬೆನ್ಬಲ್ಲೇ ಬಿಜೆಪಿ ನ.11 ರಂದು ಶಿವಮೊಗ್ಗದಲ್ಲಿ ಸಭೆ ನಡೆಸಿ 15 ದಿನಗಳ ಒಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಇಂದಿಗೆ 15 ದಿನ ಕಳೆದಿದೆ. ಈಗ ಸಿಎಂ ಬೊಮ್ನಾಯಿ ಡಿಸಿ ವರದಿ ಪಡೆದು ಕೇಂದ್ರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದ್ದರು. ಅಂದರೆ ಇವರ ಅವಧಿ ಮುಗೀತ ಬಂದಿದೆ ಎಂದು ಮಧು ವಾಗ್ದಾಳಿ ನಡೆಸಿದರು.
ಒಂದು ದಿನ ಮಲೆನಾಡ ರೈತರ ಸಮಸ್ಯೆಯ ಬಗ್ಗೆ ಧ್ವನಿ ಎತ್ತದವರು ಈಗ ಸರಿ ಪಡಿಸುತ್ತೇನೆ ಎಂದು ಬಿಜೆಪಿ ಹೊರಟಿದೆ. ಮಲೆನಾಡು ಭಾಗದ ರೈತರುಕೃಷಿಕರ ಹಕ್ಕು ಪತ್ರ ಅರ್ಜಿ ವಜಾಗೊಂಡಿದೆ, ಕಸ್ತೂರಿ ರಂಗನ್ ವರದಿ ತೂಗುಕತ್ತಿಯಾಗಿದೆ. ಸಿಎಂ ಶಿವಮೊಗ್ಗಕ್ಕೆ ಬಂದರೂ ರೈತರಿಗೆ ವಿಶ್ವಾಸ ತುಂಬಲಿಲ್ಲ. ಆಶ್ವಾಸನೆ ಕೊಟ್ಟಿದ್ದಾರೆ. ಇದು ಉಪಯೋಗವಾಗದು ಎಂದು ಕಿಡಿಕಾರಿದರು.
ಮಲೆನಾಡು ಭಾಗದ ಬಹುಸಂಖ್ಯಾತ ಅರಣ್ಯ ಮಿವಾಸಿಗಳಿಗೆ ಕಾನೂನು ಅನುಕೂಲವಾಗಿಲ್ಲ. ಈ ನಿಟ್ಟಿನಲ್ಲಿ ಪಾದಯಾತ್ರೆಗೆ ಜನಾಕ್ರೋಶವೆಂದು ಹೆಸರಿಡಲಾಗಿದೆ. 94 94 ಸಿಸಿ ಕಾನೂನನ್ನ ಕಾಂಗ್ರೆಸ್ ಜನಪರ ಕಾನೂನು ಜಾರಿಗೊಳಿಸಿತ್ತು.
ಬಿಜೆಪಿ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಜನಪರ ಕಾನೂನನ್ನ ಕಟ್ಟುನಿಟ್ಟು ಜಾರಿಗೊಳಿಸಲು ಬಿಜೆಪಿ ವಿಫಲವಾಗಿದೆ. ಸಿದ್ದರಾಮಯ್ಯರವರು ಸಿಎಂ ಆದಾಗ ಜಾರಿಗೊಂಡ ಜನಪರ ಕಾನೂನುಗಳನ್ನ ಮತ್ತೆ ಅನುಷ್ಠಾನಗೊಳಿಸಲು ಕಾಂಗ್ತೆಸ್ ಮತ್ತೆ ಅಧಿಕಾರಕ್ಕೆ ಬರಬೇಕಿದೆ ಎಂದರು.
ಹೀಗಾಗಿ ನ.28 ರಂದು ಆಯನೂರಿನಿಂದ ಹೊರಟು ಬಸ್ ನಿಲ್ದಾಣದ ಅಶೋಕ ವೃತ್ತ, ಅಮೀರ್ ಅಹ್ಮದ್ ವೃತ್ತ, ಮಹಾವೀರ ವೃತ್ತದ ಮೂಲಕ ಪಾದಯಾತ್ರೆ ಎನ್ ಇಎಸ್ ಮೈದಾನ ತಲುಪಲಿದೆ. ಕೆಪಿಸಿಸಿ ಅಧ್ಯಕ್ಷ ಮಧುಬಂಗಾರಪ್ಪ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಸಂಜೆ ನಾಲ್ಕು ಗಂಟೆಗೆ ಪಾದಯಾತ್ರೆ ಸೇರಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್, ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು, ಕೆ.ಬಿ.ಪ್ರಸನ್ನ ಕುಮಾರ್, ಮಾಜಿ ಎಂಎಲ್ ಸಿ ಪ್ರಸನ್ನ ಇದ್ದರು.