ಕೆ.ಎಸ್ ಈಶ್ವರಪ್ಪಗೆ ಕೆಟ್ಟ ಮೇಲೆಯೂ ಬುದ್ದಿ ಬರುವುದಿಲ್ಲ- ವೈ ಎಚ್ ನಾಗರಾಜ್

ಶಿವಮೊಗ್ಗ: ಕೆಲವರಿಗೆ ಕೆಟ್ಟ ಮೇಲೆ ಬುದ್ಧಿ ಬರುತ್ತದೆ ಆದರೆ ಕೆ ಎಸ್ ಈಶ್ವರಪ್ಪ ಅಂಥವರಿಗೆ ಕೆಟ್ಟ ಮೇಲೆಯೂ ಬುದ್ದಿ ಬರುವುದಿಲ್ಲ ಎಂದು ಕೆಪಿಸಿಸಿ ಸದಸ್ಯ ವೈಎಚ್ ನಾಗರಾಜ್ ಹೇಳಿದ್ದಾರೆ.

ನಮ್ಮ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡುವ ಯಾವ ನೈತಿಕತೆಯೂ ಈಶ್ವರಪ್ಪನಿಗೆ ಇಲ್ಲ ಪದೇಪದೇ ಅವರನ್ನು ಅಲೆಮಾರಿ ಎಂದು ಹೇಳುವ ಮೂಲಕ ಅಲೆಮಾರಿ ಜನಾಂಗಕ್ಕೂ ಅವಮಾನ ಮಾಡುತ್ತಿದ್ದಾರೆ. ಈಗಾಗಲೇ ಅಲೆಮಾರಿ ಎಂಬ ಪದ ಬಳಕೆಯ ವಿರುದ್ಧ ಅವರ ಮೇಲೆ ದೂರು ಕೂಡ ದಾಖಲಿಸಲಾಗಿದೆ.

ಈಶ್ವರಪ್ಪ ಸಹನೆ ಕಳೆದುಕೊಂಡು ಬಹಳ ವರ್ಷಗಳೇ ಆಗಿವೆ. ಯಾವಾಗ ಸಿದ್ದರಾಮಯ್ಯ ಅವರನ್ನು ಹೀಯಾಳಿಸಲು ಹೊರಟರೋ ಆಗಲೇ ಅವರ ಶಕ್ತಿ ಕುಂದಿ ಹೋಯಿತು. ಯಾವಾಗ ಶೇಕಡ 40ರ ಆರೋಪ ಹೊತ್ತು ಸಚಿವ ಪಟ್ಟ ಕಳೆದುಕೊಂಡರೋ ಆವಾಗಲೇ ಅವರ ಮತಗಳು ಕಳೆದು ಹೋದವು. ಯಾವಾಗ ಬಿಜೆಪಿಯ ಪಾಲಿಗೆ ಶ್ರೀ ಕೃಷ್ಣನಂತೆ ಇದ್ದ ಯಡಿಯೂರಪ್ಪನವರ ವಿರುದ್ಧ ರಾಜಪಾಲರಿಗೆ ದೂರು ನೀಡಿ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಲು ಕಾರಣರಾದರೋ ಆವಾಗಲೇ ಅವರ ಮೇಲೆ ಬಿಜೆಪಿ ಭಕ್ತಿ ಯೂ ಹೊರಟು ಹೋಯಿತು.

ಈಶ್ವರಪ್ಪ ಈಗ ಏಕಾಂಗಿಯಾಗಿದ್ದಾರೆ ಚುನಾವಣೆಯನ್ನು ಎದುರಿಸುವ ಯಾವ ಶಕ್ತಿಯು ಅವರಿಗೆ ಉಳಿದಿಲ್ಲ. ಚುನಾವಣೆಯನ್ನು ಗೆಲ್ಲಲು ಇದ್ದ ತಂತ್ರ ಮಂತ್ರಗಳು ಅವರಿಗೆ ಮರೆತು ಹೋಗಿವೆ ಜನರ ಶಾಪದ ಪಾತ್ರೆ ತುಂಬಿ ತುಳುಕುತ್ತಿದೆ,ಸಿದ್ದರಾಮಯ್ಯ ಅವರನ್ನು ಹೀಯಾಳಿಸಿದ ಮರುಕ್ಷಣವೇ ಅವರ ಸೋಲಿನ ಮೂಟೆ ಹೆಗಲೇರಿದೆ.

ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ನೂರಾರು ಕ್ಷೇತ್ರಗಳಿವೆ ಆದರೆ ಈಶ್ವರಪ್ಪನವರಿಗೆ ಎಲ್ಲಿದೆ ಕ್ಷೇತ್ರ? ಶಿವಮೊಗ್ಗದಲ್ಲಿ ಈಗಾಗಲೇ ತನಗೆ ಸೀಟು ಸಿಗುವುದಿಲ್ಲ ಎಂದು ಮಗನನ್ನು ಕರೆತರಲು ಹೊರಟಿದ್ದಾರೆ, ಕಾಲ ಇನ್ನೂ ಇನ್ನು ಮಿಂಚಿಲ್ಲ ಧರ್ಮವನ್ನು ಸ್ವಾರ್ಥಕ್ಕೆ ಬಳಸಿ ಕೊಂಡ ಅಮಲು ಇಳಿಯಲಿ ,ಅವರು ಚುನಾವಣೆ ಕಣದಿಂದ ದೂರ ಸರಿಯಲಿ ,ಇಡೀ ಶಿವಮೊಗ್ಗದಲ್ಲಿ ಅಶಾಂತಿ ಹುಟ್ಟಿಸಿ ಶಾಂತಿ ಕದಡಿದ್ದ ಅವರ ಮಲಿನ ಮನಸ್ಸನ್ನು ಈಗಲಾದರೂ ಶುದ್ಧಗೊಳಿಸಿಕೊಳ್ಳಲಿ. ಸಿದ್ದರಾಮಯ್ಯ ಯೋಚನೆ ಬಿಟ್ಟು ಜೊತೆಗೆ ಮಗನ ಪ್ರೀತಿ ಬಿಟ್ಟು ನೆಮ್ಮದಿಯಿಂದ ಜೀವನ ನಡೆಸಲಿ ಎಂದು ವೈ ಎಚ್ ನಾಗರಾಜ್  ಹೇಳಿದ್ದಾರೆ.

Sneha Gowda

Recent Posts

ಚಾಮರಾಜನಗರದಲ್ಲಿ ಮುಂದುವರೆದ ಮಳೆ ಆರ್ಭಟ: ವಾಹನ ಸವಾರರ ಪರದಾಟ

ಗಡಿಜಿಲ್ಲೆ ವರುಣಾರ್ಭಟ ಮುಂದುವರೆದಿದ್ದು ಶನಿವಾರ ಮಧ್ಯಾಹ್ನದ ಜಿಲ್ಲಾಕೇಂದ್ರದಲ್ಲಿ ಒಂದೂವರೆ ತಾಸು ಜೋರು ಮಳೆಯಾಯಿತು.

6 mins ago

ನ್ಯೂಯಾರ್ಕ್​ಗೆ ತೆರಳಲಿದೆ ಟೀಮ್ ಇಂಡಿಯಾದ ಮೊದಲ ಬ್ಯಾಚ್ : ಯಾವಾಗ?

ಮುಂದಿನ ತಿಂಗಳು ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ಗಾಗಿ ಟೀಮ್​ ಇಂಡಿಯಾದ ಮೊದಲ ಬ್ಯಾಚ್​…

10 mins ago

ಖಾಸಗಿ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಶಾಸಕ ಶರಣು ಸಲಗರ್‌

ಖಾಸಗಿ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ್‌ ಅವರು ಪತ್ನಿ ಹಾಗು ಮಕ್ಕಳೊಂದಿಗೆ ಹೆಜ್ಜೆ ಹಾಕಿದ್ದಾರೆ. ಶಾಸಕ ಶರಣು ಸಲಗರ್‌ರಿಂದ…

20 mins ago

ಸ್ವಾತಿ ಮೇಲಿನ ಹಲ್ಲೆ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಬಿಭವ್ ಅರ್ಜಿ

ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ…

51 mins ago

ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

ಇಲ್ಲಿನ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಹಂತಕ ಗಿರೀಶ ಉರುಫ್‌ ವಿಶ್ವ ಸಾವಂತ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಮತ್ತೊಂದು ಪ್ರಕರನ…

2 hours ago

ʼರಾಹುಲ್ ಮತ್ತು ನಾನು ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಬಿಜೆಪಿಗೆ ಲಾಭವಾಗುತ್ತಿತ್ತುʼ

ದೇಶದ್ಯಾಂತ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ನಡೆಸಬೇಕೆಂಬ ಉದ್ದೇಶದಿಂದ ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ರಾಹುಲ್ ಗಾಂಧಿ…

2 hours ago