ಶಿವಮೊಗ್ಗ: ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ಇಂದು ಜನರ ಗುಂಪಿನ ಮಧ್ಯದಿಂದ ತೆರೆದ ವಾಹನದಲ್ಲಿ ಪ್ರಧಾನಿ ಮೋದಿ ಕೈ ಬೀಸುತ್ತಾ ಮುಖ್ಯವೇದಿಕೆಗೆ ಬಂದು ಹೊಸ ಸಂಪ್ರದಾಯಕ್ಲೆ ನಾಂದಿ ಹಾಡಿದರು.
ನರೇಂದ್ರ ಮೋದಿ ಅಕ್ಕಪಕ್ಕದಲ್ಲಿ ನಿಂತು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ ಜನರಿಗೆ ನಮಸ್ಕರಿಸಿದರು.
ಈ ವೇಳೆ ಬಿಜೆಪಿ ಹಾಗೂ ಪ್ರಧಾನಿ ಮೋದಿ ಗುಣಗಾನ ಮಾಡುವ ಡಿ.ಜೆ ಸಂಗೀತದ ಅಬ್ಬರ ಸಭೆಯಲ್ಲಿ ಅನುರಣಿಸಿತು. ಪ್ರಧಾನ ವೇದಿಕೆಯ ಹಿಂಬದಿಯ ಪರದೆಯಲ್ಲಿ ಮೋದಿ ಸಾಧನೆಗಳ ಕುರಿತಾದ ವಿಡಿಯೊ ಪ್ರದರ್ಶನಗೊಂಡಿತು.
ಸಭೆಯಲ್ಲಿ ನೆರೆದ ಭಾರೀ ಸಂಖ್ಯೆಯ ಬಿಜೆಪಿ ಬೆಂಬಲಿಗರು ಕೇಸರಿ ಶಾಲು, ಟೋಪಿ ಬೀಸಿ ಜಯಘೋಷದ ಮೂಲಕ ಸ್ವಾಗತಿಸಿದರು.