News Karnataka Kannada
Monday, April 29 2024
ಶಿವಮೊಗ್ಗ

ಮೋದಿ ಭಾಷಣದಲ್ಲಿ ಕುವೆಂಪು ಸಾಲುಗಳು; ಹಿಂದೂ ಶಕ್ತಿ ಬಗ್ಗೆ ಪ್ರಧಾನಿ ಮಾತು

ತಮ್ಮನ್ನು ಹಿಂದು ಧರ್ಮದ ಶಕ್ತಿಯ ಉಪಾಸಕ ಎಂದು ಕರೆದುಕೊಂಡ ಮೋದಿ, ಈ ಶಕ್ತಿಯನ್ನು ಮುಗಿಸಲು ಕೆಲವರು ಸಂಚು ರೂಪಿಸುತ್ತಿದ್ದಾರೆ ಎನ್ನುತ್ತ ಕೈ ನಾಯಕರ ಕಡೆ ಬೆರಳು ಮಾಡಿ ಟೀಕಿಸಿದ್ದಾರೆ.
Photo Credit : NewsKarnataka

ಶಿವಮೊಗ್ಗ: ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಅಂದರೆ ಮಂತ್ರ ಕಣಾ, ಶಕ್ತಿ ಕಣಾ, ತಾಯಿ ಕಣಾ, ದೇವಿ ಕಣಾ ಎಂದು ಕುವೆಂಪು ಕಾವ್ಯದ ಸಾಲುಗಳನ್ನು ಉಲ್ಲೇಖಿಸಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಮ್ಮನ್ನು ಹಿಂದು ಧರ್ಮದ ಶಕ್ತಿಯ ಉಪಾಸಕ ಎಂದು ಕರೆದುಕೊಂಡ ಮೋದಿ, ಈ ಶಕ್ತಿಯನ್ನು ಮುಗಿಸಲು ಕೆಲವರು ಸಂಚು ರೂಪಿಸುತ್ತಿದ್ದಾರೆ ಎನ್ನುತ್ತ ಕೈ ನಾಯಕರ ಕಡೆ ಬೆರಳು ಮಾಡಿ ಟೀಕಿಸಿದ್ದಾರೆ.

೪೦೦ ಸೀಟು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಅವರು ಬಿ.ಎಸ್‌ ಯಡಿಯೂರಪ್ಪ ಅವರನ್ನು ಹೊಗಳಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆಗಾಗಿ ಮತ್ತು ಅಭಿವೃದ್ಧಿಶೀಲ ಭಾರತಕ್ಕಾಗಿ ನರೇಂದ್ರ ಮೋದಿಗೆ ಮತ ನೀಡಿ ಎಂದು ಕೇಳಿಕೊಂಡ ನರೇಂದ್ರ ಮೋದಿ, ನನ್ನ ದೇಹದ ಕಣಕಣವೂ ಜನಸೇವೆಗೆ ಮೀಸಲಿರಿಸಿದ್ದೇನೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು