ಶಿವಮೊಗ್ಗ: 2018 ರಲ್ಲಿ ಬಂದ ಬಿಜೆಪಿ ಸರ್ಕಾರಕ್ಕೆ ಈ ಬಾರಿ ಶಕ್ತಿ ತುಂಬಬೇಕಿದೆ. ಅಭಿವೃದ್ಧಿಯ ಪಥದಲ್ಲಿಯೇ ಚುನಾವಣೆ ನಡೆಸಲಾಗುವುದು ಎಂದು ಕೇಂದ್ರ ಸಚಿವ ಶೋಭಾ ಕರದ್ಲಾಂಜೆ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 40ವರ್ಷ ಕಳೆದರೂ ಅಭಿವೃದ್ಧಿ ಆಗದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರಿಂದ ಸಾಧ್ಯವಾಗಿದೆ. ಕೇರಳದಲ್ಲಿ ಬಿಜೆಪಿಯ ಪಕ್ಷದ ಶಾಸಕರಿಲ್ಲ. ಆ ರಾಜ್ಯದಲ್ಲಿ ಅಭಿವೃದ್ಧಿ ಆಗ್ತಾ ಇಲ್ಲ ಎಂದರು.
ಕರ್ನಾಟಕದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಬಂದ ಮೇಲೆ ರೈಲ್ವೆ ನಿಲ್ದಾಣ ಯೋಜನೆ, ಏರ್ ಪೋರ್ಟ್, ವಸತಿಸೌಲಭ್ಯ ಕುಡಿಯುವ ನೀರು ಅಭಿವೃದ್ಧಿಯಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯ ಹೆಸರಿನಲ್ಲಿ ಬಿಜೆಪಿ ಸರ್ಕಾರದ ಹಿಂದೆ ಇದ್ದ ಬಿಜೆಪಿಯೇತರ ಸರ್ಕಾರ ಕೇವಲ 17 ಜನರ ಪಟ್ಟಿಯನ್ನ ಕೇಂದ್ರಕ್ಕೆ ಕಳುಹಿಸಿತ್ತು. ಆದರೆ ಈ ಯಡಿಯೂರಪ್ಪನವರ ಹೆಸರು ಬಂದ ಮೇಲೆ 54 ಲಕ್ಷ ಜನರ ಪಟ್ಟಿ ನೀಡಲಾಗಿದೆ.
ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರಕ್ಕೆ ಅವಕಾಶವಿದೆ. ಉತ್ತಮ ಜನ ಬೆಂಬಲ ಸಿಗ್ತಾ ಇದೆ. ಈ ಬಾರಿ ಬಿಜೆಪಿ ರಾಜ್ಯದ ಅಭಿವೃದ್ದಿಗೆ ಶಕ್ತಿ ತುಂಬಲು ಪ್ರಾರ್ಥಿಸಲಾಗುತ್ತಿದೆ 65 ಲಕ್ಷ 900 ಜನ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ್ದಾರೆ. ಕೇವಲ ಪ್ರಧಾನಿ ಮಾತ್ರ ಅಲ್ಲ ಮೊದಲು ಬಿಜೆಪಿ ಕಾರ್ಯಕರ್ತರು ಎಂದರು
ಮೋದಿ ನೂರು ತಲೆ ರಾವಣ ಎಂದು ಖರ್ಗೆ, ಹಿಟ್ಲರ್ ಎಂದು ಪ್ರಿಯಾಕವಾದ್ರಾ, ಸೋನಿಯಾ ಗಾಂಧಿ ಮೌತ್ ಕಾ ಸೌದಾಗರ್ ಎಂದು ಹೇಳಿದ್ದರು. ಸುರ್ಜೇವಾಲ ಮೋದಿ ಸಾವಿನ ಖೆಡ್ಡ ತೋಡ್ತೀವಿ ಎಂದು ಮೋದಿ ವಿರುದ್ಧ ಹೇಳ್ತಾ ಇದ್ದಾರೆ. ಭಾರತ ಮತ್ತು ಪ್ರಧಾನಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಇದು ದುಖಃಕರ ಸಂಗತಿ ಎಂದರು.
ಸೂಕ್ಷ್ಮ ಬೂತ್ ತಿಳಿಯ ಬೇಕಿದೆ ಶಿವಾಜಿನಗರ ಉಳ್ಳಾಲ ಮತ್ತು ಶಿವಮೊಗ್ಗದ ಕೆಲ ಬೂತ್ ನಲ್ಲಿ ಪೊಲೀಸ್ ಭದ್ರತೆ ಬೇಕಿದೆ. ಈ ಬಾರಿ ಮಾತ್ರ ನಾವು ಬೂತ್ ಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲು ಚುನಾವಣೆ ಆಯೋಗ ಕೇಳ್ತಾ ಇಲ್ಲ. ಪ್ರತಿಬಾರಿ ಹೇಳ್ತೀವಿ ಕಾಂಗ್ರೆಸ್ ಗೆ ಬೂತ್ ಇಲ್ಲ. ಹಾಗಾಗಿ ನಮ್ಮ ವಿರುದ್ಧ ಮಾತನಾಡುತ್ತಾರೆ ಎಂದರು.
ಅಭಿವೃದ್ಧಿ ಎಂದರೆ ಕೇವಲ ಕಟ್ಟಡ, ಏರ್ ಪೋರ್ಟ್ ಮಾತ್ರನಾ ಅಥವಾ ಉದ್ಯೋಗವಿಲ್ಲದೆ ಯುವಕರು ಪರಿತಪಿಸುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕರದ್ಲಾಂಜೆ 10 ಸಾವಿರ ಉದ್ಯೋಗಕ್ಕೆ ಒತ್ತು ಮಾಡಲಾಗಿದೆ. ಸರ್ಕಾರಿ ಉದ್ಯೋಗದ ಜೊತೆಗೆ ಸ್ವಂತ ಉದ್ಯೋಗಕ್ಕೆ ಒತ್ತು ನೀಡಲಾಗುತ್ತಿದೆ.
ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಅವರು ಬಿಜೆಪಿಯೇತರ ಸರ್ಕಾರದಲ್ಲಿ ಶೇ.85 ರಷ್ಟು ಇತ್ತು ಎಂದು ದೂರಿದರು. ಆದರೆ ಸಮರ್ಪಕ ಉತ್ತರ ನೀಡುವಲ್ಲಿ ವಿಫಲರಾದರು.