News Karnataka Kannada
Wednesday, May 08 2024
ಶಿವಮೊಗ್ಗ

ಕೇಂದ್ರ ಶಿಕ್ಷಣದಲ್ಲೂ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ

madubangarappa
Photo Credit : News Kannada

ಶಿವಮೊಗ್ಗ: ಕೇಂದ್ರ ಸರ್ಕಾರದ ಅನ್ಯಾಯದ ಮತ್ತೊಂದು ಅಂಶದ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಚ್ಚಿದ್ದಾರೆ. ಕೇಂದ್ರ ಸರ್ಕಾರ ಶಿಕ್ಷಣದಲ್ಲೂ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿ, ಗುಜರಾತ್ ಸೇರಿದಂತೆ ಇತರೆ ರಾಜ್ಯಗಳಲ್ಲಿ ವಿದ್ಯಾಭ್ಯಾಸಕ್ಕೆ ಒಂದು ಮಗುವಿಗೆ 6500 ಹಣ ಕೊಡುತ್ತದೆ. ರಾಜ್ಯದಲ್ಲಿ 2500 ಹಣ ನೀಡುತ್ತದೆ. ಈ ತಾರತಮ್ಯವೇಕೆ ಎಂದು ಹೇಳಿದರು.

ನಾನು ಅಧಿಕಾರಿಗಳಿಗೆ ಈ ರೀತಿ ಭೇದಭಾವ ಗಮನಿಸೋಕೆ ಹೇಳಿದ್ದೇನೆ. ಕೇಂದ್ರಕ್ಕೆ ಇಷ್ಟು ಜಿಎಸ್ಟಿ ಕೊಡುವಾಗ ಅವರಿಗೂ ಮಾನವೀಯತೆ ಇರಬೇಕಲ್ವಾ? ಗೆದ್ದಿರುವ 25 ಜನ ಬಿಜೆಪಿ ಸಂಸದರು ಏನು ಮಾಡ್ತಿದ್ದಾರೆ. ನಮ್ಮ ಪಾಲು ಹೋಗಿ ಯಾವಾಗಾದ್ರೂ ಕೇಳಿದ್ದಾರಾ…? ಇಲ್ಲಿ ಬಂದು ಅಕ್ಕಿ ವಿಚಾರವಾಗಿ ಮಾತಾಡ್ತಾರೆ.. ಲೆಕ್ಕ ಕೇಳ್ತಾರೆ‌ ಎಂದು ವಾಗ್ದಾಳಿ ನಡೆಸಿದರು. ನಾವು ಇಷ್ಟು ಕೊಟ್ಟಿದ್ದೇವೆ ಎಂದು ಮೋದಿ ಕೇಳಲಿ.. ಜನ ಗೌರವ ಕೊಡ್ತಾರೆ. ಇಲ್ಲಿ ಬಂದು ಪ್ರತಿಭಟನೆ ಮಾಡ್ತಾರೆ.. ಮೋದಿ ಮನೆ ಮುಂದೆ ಯಾವಾಗಾದ್ರೂ ಮಾಡಿದ್ದಾರಾ..?ಬಿಜೆಪಿಕೆಟ್ಟ ಬುದ್ದಿ ನಿಲ್ಲಿಸಿ, ಇನ್ನಾದರೂ ಬಿಜೆಪಿಯವರು ಅರ್ಥ ಮಾಡಿಕೊಳ್ಳಲಿ. ಜನ 66-67 ಜನ ಬಿಜೆಪಿಯವರನ್ನ ಗೆಲ್ಲಿಸಿದ್ದಾರೆ. ಅದನ್ನು ಅವರು ಲೆಕ್ಕ ಮಾಡಿಕೊಳ್ಳಲಿ ಎಂದು ವ್ಯಗ್ಯವಾಡಿದರು.

ರಾಜ್ಯ ಹಾಗೂ ಕೇಂದ್ರದ ನಡುವೆ ಅಕ್ಕಿ ಸಂಘರ್ಷ ವಿಚಾರದ ಬಗ್ಗೆನೂ ಮಾತನಾಡಿದ ಮಧು ಕೇಂದ್ರ ಹಾಗೂ ರಾಜ್ಯದ ನಡುವೆ ಹೊಂದಾಣಿಕೆ ಇರಬೇಕು. ಆದರೆ, ಕೇಂದ್ರ ಸರ್ಕಾರ ಮಾನವೀಯತೆಯನ್ನೇ ಮರೆತಿದೆ. ನಾವು ಕೇಳುತ್ತಿರೋದು ಹೊಟ್ಟೆಗೆ ಅನ್ನ ಹೊರತು, ಬೇರೆ ಏನು ಕೇಳುತ್ತಿಲ್ಲ ಎಂದು ಆಗ್ರಹಿಸಿದರು. ನಾವು ಬೇರೆ ಏನು ಬುಸಿನೆಸ್ ಮಾಡುತ್ತಿಲ್ಲ. ಈಗ ನೋಡಿದ್ರೇ 15 ಕೆಜಿ ಅಕ್ಲಿ ಕೊಡಿ ಅಂತಿದ್ದಾರೆ. ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ.ಸೋತಾಗ ಸಹಜವಾಗಿ ಎಲ್ರೂ ಮಾಡ್ತೇರೆ. ಅದನ್ನೇ ಬಿಜೆಪಿ ಕೂಡ ಮಾಡುತ್ತಿದೆ. ಜನರು ಕೂಡ ಇದನ್ನು ಗಮನಿಸ್ತಾರೆ. ಗ್ಯಾರಂಟಿ ನೀಡೋದ್ರ ಬಗ್ಗೆ ಸಿಎಂ ಈಗಾಗಲೇ ಹೇಳಿದ್ದಾರೆ. 10 ಕೆ.ಜಿ ಕೊಟ್ಟೇ ಕೊಡುತ್ತೇವೆ ಎಂದು ತಿಳಿಸಿದರು.

12 ನೇ ತಾರೀಖು ಅಕ್ಕಿ ಕೊಡ್ತೇವೆ ಅನ್ನೋದು, ನಂತರ ಮೂರು ದಿನ ಬಿಟ್ಟು ಕೊಡಲ್ಲ ಅನ್ನೋದು. ಇದನ್ನೆಲ್ಲಾ ಗಮನಿಸಿದ್ರೇ ಪ್ರತಿ ಯೋಜನೆಲೂ ದ್ವೇಷದ ರಾಜಕಾರಣ ಕಾಣಿಸುತ್ತೆ. ಕೇಂದ್ರಕ್ಕೆ ಅತಿ ಹೆಚ್ಚು 3 ಲಕ್ಷ ಕೋಟಿಯಷ್ಟು ಜಿಎಸ್ಟಿ ತೆರಿಗೆ ರಾಜ್ಯದಿಂದಲೇ ಹೋಗುತ್ತೇ. ಅದ್ರೇ, ಅವರು ನಮಗೆ 50-60 ಸಾವಿರ ಕೋಟಿ ಕೊಡ್ತಾರೆ ಅಷ್ಟೇ. ಇದನ್ನೆಲ್ಲಾ ನಾವು ಹೇಳ್ಬೇಕು ಅಲ್ವಾ, ಬಹುಪಾಲು ತೆರಿಗೆ ತಗೋಳ್ತಾರಲ್ವಾ ಎಂದರು.

ಬಿಎಸ್ ವೈ ಹೇಳಿಕೆಗೆ ತಿರುಗೇಟು
ಗ್ಯಾರಂಟಿ ಸರ್ಕಾರ ಉಳಿಯಲ್ಲ- ಬಿಎಸ್ವೈ ಹೇಳಿಕೆ ವಿಚಾರ ಈಗ ಬಿಜೆಪಿ 65 ಗೆದ್ದಿರೋದು 165 ಆಗುತ್ತಾ…? ಇನ್ನು ಅದೇ ಲೆಕ್ಕದಲ್ಲೇ ಬಿಜೆಪಿಯವರು ಇದ್ದಾರೆ ಜೀವಮಾನದಲ್ಲಿ ಯಾವತಾದ್ರೂ ಕರ್ನಾಟಕದಲ್ಲಿ ಸ್ವಂತ ಶಕ್ತಿ ಮೇಲೆ ಬಿಜೆಪಿ ಕೆಲಸ ಮಾಡಿದ್ದಾರಾ‌‌..?. ಜನರೇ ನಿರ್ಧಾರ ಕೊಟ್ಟಿದ್ದಾರೆ. ಇಂತಹ ಬಿಜೆಪಿ ಸರ್ಕಾರ ಬೇಡ ಎಂದು. ಬಿಜೆಪಿ ಅಂದ್ರೇ ಬಿಜಿನೆಸ್ ಜನತಾ ಪಾರ್ಟಿ, ಬ್ರಿಟಿಷ್ ಜನತಾ ಪಾರ್ಟಿ. ಇದನ್ನೇ ಜನ ತೋರಿಸಿಕೊಟ್ಟಿದ್ದಾರೆ. ಅದನ್ನು ನೋಡಿ ಕಲಿರೀ.. ಭಾಷಣ ಮಾಡೋದು ಬಿಡಿ ಎಂದು ಸಲಹೆ‌ನೀಡುದರು.

ಎಲ್ಲಾ ಹಗರಣ ತನಿಖೆ ಮಾಡ್ತೇವೆ
ನಮ್ಮ ಪಕ್ಷದ ಪ್ರಾಣಾಳಿಕೆಯಲ್ಲೇ ಸ್ಪಷ್ಟವಾಗಿ ಹೇಳಿದ್ದೆವೆ. ಯಾವುದೇ ಇಲಾಖೆಯಲ್ಲಿ ಹಗರಣ ಆಗಿದ್ರೂ ತನಿಖೆ ನಡೆಸುತ್ತೆವೆ. ಸರ್ಕಾರದ ಹಣ ಜನರಿಗೆ ಸೇರಬೇಕು. ಅಲ್ಲಿ ತಪ್ಪಾಗಿದ್ರೇ ಯಾರೇ ಅದ್ರೂ ಕ್ರಮ ಕೈಗೊಳ್ಳುತ್ತೇವೆ. ಶಿಕ್ಷಕರ ನೇಮಕಾತಿ ಹಗರಣದ್ದು ತನಿಖೆ ನಡೆಯುತ್ತಿದೆ. ನಾನು ಮಾತನಾಡಲ್ಲ. ನನಗೆ ಮಾಡಲು ಬೇರೆಯದ್ದೇ ಕೆಲಸಗಳಿವೆ ಎಂದರು

ಮತಾಂತರ ನಿಷೇಧ ಕಾಯ್ದೆ ವಾಪಸ್ ವಿಚಾರ
ನಾವು ಪ್ರಣಾಳಿಕೆಯಲ್ಲೇ ಸ್ಪಷ್ಟವಾಗಿ ಹೇಳಿದ್ದೇವೆ… ಅದನ್ನು ವಿರೋಧ ಪಕ್ಷದವರು ಓದಲಿ. ಮತಾಂತರ ಮಾಡ್ತಾರೆ ಎಂದು ಇವರು ಭಾಷಣ ಹೊಡೆದಿದ್ರಲ್ಲಾ. ಅದೇ ಜನರೇ ನಮಗೆ ಓಟ್ ಹಾಕಿ ಗೆಲ್ಲಿಸಿದ್ದು‌‌.ಪ್ರಣಾಳಿಕೆ ಓದಲಿ.. ನಂತರ ನಾನು ಉತ್ತರ ಕೊಡ್ತೇನೆ ಎಂದು ಮಧು ಬಂಗಾರಪ್ಪ ಆಗ್ರಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು