ಶಿವಮೊಗ್ಗ: ಏ.9 ರಂದು ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ತೂದೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಈಗಾಗಲೇ ಎಲ್ಲಾ ಪ್ರಕ್ರಿಯೆ ಮುಕ್ತಾಯ ವಾಗಿದೆ. ಬಿಜೆಪಿ ಟಿಕೆಟ್ ಗಾಗಿ ಗೊಂದಲ, ಪೈಪೋಟಿ ಸಹಜ. ದೊಡ್ಡಪಕ್ಷವೆಂದ ಮೇಲೆ ಇಂತಹ ಘಟನೆ ಸಾಮಾನ್ಯ ಎಂದರು.
ಸೊರಬ ಮತ್ತು ಶಿವಮೊಗ್ಗ ವಿಧಾನ ಸಭಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಅಭ್ಯರ್ಥಿ ವಿಚಾರದಲ್ಲಿ ಗೊಂದಲ ಇದೆ. ಗೆಲ್ಲುವ ಪಕ್ಷ ಹಿನ್ನಲೆ ಟಿಕೆಟ್ ಗಾಗಿ ಪೈಪೋಟಿ ಸಹಜ. ಎಲ್ಲ ಗೊಂದಲ ನಿವಾರಣೆ ಆಗುತ್ತದೆ ಎಂದರು.
ಬಿಜೆಪಿ ಪಟ್ಟಿ ವಿಳಂಬ ಆಗಿಲ್ಲ. ಪ್ರತಿ ಚುನಾವಣೆಯಲ್ಲೂ ಇದೆ ಸಮಯದಲ್ಲಿ ಬಿಜೆಪಿ ಪಟ್ಟಿ ಬಿಡುಗಡೆಯಾಗುತ್ತಿತ್ತು . ಕಾಂಗ್ರೆಸ್ ಜೆಡಿಎಸ್ ಪಕ್ಷ ಪಟ್ಟಿ ಬಿಡುಗಡೆ ಮಾಡಿವೆ.. ಅದು ಅವರ ಪಕ್ಷದ ವಿಚಾರ ಎಂದರು.
ಸಿಎಂ ಎರಡು ಕ್ಷೇತ್ರದಿಂದ ಸ್ಪರ್ಧೆ ಚರ್ಚೆ ಕುರಿತು ಗರಂ ಆದ ಬಸವರಾಜ್ ಬೊಮ್ಮಾಯಿ ಇದನ್ನು ಹೇಳಿದ್ದು ಯಾವನು ಎಂದು ಸಿಡಿಮಿಡಿಗೊಂಡರು.