ಭದ್ರಾವತಿ: ಮನೆಗೆ ನುಗ್ಗಿ ಪತ್ನಿಯನ್ನ ಅಪಹರಿಸಿಕೊಂಡು ಹೋಗಿರುವ ಘಟನೆ ಜನ್ನಾಪುರದ ಎನ್ ಟಿ ಬಿ ಲೇಔಟ್ ನಲ್ಲಿ ನಡೆದಿದೆ. 5 ರಿಂದ 6 ಜನಅಪರಿಚಿತರಿಂದ ಅಪಹರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನ ನ್ಯೂಟೌನ್ ಪೊಲೀಸರು ಪತ್ತೆಹಚ್ಚಿ ರಕ್ಷಿಸಿದ್ದಾರೆ.
ಎನ್ ಟಿ ಬಿ ಲೇಔಟ್ ನಲ್ಲಿ 33 ವರ್ಷದ ಮಹಿಳೆಯನ್ನ ಅಪಹರಿಸಿಕೊಂಡು ಹೋಗಿದ್ದು, ಪತಿ ಮನೆಯಲ್ಲಿರುವಾಗಲೇ ಪತ್ನಿಯನ್ನ ಅಪರಿಚಿತರು ಅಪಹರಿಸಿರುವುದಾಗಿ ಆರೋಪಿಸಿದ್ದಾರೆ. ಕೃಷ್ಣಪ್ಪ ತನ್ನ ಹೆಂಡತಿಮಕ್ಕಳೊಂದಿಗೆ ಭದ್ರಾವತಿ ಪೇಟೆಗೆ ಹೋಗಿ ಮನೆಗೆ ದಿನ ಬಳಕೆ ವಸ್ತು ಸಜ್ಜಾಗಿದ್ದರು. ಅಷ್ಟರಲ್ಲಿ ಅಪರಿಚಿತರು ಮನೆ ಒಳಗೆ ನುಗ್ಗಿದ್ದಾರೆ.
ಕೃಷ್ಣಪ್ಪ ಯಾರೆಂದು ಪ್ರಶ್ನಿಸುವ ವೇಳೆ ಮನೆಗೆ ನುಗ್ಗಿದ ಗ್ಯಾಂಗ್ ಅವರ ಬಾಯಿ ಮುಚ್ಚಿ ಕೊರಳಿಗೆ ಮಚ್ಚಿಟ್ಟು ಕೂಗಾಡದಂತೆ ಎಚ್ಚರಿಸಿದ್ದಾರೆ. ನಂತರ ಅವರ ಪತ್ನಿಯ ತಲೆಗೂದಲು ಹಿಡಿದು ಬಲವಂತವಾಗಿ ಎತ್ತಿಕೊಂಡು ಪತಿಯು ತಂದ ಬಿಳಿ ಬಣ್ಣದ ಜೆನ್ ಕಾರನಲ್ಲಿ ಕೂರಿಸಿಕೊಂಡು ಪರಾರಿಯಾಗಿದ್ದಾರೆ.
ಕೃಷ್ಣಪ್ಪ ಮತ್ತು ಅಪಹರಣಕ್ಕೊಳಗಾದ ಮಹಿಳೆಗೆ ಇಬ್ಬರು ಮಕ್ಕಳಿದ್ದು ಇಬ್ಬರು ಮಕ್ಕಳನ್ನೂ ಅಪರಿಚಿತರು ಗದರಿಸಿ ಹೋಗಿದ್ದಾರೆ. ಪತಿಯ ಎದುರೇ ಪತ್ನಿಯನ್ನ ಅಪಹರಿಸಲಾಗಿದೆ.
ಚನ್ನರಾಯ ಪಟ್ಟಣದಲ್ಲಿ ಮಹಿಳೆ ಪತ್ತೆ
ಭದ್ರಾವತಿಯ ಎನ್ ಬಿಟಿ ಲೇಔಟ್ ನಲ್ಲಿ ಅಪಹರಿಸಲಾದ 33 ವರ್ಷದ ಮಹಿಳೆಯನ್ನ ಚನ್ನರಾಯಪಟ್ಟದಲ್ಲಿ ಪತ್ತೆಹಚ್ಚಿ ರಕ್ಷಿಸಲಾಗಿದೆ. ಮಹಿಳೆಯ ಅಪಹರಣದ ಆರೋಪಿಯನ್ನ ಇನ್ನೂ ಬಂಧಿಸಲಾಗಿಲ್ಲ. 16 ವರ್ಷಗಳ ಹಿಂದೆ ಕೃಷ್ಣಪ್ಪನವರ ಜೊತೆಮದುವೆಯಾಗಿದ್ದ ಮಹಿಳೆ ಏಳು ವರ್ಷ ಬೇರೆಯವರ ಜೊತೆ ಇದ್ದಿದ್ದರು ಎಂಬ ಮಾಹಿತಿ ಕೇಳಿ ಬರುತ್ತಿದೆ.
ಈಗ ಗಂಡ ಹೆಂಡತಿ ಬೇಕು ಎಂದು ವಾಪಾಸ್ ಬಂದ ಪರಿಣಮ ಈ ಹಿಂದೆ ಮಹಿಳೆಯ ಜೊತೆಗಿದ್ದ ವ್ಯಕ್ತಿಯಿಂದ ಈ ಅಪಹರಣ ನಡೆದಿದೆ ಎಂದು ಅಂದಾಜಿಸಲಾಗಿದೆ. ಆರೋಪಿ ಪತ್ತೆಗಾಗಿ ಖಾಕಿ ಪಡೆ ಬಲವಾದ ಬಲೆ ಬೀಸಿದೆ. ಆರೋಪಿ ಕುಣಿಗಲ್ ಕಡೆಯವನು ಎಂದು ಅಂದಾಜಿಸಲಾಗುತ್ತಿದೆ
ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…
ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…
ತಮಿಳುನಾಡಿನ ಖಾಸಗಿ ಟಿವಿ ಚಾನೆಲ್ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್ ಮುನಿಸ್ವಾಮಿ…
ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ. ಹೌದು. .…
ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ಸಿಬಿ vs ಸಿಎಸ್ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…
ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.