News Karnataka Kannada
Monday, April 29 2024
ಶಿವಮೊಗ್ಗ

ಶಿವಮೊಗ್ಗ ಏರ್ಪೋರ್ಟ್ ಗೆ ಬಂಗಾರಪ್ಪ ಹೆಸರು ಇಡದೇ ಇರುವುದಕ್ಕೆ ಆರ್ಯ ಈಡಿಗ ಸಂಘ ಬೇಸರ

Arya Idiga Sangha upset over not naming Shimoga airport after Bangarappa
Photo Credit : By Author

ಶಿವಮೊಗ್ಗ: ಶಿವಮೊಗ್ಗ ಏರ್ಪೋರ್ಟ್ ಕುವೆಂಪು ಹೆಸರಿಟ್ಟು ಬಿಎಸ್ ವೈ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಸಮುದಾಯದಿಂದ ಅಸಮಾಧಾನ ಹೊರಬಿದ್ದಿದೆ. ಬಂಗಾರಪ್ಪ ಹೆಸರು ಇಡದೇ ಇರುವುದಕ್ಕೆ ಆರ್ಯ ಈಡಿಗ ಸಂಘ ಬೇಸರ ವ್ಯಕ್ತ ಪಡಿಸಿದೆ.

ಆರ್ಯ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ಹೇಳಿಕೆ ನೀಡಿ, ಬಂಗಾರಪ್ಪ ಶಿವಮೊಗ್ಗ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ನಾಂದಿಹಾಡಿದರು. ಶಿವಮೊಗ್ಗ ಸ್ಮಾರ್ಟ್ ಸಿಟಿ ಬಗ್ಗೆ ಕನಸು ಕಂಡವರು ಬಂಗಾರಪ್ಪನವರು. ತುಂಗಾ ಏತಾ ನೀರಾವರಿ ಹಾಗೂ ತುಂಗಾ ಮೇಲ್ದಂಡೆ ಯೋಜನೆ ಜಾರಿಗೆ ತಂದವರು. ಅಂತವರ ಹೆಸರನ್ನ ವಿಮಾನ ನಿಲ್ದಾಣಕ್ಕೆ ಹೆಸರಿಡಬೇಕಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಂಗಾರಪ್ಪ ಯಾವುದೇ ಪಕ್ಷ, ಜಾತಿ ನೋಡಿರದ ವ್ಯಕ್ತಿ. ಕಾವೇರಿ ನೀರು ವಿಚಾರ ಬಂದಾಗ ಸುಗ್ರೀವಾಜ್ಞೆ ಹೊರಡಿಸಿದವರು. ರೈತರಿಗೆ ಉಚಿತವಾಗಿ ವಿದ್ಯುತ್ ನೀಡಿದವರು. ಆಶ್ರಯ ಯೋಜನೆ, ಆರಾಧನಾ ಯೋಜನೆ ತಂದರು.  ಶೇ. 15 ಗ್ರಾಮೀಣ ಕೃಪಾಂಕವನ್ನು ತಂದಿದ್ದಾರೆ.

ನೂರಾರು ಯೋಜನೆ ತಂದು ಧೀಮಂತ ನಾಯಕ ಎನಿಸಿಕೊಂಡಿದ್ದ ಬಂಗಾರಪ್ಪನವರ ಹೆಸರನ್ನ ಸೋಗಾನೆ ಏರ್ಪೋರ್ಟ್ ಗೆ ಇಡಬೇಕು ಎಂದು ಮನವಿ ಮಾಡಲಾಗಿತ್ತು. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅಧಿಕಾರಕ್ಕೆ ಬರುವುದಕ್ಕೆ ಬಂಗಾರಪ್ಪರವರೇ ಕಾರಣ. ಬಂಗಾರಪ್ಪ ಹೆಸರು ಇಡಲೇಬೇಕು ಎಂದು ಶ್ರೀಧರ್ ಆಗ್ರಹಿಸಿದರು.

ಶಿವಮೊಗ್ಗದಲ್ಲಿ ಅತಿಹೆಚ್ಚು ಜನರು ಇರುವ ಸಮುದಾಯ ಇರುವುದು ಆರ್ಯ ಈಡಿಗರದ್ದು, ಹಾಗಾಗಿ ಬಂಗಾರಪ್ಪ ದೀಮಂತ ನಾಯಕ. ಕುವೆಂಪು ಹೆಸರನ್ನು ಹಲವಾರು ಕಡೆ ಇಡಲಾಗಿದೆ ಸರ್ಕಾರ ಬಂಗಾರಪ್ಪರವರನ್ನು ಕಡೆಗಣಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು