ಸೊರಬ : ಓಮಿನಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ದೂಗೂರು ಬಳಿ ಬುಧವಾರ ತಡರಾತ್ರಿ ನಡೆದಿದೆ. ಭದ್ರಾಪುರ ಗ್ರಾಮದ ಪ್ರಶಾಂತ್ ( 31) ಮೃತ ಬೈಕ್ ಸವಾರ.
ಮಳಲಗದ್ದೆಯಿಂದ ಸಾಗರ ಮಾರ್ಗವಾಗಿ ತೆರಳುತ್ತಿದ್ದ ಓಮಿನಿಯು ಯಾವುದೇ ಮುನ್ಸೂಚನೆ ನೀಡದೇ ಡಿಢೀರ್ ನಿಲ್ಲಿಸಿದ ಪರಿಣಾಮ ಹಿಂಬದಿಯಿಂದ ಆಗಮಿಸುತ್ತಿದ್ದ ಬೈಕ್ ಓಮಿನಿಗೆ ಢಿಕ್ಕಿಯಾಗಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಬೈಕ್ ಸವಾರನನ್ನು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಯಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.