News Karnataka Kannada
Sunday, May 12 2024
ಶಿವಮೊಗ್ಗ

ಪತ್ರಕರ್ತರ ಮೇಲೆ ದಾಳಿ : ಜೀವ ಬೆದರಿಕೆ – ಕ್ಯಾಮರಾಗಳಿಗೆ ಹಾನಿ!

Journalist
Photo Credit :

ಶಿವಮೊಗ್ಗ: ಕೊಲೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷರವರ ಮೃತದೇಹದ ಅಂತ್ಯ ಸಂಸ್ಕಾರದ ಮೆರವಣಿಗೆಯು, ಭಾರೀ ಪ್ರಮಾಣದ ಹಿಂಸಾಚಾರಕ್ಕೆ ಸಾಕ್ಷಿಯಾಯಿತು.

ಮೆರವಣಿಗೆಯ ದೃಶ್ಯಾವಳಿ ಚಿತ್ರೀಕರಿಸುತ್ತಿದ್ದ ಪತ್ರಕರ್ತರಿಗೆ ಕೆಲ ಕಿಡಿಗೇಡಿಗಳು ಬೆದರಿಕೆ ಹಾಕಿದರು. ಕಲ್ಲು ತೂರಾಟದಲ್ಲಿ ಛಾಯಾಗ್ರಾಹಕರಾದ ಲಿಂಗನಗೌಡ ಹಾಗೂ ರಫೀ ಎಂಬುವರು ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಂಧಿ ಬಜಾರ್ ರಸ್ತೆಯಲ್ಲಿ ಪತ್ರಕರ್ತ ಬಿ. ರೇಣುಕೇಶ್ ರವರ ಕ್ಯಾಮರಾ ಹಾಗೂ ಚಂದ್ರಹಾಸ್ ಹಿರೇಮಳಲಿರವರ ಮೊಬೈಲ್ ಕಿತ್ತುಕೊಳ್ಳಲು ಕೆಲ ಕಿಡಿಗೇಡಿಗಳು ಯತ್ನಿಸಿದರು. ಕ್ಯಾಮರಾ ಲೆನ್ಸ್ ಹಾಳುಗೆಡವಿ, ಫೋಟೋ-ವಿಡಿಯೋ ತೆಗೆದರೆ ಹಲ್ಲೆ ನಡೆಸುವ ಬೆದರಿಕೆ ಹಾಕಿದರು. ಸ್ಥಳದಲ್ಲಿದ್ದ ಪೊಲೀಸರು, ಇದೆಲ್ಲವನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು