News Karnataka Kannada
Sunday, April 28 2024
ಶಿವಮೊಗ್ಗ

ಕೈದಿಗಳಿಗೆ ಗಾಂಜಾ ಎಸೆಯುತ್ತಿದ್ದ ಮೂವರು ಆರೋಪಿಗಳು ಬಂಧನ

Jail
Photo Credit :

ಶಿವಮೊಗ್ಗ : ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಒಳಗೆ ಕೈದಿಗಳಿಗೆ ಗಾಂಜಾ ಎಸೆಯುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರ್‌ಎಂಎಲ್ ನಗರದ ಅಜರುದ್ದಿನ್ (24), ಕಾರ್ಕ್ ಪೇಟೆಯ ಮಹಮ್ಮದ್ ಫೈಸಲ್ (20 )ಭರ್ಮಪ್ಪ ನಗರದ ರೋಷನ್ ಜಮೀರ್‌(19) ಬಂಧಿತ ಆರೋಪಿಗಳಾಗಿದ್ದು, 9000 ರೂ .ವೌಲ್ಯದ 240 ಗ್ರಾಂ ತೂಕದ ಗಾಂಜಾ, 1 ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ ಮೊಪೆಡ್‌ ಗಾಡಿಗಳನ್ನು ವಶಕ್ಕೆ ಪಡೆಯಲಾಗಿದೆ.

ಕೇಂದ್ರ ಕಾರಾಗೃಹದ ಹೊರಭಾಗದಿಂದ ಕಾಂಪೌಂಡ್ ಒಳಗೆ ಗಾಂಜಾ ಎಸೆಯಲು ತೆರೆಳುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ ಕಾರಾಗೃಹದ ಪಶ್ಚಿಮ ಭಾಗದ ಕಾಂಪೌಂಡ್ ಹಿಂಭಾದ ತುಂಗಾ ನಗರ ಠಾಣೆ ಪಿಎಸ್‌ಐ ಮತ್ತು ಸಿಬ್ಬಂದಿಗಳು ಕಾದು ಕುಳಿತು ಆರೋಪಿಗಳನ್ನು ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು