News Karnataka Kannada
Monday, April 29 2024
ಚಿಕಮಗಳೂರು

ಜನರಲ್ಲಿ ಸಂಸ್ಕಾರ ಪ್ರಜ್ಞೆ ಮೂಡಲು ದೇವಾಲಯಗಳು ಕಾರಣ: ಹೆಚ್.ಡಿ ತಮ್ಮಯ್ಯ

ಕನಿಷ್ಠ ದೇವಾಲಯಗಳಿಗೆ ಹೋದಾಗ ಜನರಲ್ಲಿ ಸಂಸ್ಕಾರ ಪ್ರಜ್ಞೆ ಬರಬೇಕೆಂಬುದು ದೇವಾಲಯಗಳ ನಿರ್ಮಾಣದ ಉದ್ದೇಶ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.
Photo Credit : News Kannada

ಚಿಕ್ಕಮಗಳೂರು: ಕನಿಷ್ಠ ದೇವಾಲಯಗಳಿಗೆ ಹೋದಾಗ ಜನರಲ್ಲಿ ಸಂಸ್ಕಾರ ಪ್ರಜ್ಞೆ ಬರಬೇಕೆಂಬುದು ದೇವಾಲಯಗಳ ನಿರ್ಮಾಣದ ಉದ್ದೇಶ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.

ಅವರುಇಂದು ಸಖರಾಯಪಟ್ಟಣ ಹೋಬಳಿ ಬಾಣೂರು ಗ್ರಾಮದಲ್ಲಿ ಸಣ್ಣಕ್ಕಿ ವಂಶಸ್ಥರು ನೂತನವಾಗಿ ನಿರ್ಮಿಸಲಾಗಿರುವ ಶ್ರಿ ಗವಿರಂಗನಾಥಸ್ವಾಮಿ ದೇವಾಲಯದ ಪ್ರಾರಂಭೋತ್ಸವವನ್ನು ನೆರವೇರಿಸಿ ಮಾತನಾಡಿದರು.

ದೇವಾಲಯದ ಗರ್ಭಗುಡಿ ಒಳಗೆ ತೆಗೆದುಕೊಂಡು ಹೋದ ನೀರು ಹೊರಬರುವಾಗ ತೀರ್ಥವಾಗುತ್ತದೆ. ಹಣ್ಣು-ಕಾಯಿ ಪ್ರಸಾದವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಾರ್ಥನೆ ಸಲ್ಲಿಸುವ ಭಕ್ತರುಉತ್ತಮ ಸಂಸ್ಕಾರವಂತ ಪ್ರಜೆಗಳಾಗಬೇಕೆಂಬುದು ನನ್ನಆಶಯಎಂದು ಹೇಳಿದರು.

ಯಾವುದೇ ಗ್ರಾಮದಲ್ಲಿ ದೇವಾಲಯಜೀರ್ಣೋದ್ಧಾರ, ನೂತನ ದೇವಸ್ಥಾನ ಪ್ರಾರಂಭೋತ್ಸವ ಮಾಡು ವುದು ಎಷ್ಟು ಮುಖ್ಯವೋ ಪ್ರತಿನಿತ್ಯ ಪೂಜೆ ಸಲ್ಲಿಸುವುದು ಅಷ್ಟೇ ಮುಖ್ಯಎಂದುಅವರು ಹೇಳಿದರು.

ಈಗಾಗಲೇ ಹಲವಾರು ದೇವಾಲ ಯಗಳ ನಿರ್ಮಾಣ ಮಾಡಿರುವುದು, ಪ್ರಾರಂಭೋತ್ಸವ ನೋಡಿದ್ದೇವೆ. ನಿತ್ಯ ಪೂಜೆಇಲ್ಲದೆ ದೇವಾಲಯಗಳು ಬಿಕೋ ಎನ್ನುತ್ತಿವೆ. ಅದಕ್ಕಾಗಿ ಸುವ್ಯವಸ್ಥಿತವಾದ ಪೂಜೆ ಕೈಂಕರ್ಯಗಳನ್ನು ಗ್ರಾಮಸ್ಥರು ಮಾಡುವ ಮೂಲಕ ಭಕ್ತಿ ಪ್ರಧಾನವಾಗಬೇಕು. ಶ್ರೀ ಗವಿರಂಗನಾಥ ಸ್ವಾಮಿ ಆಶೀರ್ವಾದ ಬಾಣೂರಿಗೆ ಸೀಮಿತವಾಗದೆ ಈ ಭಾಗದ ಎಲ್ಲರಿಗೂ ದೊರೆಯುವಂತಾಗಲಿ ಎಂದು ಹಾರೈಸಿದರು.

ಬುದ್ಧ, ಬಸವ, ಕನಕದಾಸ, ಅಂಬೇಡ್ಕರ್ ಪ್ರತಿಪಾದನೆ ಮಾಡಿದ ಪರಿಣಾಮ ಸಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿ, ಇಂದು ನಾವೆಲ್ಲರೂ ಅಧಿಕಾರದಲ್ಲಿದ್ದೇವೆಂದರೆ ಅವರುಗಳು ಹಾಕಿ ಕೊಟ್ಟಿರುವ ಮಾರ್ಗದರ್ಶನದಿಂದ ಸಮಾನತೆ ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ಒಡೆದು ಹರಿದು ಹಂಚಿಹೋಗಿರುವ ಕುಟುಂಬ ವ್ಯವಸ್ಥೆ ದೇವಸ್ಥಾನದಲ್ಲಿ ಬಂದು ಪ್ರಾರ್ಥನೆ ಮಾಡುವ ಮೂಲಕ ಒಗ್ಗೂಡಬೇಕಾದ ಅಗತ್ಯ ಇದೆ ಎಂದು ಹೇಳಿದರು.

ಸಣ್ಣಕ್ಕಿ ವಂಶಸ್ಥರು ಪ್ರತಿಯೊಂದು ಸಮಾಜಕ್ಕೂ ಮಾದರಿಯಾಗಿದ್ದಾರೆ. ಇದೇರೀತಿ ಸರ್ವರೂ ಸಂಘಟಿತರಾಗಿ ಹೋರಾಟ ರೂಪಿಸಿದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರಕಾಣಲು ಸಾಧ್ಯಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಗವಿರಂಗಪ್ಪ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನಾಣ್ಣುಡಿಯಂತೆ ನಮ್ಮ ಕುಟುಂಬದ ಎಲ್ಲಾ ಸದಸ್ಯರು ಒಟ್ಟಾಗಿ ಗವಿರಂಗನಾಥ ಸ್ವಾಮಿದೇವಾಲಯ ಪ್ರಾರಂಭೋತ್ಸವದಲ್ಲಿ ಭಾಗಿಯಾಗಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್ ಮಾತನಾಡಿದರು .ಗ್ರಾ.ಪಂ ಸದಸ್ಯ ರೇಣುಕಾಮೂರ್ತಿ, ಗ್ರಾಮಸ್ಥರಾದ ಈಶ್ವರಪ್ಪ, ಸಿದ್ದಪ್ಪ, ಶಾಂತಪ್ಪ, ದಯಾ ಶಂಕರ್ ಮತ್ತಿತರರು ಭಾಗವಹಿಸಿದ್ದರು. ಮೊದಲಿಗೆ ಸಿದ್ದಪ್ಪ ಸ್ವಾಗತಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು