ಚಿಕ್ಕಮಗಳೂರು: ಈ ಬಾರಿಯ ಚುನಾವಣೆಯಲ್ಲಿ ಭ್ರಷ್ಟನನ್ನ ಮನೆಗೆ ಕಳಿಸಿ ಶಿಷ್ಟನನ್ನ ಅಧಿಕಾರಕ್ಕೆ ತರಬೇಕೆಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಎಲ್ ಮೂರ್ತಿ ಕರೆ ನೀಡಿದರು.
ಕೊಳಗಾಮೆ ಕೊಂಡದಖಾನ್ ಹಾಗೂ ಗಂಗೆಗಿರಿಯಲ್ಲಿ ಏರ್ಪಡಿಸಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಕಳೆದ ೨೦ ವರ್ಷಗಳಿಂದ ಈ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿಯನ್ನು ಮಾಡದೆ ಕೇವಲ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ಚುನಾವಣಾ ಸಂದರ್ಭದಲ್ಲಿ ಮಾತ್ರ ನಾಟಕ ಆಡುವ ಇಂತಹ ಭ್ರಷ್ಟ ಶಾಸಕನನ್ನು ಮನೆಗೆ ಕಳಿಸಿ ಎಂದರು.
ಪ್ರಧಾನಿ ಮನಮೋಹನ್ ಸಿಂಗ್ ಅಧಿಕಾರಾವಧಿಯಲ್ಲಿ ದಿನ ನಿತ್ಯದ ವಸ್ತುಗಳ ಬೆಲೆ ಕಡಿಮೆ ಇದ್ದು, ಮೋದಿ ಬಂದ ನಂತರ ಗ್ಯಾಸ್ ,ಪೆಟ್ರೋಲ್, ಡೀಸೆಲ್, ಎಣ್ಣೆ, ಬೇಳೆ, ಕಾಳು, ಅಕ್ಕಿ , ಗೊಬ್ಬರ, ಸಿಮೆಂಟ್, ಮರಳು ಹಾಗೂ ಕಬ್ಬಿಣ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದ್ದು,ಇವರ ಕೈಗೆ ಅಧಿಕಾರ ಸಿಕ್ಕಿರುವುದು ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ ಎಂದ ಅವರು ಇಂತಹ ಭ್ರಷ್ಟ ಸರ್ಕಾರ ಹೋಗಬೇಕಾದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕೆಂದರು.
ಕಾಂಗ್ರೆಸ್ ಅಭ್ಯರ್ಥಿ ಹೆಚ್ ಡಿ ತಮ್ಮಯ್ಯ ಮಾತನಾಡಿ ಈ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ನೋಡಿದರೆ ಕಳೆದ ೨೦ ವರ್ಷಗಳಿಂದ ಶಾಸಕ ಸಿ ಟಿ ರವಿ ಮಾಡಿರುವ ಘನಂದಾರಿ ಕೆಲಸ ಎದ್ದು ಕಾಣುತ್ತದೆ ನಮಗೆ ಮತಕೊಡುವ ಮೂಲಕ ಅಧಿಕಾರ ಕೊಡಿ ನಿಮ್ಮ ಸೇವೆ ಮಾಡುತ್ತೇವೆ ಎಂದರು.
ಇಲ್ಲಿಯ ಸಮಸ್ಯೆಗಳು ಬಹಳ ಇದೆ ಶಾಸಕರು ಅದನ್ನು ಬಗೆಹರಿಸದೆ ಸ್ವಂತ ಸಮಸ್ಯೆಗಳನ್ನು ಮಾತ್ರ ಬಗೆಹರಿಸಿಕೊಂಡಿದ್ದಾರೆ ಸ್ಥಳೀಯ ಸಮಸ್ಯೆಗಳೆಂದರೆ ರಸ್ತೆ, ನೀರು, ಫಾರೆಸ್ಟ್ ಸಮಸ್ಸೆ, ಹಕ್ಕುಪತ್ರ ವಿತರಣೆ , ಪ್ರಾಣಿಗಳ ಸಮಸ್ಯೆ, ಪ್ರಾಣಿಗಳ ರಕ್ಷಣೆ, ವಿದ್ಯುತ್ ಸಮಸ್ಯೆ ಹಾಗೂ ಮೊಬೈಲ್ ಟವರ್ ಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿದ್ದು ನೀವು ಅಧಿಕಾರ ನೀಡಿದ್ದಲ್ಲಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು.
ಕೆಪಿಸಿಸಿ ಕಾರ್ಯದರ್ಶಿಗಳಾದ ಬಿ ಎಂ ಸಂದೀಪ್ ಮಾತನಾಡಿ ೧೪ ವರ್ಷ ರಾಮನ ವನವಾಸವಾದರೆ ೨೦ ವರ್ಷ ಈ ಕ್ಷೇತ್ರದ ಸಾರ್ವಜನಿಕರ ವನವಾಸ ವಾಗಿದೆ ಇದರಿಂದ ಮುಕ್ತಿ ಸಿಗಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು. ಮಾಜಿ ವಿಧಾನ ಪರಿಷತ್ ಸದಸ್ಯರಾದ ಗಾಯತ್ರಿ ಶಾಂತೇಗೌಡ ರವರು ಮಾತನಾಡಿ ಬಿಜೆಪಿಯ ಭ್ರಷ್ಟಾಚಾರವನ್ನು ಕಿತ್ತೆಸೆಯ ಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು . ಕರೋನ ಸಂದರ್ಭದಲ್ಲಿ ಅನೇಕ ಜನ ಕರೋನದಿಂದ ಸತ್ತಿರಬಹುದು ಆದರೆ ಯಾರು ಸಹ ಊಟವಿಲ್ಲದೆ ಉಪವಾಸವಾಗಿ ಸತ್ತಿರುವ ದೃಶ್ಯ ನಾವೆಲ್ಲೂ ಕೇಳಿಲ್ಲ ಕಾರಣ ಏನೆಂದರೆ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆ ರಾಜ್ಯವನ್ನು ಹಸಿವಿನಿಂದ ಮುಕ್ತಿಗೊಳಿಸಿದೆ ಎಂದರು.
ಕೆಪಿಸಿಸಿ ವಕ್ತಾರ ಹೆಚ್ ಹೆಚ್ ದೇವರಾಜ್ ಮಾತನಾಡಿ ಶಾಸಕ ಸಿಟಿ ರವಿ ಸರ್ಕಾರದಿಂದ ರಸ್ತೆಗೆ ಅನುದಾನ ತರುತ್ತಾರೆ. ಆತನ ನೆಂಟ ರಸ್ತೆ ಮಾಡುತ್ತಾರೆ. ಇಂತಹ ಶಾಸಕನ ಅವಶ್ಯಕತೆ ನಮಗಿಲ್ಲ ನಮಗೆ ಉತ್ತಮ ಕೆಲಸ ಮಾಡುವ ಶಾಸಕರ ಅವಶ್ಯಕತೆ ಇದೆ ಆದ್ದರಿಂದ ಆತನನ್ನು ತೊಲಗಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್ ಡಿ ತಮ್ಮಯ್ಯನವರಿಗೆ ಬೆಂಬಲಿಸಬೇಕಾಗಿ ಕೇಳಿಕೊಂಡರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ ಮಹಮ್ಮದ್ ಮಾತನಾಡಿ ನನ್ನ ಅಧಿಕಾರದ ಅವಧಿಯಲ್ಲಿ ಈ ಭಾಗಕ್ಕೆ ಹಲವಾರು ಕಾಮಗಾರಿಗಳನ್ನು ಮಾಡಿರುತ್ತೇನೆ ಹಲವಾರು ಜನರಿಗೆ ಹಕ್ಕು ಪತ್ರವನ್ನು ನೀಡಿರುತ್ತೇನೆ ಈಗ ಹಕ್ಕು ಪತ್ರ ನೀಡಲು ಸಿ ಟಿ ರವಿಯ ಚೇಲಾಗಳು ೫೦ ಸಾವಿರ ರೂಗಳನ್ನು ಲಂಚ ಪಡೆಯುತ್ತಿದ್ದಾರೆ ಇಂತಹ ಭ್ರಷ್ಟ ಶಾಸಕರನ್ನು ಮನೆಗೆ ಕಳಿಸಿದರೆ ನಮ್ಮ ಸರ್ಕಾರ ಬಂದಾಗ ನಿಮಗೆ ಉಚಿತವಾಗಿ ಹಕ್ಕುಪತ್ರ ನೀಡುತ್ತೇವೆ ಎಂದರು. ನಂತರ ಜಾಗರದಲ್ಲಿರುವ ಸಂತ ಜೋಸೆಫರ ದೇವಾಲಯ ಹಾಗೂ ಮಳಲೂರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಸ್ಥಳೀಯರು ಪೂಜೆ ಸಲ್ಲಿಸಿ ಅಭ್ಯರ್ಥಿ ಗೆ ಪ್ರಸಾದ ನೀಡಿದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜೇಗೌಡ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು . ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ರೂಬೆನ್ ಮೊಸಸ್, ಆನಂದ್, ಸಿಲ್ವೆಸ್ಟರ್, ರಾಮ ಚಂದ್ರ, ಲಕ್ಷ್ಮಮ್ಮ, ಭರತ್, ಶಾಂತಕುಮಾರ್, ಸಿಂಸನ್, ಮಂಜು ಸ್ಥಳೀಯರಾದ ಸಿರವಾಸೆ ಪಂಚಾಯಿತಿ ಅಧ್ಯಕ್ಷೆ ಪ್ರೇಮಾಕ್ಷೀ ಉಪಸ್ಥಿತರಿದ್ದರು.