News Karnataka Kannada
Tuesday, May 07 2024
ಚಿಕಮಗಳೂರು

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಅನಿತಾಬಾಯಿಗೆ ಬೇಕಿದೆ ಆರ್ಥಿಕ ಧನ ಸಹಾಯ

ಚಿಕ್ಕಮಗಳೂರು ನಗರದ ಕೋಟೆ ನಿವಾಸಿ ಅನಿತ ಬಾಯಿ (37) ಅವರಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.
Photo Credit : NewsKarnataka

ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಕೋಟೆ ನಿವಾಸಿ ಅನಿತ ಬಾಯಿ (37) ಅವರಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರು ನಗರದ ಕೋಟೆ, ನಿವಾಸಿಯಾಗಿರುವ ಅನಿತ ಬಾಯಿ (37) ಕಳೆದ ಎರಡು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಎರಡೂ ಕಿಡ್ನಿಗಳು ಫೇಲೂರ್ ಆಗಿವೆ. ಅವರಿಗೆ ಚಿಕಿತ್ಸೆ ಮಾಡಿಸಿಕೊಂಡು ಆರೋಗ್ಯವನ್ನ ಸುಧಾರಿಸಿಕೊಳ್ಳಲು ಹಾಗೂ ವೈದ್ಯಕೀಯ ವೆಚ್ಚ ಭರಿಸಲು ಅವರಿಗೆ ಆರ್ಥಿಕ ನೆರವಿಲ್ಲ, ಹಾಗಾಗಿ ವೈದ್ಯಕೀಯ ಚಿಕಿತ್ಸೆ ಪಡೆದುಕೊಲ್ಲಳು ಸಾಧ್ಯವಾಗಿಲ್ಲ.

ಇತ್ತೀಚಿಗೆ ಅವರ ಆರೋಗ್ಯದ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿರುವುದರಿಂದ ವೈದ್ಯರನ್ನ ಭೇಟಿ ಮಾಡಿ ಪರಿಶೀಲಿಸಿದಾಗ ಈ ಕೂಡಲೇ ಚಿಕಿತ್ಸೆ ಮಾಡಿ ಕಿಡ್ನಿ ಕಸಿ/ ಬದಲಾವಣೆ ಮಾಡಲು ಹೇಳಿದ್ದು, ಇಲ್ಲವಾದಲ್ಲಿ ಪ್ರಾಣಕ್ಕೆ ಕುತ್ತು ಎಂದು ಹೇಳಿದ್ದಾರೆ.

ಸಧ್ಯಕ್ಕೆ ಅನಿತ ಬಾಯಿ ಅವರು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದು, ಕಿಡ್ನಿ ಕಸಿ/ ಬದಲಾವಣೆಗೆ ಆರ್ಥಿಕ ಸಹಾಯಕ್ಕಾಗಿ ವಿನಂತಿ ಮಾಡಿಕೊಂಡಿದ್ದಾರೆ.

ಅನಿತ ಬಾಯಿ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಇದ್ದು ಅವರಿನ್ನು ಚಿಕ್ಕ ಮಕ್ಕಳಾಗಿದ್ದು, ಒಬ್ಬಳು 6 ನೇ ತರಗತಿ ಮತ್ತೊಬ್ಬಳು ಪ್ರಥಮ ಪಿಯುಸಿ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಅವರನ್ನ ತಬ್ಬಳಿಗಳನ್ನಾಗಿ ಮಾಡದೆ ದಯಾಳುಗಳಾದ ತಾವುಗಳು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಹಾಗಾಗಿ ನಿಮ್ಮೆಲ್ಲರಿಂದ ಸಾಧ್ಯವಾದಷ್ಟು ಕನಿಷ್ಠ 100, 200, 300,400 ರೂಪಾಯಿ ಆಗಲಿ , ಅಥವಾ 500 ರೂಪಾಯಿ ಆಗಲಿ ತಮ್ಮ ಕೈಲಾದಷ್ಟು ಹಣವನ್ನು ನೀಡಿ ಸಹಾಯ ಮಾಡಲು ಮನವಿ ಮಾಡಿಕೊಂಡಿದ್ದಾರೆ.

ಅನಿತ ಬಾಯಿ ದೂರವಾಣಿ ಸಂಖ್ಯೆ: 9611373967
9535403880

ಬ್ಯಾಂಕ್ ಖಾತೆ ಸಂಖ್ಯೆ : 4869101003760
IFSC: CNRB0004869

ಪೋನ್ ಪೇ :9611373967
ಗೂಗಲ್ ಪೇ:9611373967

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು