News Karnataka Kannada
Saturday, April 27 2024
ಚಿಕಮಗಳೂರು

ಚಿಕ್ಕಮಗಳೂರು: ಬಂದೂಕು ಠೇವಣಿ ಇಡಲು ಮಲೆನಾಡಿಗರಿಗೆ ರಿಯಾಯ್ತಿ ನೀಡಲು ಒತ್ತಾಯ

Demand for rebate for malnadis to deposit guns
Photo Credit : News Kannada

ಚಿಕ್ಕಮಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಬಂದೂಕುಗಳನ್ನು ಠೇವಣಿ ಇಡುವುದಕ್ಕೆ ರಿಯಾಯ್ತಿ ನೀಡಬೇಕು ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಹೊಲ ದಗದ್ದೆ ಗಿರೀಶ್ ಜಿಲ್ಲಾ ಚುನಾವ ಣಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಮಲೆನಾಡು ಭಾಗದ ಬಹುತೇಕ ಜನರು ಆತ್ಮ ರಕ್ಷಣೆ ಹಾಗೂ ಕಾಡು ಪ್ರಾಣಿಗಳು, ಕಳ್ಳಕಾಕರ ಹಾವಳಿಯಿಂದ ರಕ್ಷಣೆ ಪಡೆಯಲೆಂದೇ ಬಂದೂಕು ಗಳನ್ನು ಹೊಂದಿರುತ್ತಾರೆ. ಹೆಚ್ಚಾಗಿ ಒಂಟಿ ಮನೆಗಳು ಹಾಗೂ ತೋಟದ ಮನೆಗಳಿರುವುದು ಇದಕ್ಕೆ ಕಾರಣವಾಗಿರುತ್ತದೆ.

ಇಂತಹ ಸ್ಥಿತಿಯಲ್ಲಿ ಬಂದೂಕುಗಳನ್ನು ಠೇವಣಿ ಇಟ್ಟಲ್ಲಿ ದುಷ್ಕರ್ಮಿಗಳು ಇದೇ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಬಂದೂಕು ಠೇವಣಿ ಇಡುವುದರಿಂದ ರಿಯಾಯ್ತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಇದು ಕಾಫಿ, ಕಾಳು ಮೆಣಸು ಇತ್ಯಾದಿ ತೋಟದ ಬೆಳೆಗಳ ವ್ಯಾಪಾರ, ವಹಿವಾಟಿನ ದಿನಗಳಾಗಿವೆ. ಬಹುತೇಕ ಮಂದಿ ಇನ್ನೂ ಉತ್ಪನ್ನಗಳನ್ನು ಗೋದಾಮುಗಳು ಹಾಗೂ ತೋಟದ ಮನೆಗಳಲ್ಲಿ ದಾಸ್ತಾನಿಟ್ಟುಕೊಂಡಿದ್ದಾರೆ. ಅವುಗಳ ರಕ್ಷಣೆಗೆ ಬಂದೂಕು ಅಗತ್ಯವಾಗಿರುತ್ತದೆ ಎಂದಿದ್ದಾರೆ.

ಈ ಬಾರಿ ಬಂದೂಕು ಠೇವಣಿ ಯಿಂದ ರಿಯಾಯ್ತಿ ಪಡೆಯಲು ಜಿಲ್ಲಾಡಳಿತ ಅನುವು ಮಾಡಿಕೊಡುವ ಕ್ರಮ ಕೈಗೊಂಡಿದೆ ಆದರೂ ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರೈ ಸುವಲ್ಲಿ ಚುನಾವಣೆಯೇ ಮುಗಿದು ಹೋಗುತ್ತದೆ. ಅಲ್ಲದೆ ಸುಲಭಕ್ಕೆ ರಿಯಾಯ್ತಿ ಸಿಗುವ ಸಾಧ್ಯತೆಯೂ ಇಲ್ಲದಂತಾಗಿದೆ. ಈ ಕಾರಣಕ್ಕೆ ಯಾವುದೇ ನಿಯಮಗಳನ್ನು ವಿಧಿಸದೆ ನೇರ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಲಿಂಕ್‌ಗೆ ವಿಧಿಸಲಾಗಿರುವ ೧೦೦೦ ರೂ. ದಂಡ ರೂಪದ ಶುಲ್ಕವನ್ನು ಕೂಡಲೇ ರದ್ದು ಪಡಿಸಬೇಕು ಎಂದು ಗಿರೀಶ್ ಒತ್ತಾಯಿಸಿದ್ದಾರೆ.

ಬಹುತೇಕ ಮಧ್ಯಮ ವರ್ಗದವರು, ಬಡ ಜನರು ಒಂದಲ್ಲಾ ಒಂದು ಕಾರ್ಯ ಕ್ಕಾಗಿ ಪ್ಯಾನ್ ಕಾರ್ಡ್ ಹೊಂದಿರುತ್ತಾರೆ. ಇನ್ನು ಆಧಾರ್ ಕಾರ್ಡ್‌ನ್ನು ಪ್ರತಿಯೊಬ್ಬರು ಹೊಂದಿರಲೇಬೇಕಾಗಿದೆ. ಹೀಗಿರುವಾಗ ಬಹುತೇಕರಿಗೆ ೧೦೦೦ ರೂ. ಶುಲ್ಕ ಭರಿಸಿ ಲಿಂಕ್ ಮಾಡಿಸು ವುದು ಹೊರೆಯಾU ತ್ತಿದೆ. ಈ ಹಿನ್ನೆಲೆಯಲ್ಲಿ ಶುಲ್ಕವನ್ನು ರದ್ದು ಪಡಿಸುವುದರ ಜೊತೆಗೆ ಆಧಾರ್-ಪ್ಯಾನ್ ಲಿಂಕ್ ಮಾಡಲು ಯಾವುದೇ ಅಂತಿಮ ಗಡುವು ವಿಧಿಸದೆ ನಿರಂತರವಾಗಿ ಈ ಪ್ರಕ್ರಿಯೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಶೂನ್ಯ ಠೇವಣಿ ಖಾತೆಗಳನ್ನು ತೆರಸಿದ್ದೇವೆಂದು ಹೇಳಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಈಗ ಆಧಾರ್ ಲಿಂಕ್‌ಗೆ ದಂಡದ ರೂಪದಲ್ಲಿ ಅದೇ ಖಾತೆಗಳಿಗೆ ಹಣಕಟ್ಟಿಸಿಕೊಳ್ಳಲು ಮುಂದಾಗಿದೆ ಎಂದು ದೂರಿರುವ ಅವರು, ಆಧಾರ್ ಲಿಂಕ್‌ಗೆ ಈ ವರೆಗೆ ದಂಡದ ರೂಪದಲ್ಲಿ ೧ ಸಾವಿರ ರೂ. ಭರಿಸಿರುವ ಹಣವನ್ನು ಅವರವರ ಖಾತೆಗೆ ಮರಳಿ ಜಮೆ ಮಾಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇದಲ್ಲದೆ ಖಾಸಗಿ ಫ್ರಾಂಚೈಸಿಗಳು ಆಧಾರ್-ಪ್ಯಾನ್ ಲಿಂಕ್ ಮಾಡಿ ಕೊಡಲು ೨೦೦ ರಿಂದ ೩೦೦ ರೂ. ದುಬಾರಿ ಶುಲ್ಕ ವಿಧಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಹಾಗೂ ಆನ್‌ಲೈನ್‌ನಲ್ಲಿ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳೀಕರಣಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು