ಚಿಕ್ಕಮಗಳೂರು: ಸೌಂದರ್ಯೀಕರಣದ ಹೆಸರಲ್ಲಿ ಬಸವನಹಳ್ಳಿ ಕೆರೆಮುಚ್ಚಿ, ತೋಟಗಾರಿಕೆ ಇಲಾಖೆ ಗಿಡ, ಮರ ಕಡಿದು ಜಿಲ್ಲಾ ಸಂಕೀರ್ಣ ಮಾಡಲು ಹೊರಟಿರುವ ಶಾಸಕರು ಅಭಿವೃದ್ಧಿ ಹೆಸರಲ್ಲಿ ತೊಗಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಟೀಕಿಸಿದರು.
ಜಿಲ್ಲಾ ಸಂಕೀರ್ಣ ನಿರ್ಮಿಸಲು ದಂಟರಮಕ್ಕಿಯಲ್ಲಿರುವ ತೋಟಗಾ ರಿಕೆ ಇಲಾಖೆಯಲ್ಲಿನ ವಿವಿಧ ಜಾತಿಯ ೧೩೫೦ ಮರಗಳನ್ನು ಕಡಿದು ರುಳಿಸಲಾಗುತ್ತಿದೆ. ಸಪೋಟ, ಮಾವು, ತೆಂಗು, ಹಲಸು, ನೆಲ್ಲಿ, ಪನ್ನೇರಲು ಮತ್ತಿತರೆ ಅನೇಕ ಜಾತಿಯ ಮರ ಗಳು ಇಲ್ಲಿ ಹತ್ತಾರು ವರ್ಷಗಳಿಂದ ಬೆಳೆಸಿದ್ದು ಇದರಿಂದ ರೈತರಿಗೆ ಕಸಿ ಮಾಡಿದ ಸಸಿಗಳು ಸಿಗುತ್ತಿದ್ದವು. ಮತ್ತೆ ಅಂತಹ ಸಸ್ಯ ಕ್ಷೇತ್ರ ಮಾಡಲು ಸದ್ಯ ದಲ್ಲಿ ಸಾಧ್ಯವೇ ಎಂದು ಪ್ರಶ್ನಿಸಿದರು.
ಈ ಹಿಂದೆ ಕುರುವಂಗಿ ರಸ್ತೆ ಯಲ್ಲಿ ಜಿಲ್ಲಾ ಸಂಕೀರ್ಣ ನಿರ್ಮಿ ಸಲು ಜಾಗ ಗುರುತಿಸಿ ೫ ಕೋಟಿ ರೂ ವೆಚ್ಚದ ಕಾಮಗಾರಿಯೂ ನಡೆದಿದೆ. ಜಾಗ ನೀಡಿದ್ದ ರೈತರು ನ್ಯಾಯಾಲಯದ ಮೊರೆ ಹೋದರು. ಜಾಗ ಗುರುತು ಮಾಡುವಾಗ ಶಾಸಕ, ಅಧಿಕಾರಿಗಳಿಗೆ ಸಂಭವನೀಯ ಸಮಸ್ಯೆಯ ಅರಿವಿರಲಿಲ್ಲವೇ ಎಂದು ಪ್ರಶ್ನಿಸಿ ಈ ಸಮಸ್ಯೆಯನ್ನು ರೈತ ರೊಂದಿಗೆ ಚರ್ಚಿಸಿ ಪರಿಹರಿಸಬಹು ದಿತ್ತು. ಆದರೆ, ಆ ಕೆಲಸ ಮಾಡದೆ ರೈತರ ಜೀವನಾಡಿಯಾಗಿದ್ದ ತೋಟ ಗಾರಿಕೆ ಇಲಾಖೆಯ ಸಸ್ಯಕ್ಷೇತ್ರವನ್ನೇ ನಿರ್ನಾಮ ಮಾಡಲು ಹೊರಟಿ ದ್ದಾರೆ. ಈ ಕ್ರಮ ಮತ ಹಾಕಿದ ರೈತರಿಗೆ ಶಾಸಕರು ಮಾಡಿದ ಅನ್ಯಾ ಯವಾಗಿದೆ ಎಂದು ದೂರಿದರು.
ತೋಟಗಾರಿಕೆ ಇಲಾಖೆಗೆ ಇಂದಾವರದ ಬಳಿ ಬದಲಿ ಜಾಗ ಕೊಡುವುದಾಗಿ ಮೌಖಿಕವಾಗಿ ಹೇಳಿ ದ್ದಾರೆ ಅದು ಕಾರ್ಯಗತವಾಗಿಲ್ಲ. ಈಗಿರುವ ತೋಟಗಾರಿಕೆ ಇಲಾಖೆ ಸಸ್ಯಕ್ಷೇತ್ರವನ್ನು ಇನ್ನೊಂದು ಇಲಾಖೆ ಗೆ ಬಿಟ್ಟುಕೊಡಲು ಜಿಲ್ಲಾ ಪಂಚಾ ಯಿತಿಯಲ್ಲಿ ನಿರ್ಣಯ ಕೈಗೊಳ್ಳಬೇ ಕು. ಈ ಸಂಬಂಧ ಯಾವ ಪ್ರಕ್ರಿಯೆ ನಡೆದಿದೆ ಎಂಬುದನ್ನು ಜಿಲ್ಲಾ ಪಂ ಚಾಯಿತಿ ಸಿಇಒ ಅವರು ಸ್ಪಷ್ಟಪಡಿ ಸಬೇಕು ಎಂದು ಒತ್ತಾಯಿಸಿದರು.
ಮರ ಹನನ ಮಾಡಲು ಹೊರಟಿ ರುವ ಶಾಸಕರು ಕಳೆದ ೨೦ ವರ್ಷದಲ್ಲಿ ಎಷ್ಟು ಮರ ಬೆಳೆಸಿದ್ದಾರೆ.ಪ್ರಕೃತಿ ಉಳಿ ವಿಗೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿ ರೈತರು ಮತ್ತು ಸರಕಾರಕ್ಕೆ ಆಗಿರುವ ನಷ್ಟ ಭರ್ತಿ ಮಾಡುವವರು ಯಾರು ಎಂದು ಶಾಸಕರು ಹೇಳ ಬೇಕು ಎಂದರು. ಮುಖಂಡರಾದ ಬಸವ ರಾಜು, ಎನ್.ಡಿ.ಚಂದ್ರಪ್ಪ, ಜಯರಾ ಜಅರಸ್,ಸಿದ್ದೇಶ್ಗೋಷ್ಠಿಯಲ್ಲಿದ್ದರು.