ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಪೋಷಕರ ಗಮನಕ್ಕೆ ವಿಶೇಷಚೇತನ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶೇ.40 ಮತ್ತು ಅದಕ್ಕಿಂತ ಹೆಚ್ಚಿಗೆ ನ್ಯೂನ್ಯತೆ ಇರುವ ಬುದ್ಧಿಮಾಂದ್ಯ, ಶ್ರವಣದೋಷ ಮತ್ತು ಅಂಧತ್ವ ವಿಕಲತೆ ಹೊಂದಿರುವ ವಿಶೇಷಚೇತನ ಮಕ್ಕಳಿಗೆ ಒಂದರಿಂದ ಹತ್ತನೇ ತರಗತಿಯವರೆಗೆ ಜೂನ್1 ರಿಂದ ದಾಖಲಾತಿ ಪ್ರಾರಂಭವಾಗುತ್ತದೆ.
ವಿಶೇಷ ಶಿಕ್ಷಣ ತರಬೇತಿ ಪಡೆದ ನುರಿತ ಶಿಕ್ಷಕರಿಂದ ಪಾಠ ಪ್ರವಚನ, ಕ್ರೀಡೆ, ಮಕ್ಕಳಿಸಗೆ ವೃತ್ತಿ ತರಬೇತಿ ಹಾಗೂ ಪೋಷಕರಿಗೆ ಮಕ್ಕಳ ಪೋಷಣಾ ತರಬೇತಿ ನೀಡಲಾಗುವುದಲ್ಲದೆ, ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮುಖ್ಯೋಪಾದ್ಯಯರು ಲಕ್ಷ್ಮಣಗೌಡ ಹೆಚ್.ಎಸ್. (ದೂ.ಸಂ. 9481650801) ಮತ್ತು ನಿವೇದಿತಾ ಬುದ್ಧಿಮಾಂದ್ಯ ಮತ್ತು ಶ್ರವಣದೋಷ (ಕಿವುಡ ಮತ್ತು ಮೂಕ) ವಸತಿಯುತ ಪಾಠಶಾಲೆ ಕಡೂರು, ಮುಖ್ಯೋಪಾದ್ಯಯರು ಸೋಮಶೇಖರ್ (ದೂ.ಸಂ. 7892107809) ಮತ್ತು ಕಛೇರಿ ದೂ. ಸಂ. 08262-228171 ಅನ್ನು ಸಂಪರ್ಕಿಸಬಹುದೆಂದು ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.