News Karnataka Kannada
Monday, April 29 2024
ಚಿಕಮಗಳೂರು

ಚಿಕ್ಕಮಗಳೂರು: 1 ರಿಂದ 10ನೇ ತರಗತಿ ವಿಶೇಷ ಚೇತನ ಮಕ್ಕಳಿಗೆ ವಿಶೇಷ ಶಿಕ್ಷಣ

Special education for differently abled children of classes 1 to 10
Photo Credit : News Kannada

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಪೋಷಕರ ಗಮನಕ್ಕೆ ವಿಶೇಷಚೇತನ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶೇ.40 ಮತ್ತು ಅದಕ್ಕಿಂತ ಹೆಚ್ಚಿಗೆ ನ್ಯೂನ್ಯತೆ ಇರುವ ಬುದ್ಧಿಮಾಂದ್ಯ, ಶ್ರವಣದೋಷ ಮತ್ತು ಅಂಧತ್ವ ವಿಕಲತೆ ಹೊಂದಿರುವ ವಿಶೇಷಚೇತನ ಮಕ್ಕಳಿಗೆ ಒಂದರಿಂದ ಹತ್ತನೇ ತರಗತಿಯವರೆಗೆ ಜೂನ್1 ರಿಂದ ದಾಖಲಾತಿ ಪ್ರಾರಂಭವಾಗುತ್ತದೆ.

ವಿಶೇಷ ಶಿಕ್ಷಣ ತರಬೇತಿ ಪಡೆದ ನುರಿತ ಶಿಕ್ಷಕರಿಂದ ಪಾಠ ಪ್ರವಚನ, ಕ್ರೀಡೆ, ಮಕ್ಕಳಿಸಗೆ ವೃತ್ತಿ ತರಬೇತಿ ಹಾಗೂ ಪೋಷಕರಿಗೆ ಮಕ್ಕಳ ಪೋಷಣಾ ತರಬೇತಿ ನೀಡಲಾಗುವುದಲ್ಲದೆ, ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮುಖ್ಯೋಪಾದ್ಯಯರು ಲಕ್ಷ್ಮಣಗೌಡ ಹೆಚ್.ಎಸ್. (ದೂ.ಸಂ. 9481650801) ಮತ್ತು ನಿವೇದಿತಾ ಬುದ್ಧಿಮಾಂದ್ಯ ಮತ್ತು ಶ್ರವಣದೋಷ (ಕಿವುಡ ಮತ್ತು ಮೂಕ) ವಸತಿಯುತ ಪಾಠಶಾಲೆ ಕಡೂರು, ಮುಖ್ಯೋಪಾದ್ಯಯರು ಸೋಮಶೇಖರ್ (ದೂ.ಸಂ. 7892107809) ಮತ್ತು ಕಛೇರಿ ದೂ. ಸಂ. 08262-228171  ಅನ್ನು ಸಂಪರ್ಕಿಸಬಹುದೆಂದು ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು