ಚಿಕ್ಕಮಗಳೂರು: ಮೂಡಿಗೆರೆ ವಿಧಾನಸಭಾ ಕ್ಷೇತ್ರ (ಪ.ಜಾ) ಅಂಚೆ ಮತ ಪತ್ರ ೧೨ಡಿ ಪಡೆದ ಅರ್ಹ ವ್ಯಕ್ತಿಗಳ ಪೈಕಿ ೧೭೬ ಹಿರಿಯ ನಾಗರಿಕರು ೩೧ ವಿಶೇಷ ಚೇತನ ರವರು ಮನೆಯಿಂದಲೇ ಮತ ಚಲಾಯಿಸುವ ಬಗ್ಗೆ ರಂದು ಸಂಬಂಧಿಸಿದ ಮತಗಟ್ಟೆಗಳಿಗೆ ಹಾಗೂ ತಂಡಗಳೊಂದಿಗೆ ಕಳಿಸಲಾಯಿತು.
ಅಂಚೆ ಮತ ಪತ್ರ ನಮೂನೆ -೧೨ಡಿ ಪಡೆದ ಅರ್ಹ ವ್ಯಕ್ತಿಗಳ ಪೈಕಿ ಆವತಿ ಹೋಬಳಿ, ಕಣತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿರುವ ಸಂಖ್ಯೆ ೩೮ ರ ಮತಗಟ್ಟೆಯ ಹಿರಿಯ ಮತದಾರರಾದ ೧೦೩ ವರ್ಷ ವಯಸ್ಸಿನ ಬೀಬಿ ಜಾನ್ ಮೈದೀನ್ ಬಿನ್ ಮೈದೀನ್ ಇವರ ಮನೆಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿಸುವ ತಂಡದೊಂದಿಗೆ ಭೇಟಿ ನೀಡಿದ ಚುನಾವಣಾಧಿಕಾರಿಗಳಾದ ರಾಜೇಶ್ ಹೆಚ್.ಡಿ. ರವರು ಬೀಬಿ ಜಾನ್ ಮೈದೀನ್ ಬಿನ್ ಮೈದೀನ್ ರವರಿಗೆ ಹೂ ಗುಚ್ಛ ನೀಡಿ ಗೌರವಿಸಿ ಅವರ ಮನೆಯಿಂದಲೇ ಅವರಿಂದ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿಸಿದರು.
ಅಂಚೆ ಮತ ಪತ್ರ ನಮೂನೆ -೧೨ಡಿ ಪಡೆದ ಅರ್ಹ ವ್ಯಕ್ತಿಗಳ ಪೈಕಿ ಬಣಕಲ್ ಹೋಬಳಿ, ಹಳೇಹಳ್ಳಿ (ಭಾರತಿ ಬೈಲು) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿರುವ ಮತಗಟ್ಟೆಯ ಭಾಗದ ಸಂಖ್ಯೆ ೧೩೯ ಕ್ರ.ಸಂ. ೮೩೬ ರ ಹಿರಿಯ ಮತದಾರರಾದ ೧೦೪ ವರ್ಷ ವಯಸ್ಸಿನ ಪುಟ್ಟಮ್ಮ ಇವರ ಮನೆಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿಸುವ ತಂಡದೊಂದಿಗೆ ಭೇಟಿ ನೀಡಿದ ಸಹಾಯಕ ಚುನಾವಣಾಧಿಕಾರಿ ಗಳಾದ ವೈ. ತಿಪ್ಪೇಸ್ವಾಮಿ ರವರು ಪುಟ್ಟಮ್ಮ ರವರಿಗೆ ಹೂಗುಚ್ಛ ನೀಡಿ ಗೌರವಿಸಿ ಅವರ ಮನೆಯಿಂದಲೇ ಅವರಿಂದ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿಸಿದರು. ಚುನಾವಣಾಧಿ ಕಾರಿಗಳಾದ ಹೆಚ್.ಡಿ. ರಾಜೇಶ್ ಹಾಗೂ ಸಹಾಯಕ ಚುನಾವಣಾಧಿಕಾರಿಗಳಾದ ವೈ. ತಿಪ್ಪೇಸ್ವಾಮಿರವರು ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಳೆದ ಒಂದು ವಾರದಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಳಿತ ಮುಂದುವರಿಯುತ್ತಿದ್ದು, ಇಂದು ಚಿನ್ನದ ಬೆಲೆ ಕೊಂಚ ಕಡಿಮೆಯಾಗಿದ್ದು, ಪ್ರತಿ…
ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗ ಗ್ರಾಮಾಂತರದಲ್ಲಿ ಒಂದು ಲಕ್ಷದ ಮತ ದಿಂದ ರಾಘವೇಂದ್ರ ಗೆಲ್ಲಲಿದ್ದಾರೆ ಎಂದು ಮಜಿಮುಖ್ಯಮಂತ್ರಿ ಕುಮಾರ ಸ್ವಾಮಿ…
ಪ್ರಜ್ವಲ್ ರೇವಣ್ಣ ಉಚ್ಚಾಟನೆ ಬಗ್ಗೆ ಮಾಜಿ ಸಿಎಂ ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದು, ನಿನ್ನೆಯೇ ಈ ಬಗ್ಗೆ ನಮ್ಮ…
ಒಲಿಂಪಿಕ್ಸ್ ಆಟಗಾರರ ಮೇಲೆ ಕಿರುಕುಳವಾಗಿತ್ತು, ಮಹಿಳೆಯ ಮೇಲೆ ಅತ್ಯಾಚಾರವಾಗಿತ್ತು. ಆಗ ಪ್ರಧಾನಿ ಮೋದಿ ಸುಮ್ಮನೆ ಇದ್ದರಲ್ಲದೆ ಇಂದು ಕರ್ನಾಟಕದಲ್ಲಿ ಸಾವಿರಾರು…
ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಗೆಲವು ನಿಶ್ಚಿತವಾಗಿದೆ ಎಂದು ಕಾಂಗ್ರೆಸ್ ಮುಖಂಡ ವಿಶ್ವರಾಧ್ಯ ದಳವಾಯಿ ಸುಂಬಡ ಅವರು…
ದೇಶ ಭಕ್ತಿಯನ್ನು ಈ ಬಿಜೆಪಿಯವರಿಗೆ ಹಾಗೂ ಪ್ರಧಾನಿಗೆ ಗುತ್ತಿಗೆ ಕೊಟ್ಟಿಲ್ಲ. ನಾವು ಕೂಡ ದೇಶ ಭಕ್ತರೇ ಎಂದು ಮಾಜಿ ಮುಖ್ಯಮಂತ್ರಿ…