News Karnataka Kannada
Tuesday, April 30 2024
ಚಿಕಮಗಳೂರು

ಚಿಕ್ಕಮಗಳೂರು: ಸಂಗೊಳ್ಳಿರಾಯಣ್ಣ ಪ್ರತಿಮೆ ಸ್ಥಾಪನೆ

Chikkamagaluru: Sangolli Rayanna statue installed
Photo Credit : News Kannada

ಚಿಕ್ಕಮಗಳೂರು: ಹತ್ತು ಲಕ್ಷ ರೂ ವೆಚ್ಚದ ೭೩೦ ಕೆ.ಜಿಯ ಸಂಗೊಳ್ಳಿ ರಾಯಣ್ಣನವರ ಕಂಚಿನ ಪ್ರತಿಮೆನ್ನು ದಂಟರಮುಕ್ಕಿ ವೃತ್ತದಲ್ಲಿ ಪ್ರತಿಷ್ಠಾಪಿಸಲಾಯಿತು.

ಸಂಗೊಳ್ಳಿ ರಾಯಣ್ಣ ವೇಧಿಕೆ ಜಿಲ್ಲಾಧ್ಯಕ್ಷ ಕೆ.ಎಸ್.ಪುಷ್ವರಾಜ್ ಮಾತನಾಡಿ ಕ್ಷೇತ್ರದ ಶಾಸಕ ಸಿ.ಟಿ.ರವಿ ಅವರು ನೇತೃತ್ವದಲ್ಲಿ ಬೆಂಗಳೂರಿನ ಬಿಡದಿಯಲ್ಲಿ ೧೦ಲಕ್ಷ ರೂ ವೆಚ್ಚದಲ್ಲಿ ೭೩೦ ಕೆ.ಜಿಯ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ನಿರ್ಮಿಸಿ ಇಂದು ಚಿಕ್ಕಮಗಳೂರಿಗೆ ತಂದು ಸ್ಥಾಪನೆಯನ್ನು ಮಾಡಲಾಗುತ್ತಿದೆ ಉಸ್ತುವಾರಿ ಸಚಿವ ಬೈರತಿಬಸವರಾಜ್, ಮಾಜಿ ಸಚಿವ ಈಶ್ವರಪ್ಪ ಮತ್ತು ಕ್ಷೇತ್ರದ ಶಾಸಕರಾದ ಸಿ.ಟಿ.ರವಿ ಉದ್ಘಾಟನಾ ಸಮಾರಂಭವನ್ನು ಮಾಡಲಾಗುವುದೆಂದು ತಿಳಿಸಿದರು.

ನಗರಸಭೆ ನಾಮಿನಿ ಸದಸ್ಯ ಮೋಹನ್‌ಕುಮಾರ್ ಮಾತನಾಡಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ೭೩೦ ಕೆ.ಜಿಯ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ, ದಂಟರಮುಕ್ಕಿ ಸರ್ಕಲ್‌ನಲ್ಲಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಇಂದು ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಇದೇ ತಿಂಗಳ ೨೬ ರಂದು ಸಚಿವರು ಮತ್ತು ಶಾಸಕರು ಸಮಾಜದ ಗುರುಗಳು ಉದ್ಘಾಟನೆ ಮಾಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಅಶೋಕ್, ಕುಮಾರಸ್ವಾಮಿ, ಸೋಮಣ್ಣ, ನಾರಾಯಣ್, ಗಂಗಣ್ಣ, ಸಂಜೀವ್, ಶ್ರೀನಿವಾಸ್, ಅಜ್ಜೇಗೌಡ, ಬೀರೇಗೌಡ, ಶಿವಣ್ಣ, ಚಂದ್ರಣ್ಣ, ರವಿ, ತಿಪ್ಪೇಸ್ವಾಮಿ, ರಾಜು ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು