ಚಿಕ್ಕಮಗಳೂರು: ಜನ ಕೊಟ್ಟ ಅಧಿಕಾರವನ್ನು ಎಂದಿಗೂ ದುರುಪ ಯೋಗ ಮಾಡಿಕೊಂಡಿಲ್ಲ. ಚಿಕ್ಕಮಗ ಳೂರಿನ ಅಭಿವೃದ್ಧಿ, ಜನ ಹಿತಕ್ಕೆ ಬಳಸಿ ಕೊಂಡಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ, ಶಾಸಕ ಸಿ.ಟಿ.ರವಿ ಹೇಳಿದರು.
ಅವರು ಕ್ಷೇತ್ರದ ದುಂಗೆರೆ, ಎಂ.ಎಂ.ಡಿ.ಹಳ್ಳಿ, ದಂಬದ ಹಳ್ಳಿ, ನಲ್ಲೂರು, ಉಂಡೇದಾಸರಹಳ್ಳಿ ಗ್ರಾಮದಲ್ಲಿ ಚುನಾವಣೆ ಪ್ರಚಾರ, ಮತಯಾಚನೆ ಮಾಡಿ ಮಾತನಾಡಿದರು.
ಸತತವಾಗಿ ಹಲವು ವರ್ಷಗಳಿಂದ ನನ್ನನ್ನು ಗೆಲ್ಲಿಸಿಕೊಂಡು ಬಂದಿದ್ದೀರಿ, ನನಗಿಂತ ಮೊದಲು ಸಗೀರ್ ಅಹ ಮದ್ ೧೫ ವರ್ಷ ಶಾಸಕರಾಗಿ, ೧೦ ವರ್ಷ ಮಂತ್ರಿಯಾಗಿದ್ದರು ಸಹ ಉಂಡೇದಾಸರಹಳ್ಳಿ ಸೇತುವೆ ನಿರ್ಮಾಣ ಮಾಡಲು ಬಿಜೆಪಿ ಸರ್ಕಾರ ಬರಬೇಕಾಯಿತು, ಕಾಲು ಇಟ್ಟಲೆಲ್ಲ ಎರೆಮಣ್ಣಿನಲ್ಲಿ ಹೂತುಹೋಗುತ್ತಿದ್ದ ರಸ್ತೆಗಳನ್ನು ಡಾಂಬರ್ ರಸ್ತೆಗಳನ್ನಾಗಿ ಮಾಡಲಾಯಿತು, ರಸ್ತೆ ಮತ್ತು ಸೇತುವೆ ನಿರ್ಮಾಣವಾದ ಮೇಲೆ ಭೂಮಿಯ ಜತೆಗೆ ಜನರ ಬದುಕಿಗೂ ಬೆಲೆ ದೊರೆಯಿತು ಎಂದರು.
ನೀವು ನೀಡಿದ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದೆ ೬೩೦ ಕೋಟಿ ರೂ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜನ್ನು ತೇಗೂರು ಬಳಿ ನಿರ್ಮಾಣವಾಗುತ್ತಿದ್ದು, ಬಡವರಿಗೆ ಅನುಕೂಲವಾಗಲಿದೆ, ಕಡೂರು ಮತ್ತು ಚಿಕ್ಕಮಗಳೂರು ರಸ್ತೆ ಮುಕ್ತಾಯದ ಹಂತದಲ್ಲಿದೆ, ಬೇಲೂರು ಮತ್ತು ಹಾಸನ ಚತುಷ್ಪಥ ರಸ್ತೆ ಮತ್ತು ಚಿಕ್ಕಮಗಳೂರು, ಬೇಲೂರು, ಹಾಸನ ರೈಲ್ವೇ ಯೋಜನೆ ಮಂಜೂರು ಮಾಡಿಸಲಾಗಿದೆ.
ಜಿಲ್ಲೆಗೆ ಹೊಸ ವಿಶ್ವ ವಿದ್ಯಾಲಯ, ಒಳಾಂಗಣ ಕ್ರೀಡಾಂಗಣ ಕೆಲಸ ಪ್ರಗತಿಯಲ್ಲಿದೆ, ಕ್ರಿಕೇಟ್ ಸ್ಟೇಡಿಯಂ, ಕ್ಯಾನ್ಸರ್ ಆಸ್ಪತ್ರೆ, ವಿಜ್ಞಾನ ಕೇಂದ್ರ, ೯ಕೋಟಿರೂ ವೆಚ್ಚದ ಅಂಬೇಡ್ಕರ್ ಭವನ, ಎಲ್ಲಾ ಗ್ರಾಮಗಳ ದೇವಸ್ಥಾನಕ್ಕಾಗಿ ಅನುದಾನವನ್ನು ನೀಡುವುದರ ಮೂಲಕ ಶಕ್ತಿ ಮೀರಿ ಕೆಲಸವನ್ನು ಮಾಡಲಾಗಿದೆ, ತೆಂಗಿನ ಮರವನ್ನು ನೆಟ್ಟು ನೀರು ಗೊಬ್ಬರವನ್ನು ಹಾಕಿ ಬೆಳಿಸಿದ್ದೀರಿ ಫಸಲನ್ನು ಸಹ ಕೊಡುತ್ತಿದೆ ಇಂತಹ ಸಂದರ್ಭದಲ್ಲಿ ಫಸಲನ್ನು ಕೊಡುತ್ತಿರುವ ಮರವನ್ನು ಕಡಿದರೆ ಗ್ರಾಮಕ್ಕೂ ಹಾಗೂ ಜಿಲ್ಲೆಗೂ ನಷ್ಟ ಎಂದರು.
ಸಂಬಂದವನ್ನು ಕಟ್ಟುವ ಸಲುವಾಗಿ ಚಿಕ್ಕಮಗಳೂರು ಹಬ್ಬವನ್ನು ನಡೆಸಲಾಯಿತು, ದಾರಿಯಲ್ಲಿ ಹೋಗುತ್ತಿರುವಾಗ ಚಿಕ್ಕಮಕ್ಕಳು ಸಹ ಸಿ.ಟಿ.ರವಿ ಅವರು ಎಂದು ಗುರುತಿಸಿ ರವಿ ಅಣ್ಣ ಎಂದು ಕರೆಯುತ್ತಾರೆ, ಪ್ರೀತಿ, ವಿಶ್ವಾಸ ಮತ್ತು ಸಂಬಂದವನ್ನು ಕಟ್ಟುವ ರಾಜಕಾರಣವನ್ನು ಮಾಡಿದ್ದೇನೆ, ಬಿಜೆಪಿ ಸರ್ಕಾರವು ಯುಗಾದಿ, ಗಣೇಶ ಹಬ್ಬ, ದೀಪಾವಳಿ ಹಬ್ಬಕ್ಕೆ ೩ ಸಿಲಿಂಡರ್ಗಳನ್ನು ಉಚಿತವಾಗಿ ನೀಡುವ ನಿರ್ಧಾರವನ್ನು ಮಾಡಿದೆ.
ಆಯುಷ್ಮಾನ್ ಭಾರತ ಯೋಜ ನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಒಂದು ಕುಟುಂಬಕ್ಕೆ ೫ ಲಕ್ಷದವರೆಗಿನ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನರೇಂದ್ರ ಮೋದಿಯವರು ಜಾರಿಗೆ ತಂದಿದ್ದಾರೆ, ೫ ಕೆ.ಜಿ ಅಕ್ಕಿಯ ಜತೆಗೆ ೫ ಕೆ.ಜಿ ಸಿರಿದಾನ್ಯ, ೨೫ ಯುನಿಟ್ ವಿದ್ಯುತ್, ೨೦೦೦ರೂ ವಿದವಾ ವೇತನ, ೩೦೦೦ ಅಂಗವಿಕಲವೇತನ ಕೊಡಲು ಪಕ್ಷ ತೀರ್ಮಾನಿಸಲಾಗಿದೆ, ಎಸ್ಸಿ/ಎಸ್ಟಿ ಒಳಮೀಸಲಾತಿಯನ್ನು ನೀಡಲಾಗುತ್ತಿದ್ದು, ನನ್ನ ಅವಧಿಯಲ್ಲಿ ಜಿಲ್ಲೆಗೆ ೫೨ ಅಂಬೇಡ್ಕರ್ ಭವನವನ್ನು ಮಂಜೂರು ಮಾಡಿಸಲಾಗಿದೆ ಎಂದರು.
ಸಿ.ಟಿ.ರವಿಯನ್ನು ರಾಜಕೀಯವಾಗಿ ಮುಗಿಸಬೇಕೆಂದು ಹೋರಟಿದ್ದಾರೆ, ನಿಮ್ಮ ಮನೆ ಮಗ ಎಂದು ಭಾವಿಸಿ ಮನೆ ಮಗನನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು ನಾನು ಒಳ್ಳೆಯ ಕೆಲಸವನ್ನು ಮಾಡಿದ್ದೇನೆಂದರೆ, ಭಾರತೀಯ ಜನತಾ ಪಾರ್ಟಿಗೆ ನಿಮ್ಮ ಓಟುಗಳನ್ನು ನೀಡಿ, ಒಂದೊಂದು ಮತವು ಅತಿ ಮುಖ್ಯ, ಒಂದು ಲಕ್ಷ ಓಟುಗಳನ್ನು ಮಾಡುವ ಜವಾಬ್ದಾರಿ ನಿಮ್ಮದು, ಕಮಲದ ಗುರುತಿಗೆ ಮತ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ನಿಗಮ ಮಂಡಳಿ ಅಧ್ಯಕ್ಷ ವೆಂಕಟೇಶ್, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸದಸ್ಯರುಗಳಾದ ರೂಪಕುಮಾರ್, ಕೋಟೆರಂಗನಾಥ್, ಮತ್ತಿತರರು ಉಪಸ್ಥಿತರಿದ್ದರು.
ಲೋಕಸಭಾ ಚುನಾವಣೆ ಯ ಎರಡು ಹಂತದ ಮತದಾನ ಈಗಾಗಲೇ ಮುಗಿದಿದೆ. ಮೇ 7ರಂದು ಮೂರನೇ ಹಂತದ ಮತದಾನ ನಡೆಯಲಿದೆ. ಈ…
ಲೋಕಸಭಾ ಚುನಾವಣಾ ಹಿನ್ನಲೆ ಮೊದಲ ಹಂತದ ಮತದಾನ ಈಗಾಗಲೇ ಮುಗಿದಿದ್ದು ಇದೀಗ 2ನೇ ಹಂತದ ಚುನಾವಣೆ ಪ್ರಚಾರ ಭರ್ಜರಿಯಾಗಿ ಸಾಗುತ್ತಿದೆ.ಪ್ರಧಾನಿ…
ಗ್ರೀವ್ ಕಾಟನ್ ಮಾಲೀಕತ್ವದ ಆಂಪಿಯರ್ ಎಲೆಕ್ಟ್ರಿಕ್ ಕಂಪನಿ ತನ್ನ ಹೊಚ್ಚ ಹೊಸ ನೆಕ್ಸಸ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ…
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಠಾಣ, ನಿಜಾಂಪುರ, ಕೊಳಾರ(ಕೆ), ಗೋರನಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಜೆಡಿಎಸ್ ಮುಖಂಡರು ಪಕ್ಷ…
ಜಿಲ್ಲೆಯ ಬಿಜೆಪಿ ಲೋಕಸಭಾ ಅಭ್ಯರ್ಥಿ ಉಮೇಶ ಜಾಧವ್ ಅವರ ಪ್ರಚಾರ ನಿಮಿತ್ಯ ಜಿಲ್ಲೆಯ ಹೈವೊಲ್ಟೇಜ್ ಕ್ಷೇತ್ರ ಅಫಜಲಪುರ ಪಟ್ಟಣದಲ್ಲಿ ಬಿಜೆಪಿ…
ಲೋಕಸಭಾ ಚುನಾವಣೆಗೆ ಹಿನ್ನಲೆ ಸಂಬಂಧಿಸಿದಂತೆ ಇಂದು ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷದ…