ಚಿಕ್ಕಮಗಳೂರು: ನಗರದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನದ ಜಾಗವನ್ನು ಸೂಕ್ತ ರೀತಿಯಲ್ಲಿ ಗುರುತಿಸಿ ಹಾಗೂ ಕಾಂಪೌಂಡ್ ನಿರ್ಮಾಣಗೊಳಿಸುವ ಮೂಲಕ ಭವನವನ್ನು ಪೂರ್ಣಗೊಳಿಸಿ ಕೊಡಬೇಕು ಎಂದು ಜಿಲ್ಲಾ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಗೆ ಯುವಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿ ಕಾಂಪೌಂಡ್ ನಿರ್ಮಾಣದ ಜೊತೆಗೆ ಜಾಗ ಗುರುತಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಯುವಕರ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಕೋಟೆ ವಾಲ್ಮೀಕಿ ಭವನದ ಜಾಗವನ್ನು ಸಿಡಿಎ ಹಾಗೂ ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆಯಿಂದ ಬೀಕನಹಳ್ಳಿ ಗ್ರಾಮದ ಲೇಔಟ್ನ ಸಿಎ ಸೈಟ್ನಲ್ಲಿ ಭವನ ನಿರ್ಮಾಣ ಮಾಡಲು ಇಲಾಖೆಗೆ ನೀಡಿ ಕಾಮಗಾರಿಯು ನಡೆಯುತ್ತಿದೆ ಎಂದರು.
ನಗರದಲ್ಲಿ ನಿರ್ಮಾಣಗುತ್ತಿರುವ ಭವನದ ಕಾಮಗಾರಿಗೆ ರಾಜ್ಯಸರ್ಕಾರ ಹೆಚ್ಚುವರಿಯಾಗಿ ೭೫ ಲಕ್ಷ ಅನುದಾನವನ್ನು ನಿಗಪಡಿಸಿ ಮೊದಲ ಕಂತಾಗಿ ೧೮ ಲಕ್ಷ ರೂ. ಅನುದಾನವನ್ನು ಜಿಲ್ಲಾಡಳಿತ ಮೂಲಕ ಜಂಟಿ ಖಾತೆಗೆ ಹಣ ಮಂಜೂರಾಗಿರುವುದರಿಂದ ಸಿಡಿಎ ಇಲಾಖೆಗೆ ಸೂಚಿಸಿ ಭವನ ನಿರ್ಮಾಣ ಮಾಡಲು ಹಾಗೂ ನೀಡಿದಂತ ಜಾಗವನ್ನು ಗುರುತಿಸಿ ಕಾಂಪೌಂಡ್ ನಿರ್ಮಿಸಿಕೊಡಬೇಕು ಎಂದು ಹೇಳಿದರು.
ಆದರೆ ಇದೀಗ ಭವನದ ಪಕ್ಕದಲ್ಲಿ ಒಂದು ರಸ್ತೆ ಹಾದು ಹೋಗಿರುವ ಹಿನ್ನೆಲೆಯಲ್ಲಿ ಕೂಡಲೇ ಪರಿಶೀಲನೆ ನಡೆಸಿ ವಾಲ್ಮೀಕಿ ಭವನಕ್ಕೆ ನೀಡಿದಂತ ಜಾಗವನ್ನು ಗುರುತಿಸಬೇಕು. ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿ ದ್ದರೂ ಸಹ ಯಾವುದೇ ಕಾಮಗಾರಿ ನಡೆಯು ತ್ತಿಲ್ಲ. ಆದ್ದರಿಂದ ಕೂಡಲೇ ಪರಿಶೀಲನೆ ನಡೆಸಿ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣ ಗೊಳಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಗೌರವ ಅಧ್ಯಕ್ಷ ಸಿ.ಆರ್.ಮಂಜುನಾಥ್, ಇದ್ದರು.