News Karnataka Kannada
Friday, May 17 2024
ಚಿಕಮಗಳೂರು

ಚಿಕ್ಕಮಗಳೂರು: ವಾಲ್ಮೀಕಿ ಭವನ ನಿರ್ಮಾಣಕ್ಕೆ ಜಾಗ ಗುರುತಿಸಲು ಒತ್ತಾಯ

Chikkamagaluru: Demand to identify land for construction of Valmiki Bhavan
Photo Credit : News Kannada

ಚಿಕ್ಕಮಗಳೂರು: ನಗರದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನದ ಜಾಗವನ್ನು ಸೂಕ್ತ ರೀತಿಯಲ್ಲಿ ಗುರುತಿಸಿ ಹಾಗೂ ಕಾಂಪೌಂಡ್ ನಿರ್ಮಾಣಗೊಳಿಸುವ ಮೂಲಕ ಭವನವನ್ನು ಪೂರ್ಣಗೊಳಿಸಿ ಕೊಡಬೇಕು ಎಂದು ಜಿಲ್ಲಾ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಗೆ ಯುವಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿ ಕಾಂಪೌಂಡ್ ನಿರ್ಮಾಣದ ಜೊತೆಗೆ ಜಾಗ ಗುರುತಿಸಿಕೊಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಯುವಕರ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಕೋಟೆ ವಾಲ್ಮೀಕಿ ಭವನದ ಜಾಗವನ್ನು ಸಿಡಿಎ ಹಾಗೂ ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆಯಿಂದ ಬೀಕನಹಳ್ಳಿ ಗ್ರಾಮದ ಲೇಔಟ್‌ನ ಸಿಎ ಸೈಟ್‌ನಲ್ಲಿ ಭವನ ನಿರ್ಮಾಣ ಮಾಡಲು ಇಲಾಖೆಗೆ ನೀಡಿ ಕಾಮಗಾರಿಯು ನಡೆಯುತ್ತಿದೆ ಎಂದರು.

ನಗರದಲ್ಲಿ ನಿರ್ಮಾಣಗುತ್ತಿರುವ ಭವನದ ಕಾಮಗಾರಿಗೆ ರಾಜ್ಯಸರ್ಕಾರ ಹೆಚ್ಚುವರಿಯಾಗಿ ೭೫ ಲಕ್ಷ ಅನುದಾನವನ್ನು ನಿಗಪಡಿಸಿ ಮೊದಲ ಕಂತಾಗಿ ೧೮ ಲಕ್ಷ ರೂ. ಅನುದಾನವನ್ನು ಜಿಲ್ಲಾಡಳಿತ ಮೂಲಕ ಜಂಟಿ ಖಾತೆಗೆ ಹಣ ಮಂಜೂರಾಗಿರುವುದರಿಂದ ಸಿಡಿಎ ಇಲಾಖೆಗೆ ಸೂಚಿಸಿ ಭವನ ನಿರ್ಮಾಣ ಮಾಡಲು ಹಾಗೂ ನೀಡಿದಂತ ಜಾಗವನ್ನು ಗುರುತಿಸಿ ಕಾಂಪೌಂಡ್ ನಿರ್ಮಿಸಿಕೊಡಬೇಕು ಎಂದು ಹೇಳಿದರು.

ಆದರೆ ಇದೀಗ ಭವನದ ಪಕ್ಕದಲ್ಲಿ ಒಂದು ರಸ್ತೆ ಹಾದು ಹೋಗಿರುವ ಹಿನ್ನೆಲೆಯಲ್ಲಿ ಕೂಡಲೇ ಪರಿಶೀಲನೆ ನಡೆಸಿ ವಾಲ್ಮೀಕಿ ಭವನಕ್ಕೆ ನೀಡಿದಂತ ಜಾಗವನ್ನು ಗುರುತಿಸಬೇಕು. ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿ ದ್ದರೂ ಸಹ ಯಾವುದೇ ಕಾಮಗಾರಿ ನಡೆಯು ತ್ತಿಲ್ಲ. ಆದ್ದರಿಂದ ಕೂಡಲೇ ಪರಿಶೀಲನೆ ನಡೆಸಿ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣ ಗೊಳಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಗೌರವ ಅಧ್ಯಕ್ಷ ಸಿ.ಆರ್.ಮಂಜುನಾಥ್, ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು