News Karnataka Kannada
Sunday, April 28 2024
ಚಿಕಮಗಳೂರು

ಚಿಕ್ಕಮಗಳೂರು: ಬೋಜೇಗೌಡರ ಅನುಕಂಪದ ಮಾತು ನಾಟಕದ ಪರಮಾವಧಿ

ojegowda's sympathetic speech, the culmination of the drama
Photo Credit : News Kannada

ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮೋಸಮಾಡಿದ್ದ ಎಸ್.ಎಲ್.ಬೋಜೇಗೌಡ ಅವರಿಂದಲೇ ಅನುಕಂಪದ ಮಾತುಗಳು ನಾಟಕದ ಪರಮಾವಧಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್‌ನೊಂದಿಗೆ ಅಧಿಕಾರ ಮಾಡಿದ್ದರಿಂದ ಬಿಜೆಪಿಗೆ ಶಕ್ತಿ ಬಂದಿದೆ ಎಂದು ಅವರು ಹೇಳಿರುವುದು ಹಾಸ್ಯಾಸ್ಪದ. ಬಿಜೆಪಿಯವರ ಕೃಪೆಯಿಂದ ೨೦ ತಿಂಗಳು ಅಧಿಕಾರ ಅನುಭವಿಸಿ ನಂತರ ಬಿ.ಎಸ್. ಯಡಿ ಯೂರಪ್ಪ ಅವರಿಗೆ ಮೋಸ ಮಾಡಿ ಅಧಿಕಾರವನ್ನು ತಪ್ಪಿಸಿದವರು ಯಾರು ಎಂದು ಹೇಳಲಿ.

ಮಾಜಿ ಸಿಎಂ ಎಚ್‌ಡಿಕೆ ಮತ್ತು ಎಸ್.ಎಲ್.ಬೋಜೇಗೌಡ ಅವರ ಪಿತೂರಿಯಿಂದಲೇ ಯಡಿಯೂರಪ್ಪನವರ ಮೇಲೆ ಸುಳ್ಳು ಕೇಸ್ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸಿದ್ದನ್ನು ರಾಜ್ಯದ ಜನ ಮರೆತಿಲ್ಲ ಎಂದರು.

ಬೋಜೇಗೌಡರು ತಾವು ಅಧಿಕಾರದಲ್ಲಿದ್ದಾಗ ಯಾವ ರೀತಿ ನಡೆದು ಕೊಂಡಿದ್ದಾರೆ. ಯಾರ್‍ಯಾರಿಗೆ ತೊಂದರೆ ಕೊಟ್ಟಿದ್ದೀರಾ ಎಂಬುದನ್ನು ಪಿಳ್ಳೇನಹಳ್ಳಿ ಸುತ್ತಮುತ್ತಲ ಜನ ಹೇಳುತ್ತಾರೆ ಎಂದರು.

ಬೋಜೇಗೌಡರಿಗೆ ತಾಕತ್ತಿದ್ದರೆ ಶಾಸಕ ಸಿ.ಟಿ.ರವಿಯವರ ವಿರುದ್ಧ ಅವರ ಪಕ್ಷದ ಯಾವ ದೊಡ್ಡ ನಾಯಕರನ್ನಾದರೂ ತಂದು ನಿಲ್ಲಿಸಲಿ, ಆಗ ಬೋಜೇಗೌಡರಿಗೆ ಸೋಲಿನ ರುಚಿ ತೋರಿಸುತ್ತೇವೆ ಎಂದರು.

ಕಾಂಗ್ರೆಸ್ ವಕ್ತಾರ ರವೀಶ್ ಬಸಪ್ಪ ಅವರು ತಮ್ಮ ಇರುವಿಕೆ ತೋರಿಸಿ ಕೊಳ್ಳಲು ಗ್ರಾಮ ವಾಸ್ತವ್ಯದ ಬಗ್ಗೆ ಟೀಕೆ ಮಾಡಿದ್ದಾರೆ . ಕಂದಾಯ ಸಚಿವರ ಹುಲಿಕೆರೆ ಗ್ರಾಮ ವಾಸ್ತವ್ಯದಿಂದ ಆ ಭಾಗದ ಜನರ ಸಮಸ್ಯೆಗ ಳಿಗೆ ಪರಿಹಾರ ದೊರೆತಿದೆ. ೯೫೦ ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಬಡವರ ಬಗ್ಗೆ ಕಾಂಗ್ರೆಸ್‌ಗೂ ಅನುಕಂಪವಿರಲಿ ಎಂದರು.

ವಕ್ತಾರ ದೀಪಕ್‌ದೊಡ್ಡಯ್ಯ, ರಂಗನಾಥ, ಕವಿತಾಶೇಖರ್, ದಿನೇ ಶ್, ಅಂಕಿತಾ ಮತ್ತಿತರರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು