News Karnataka Kannada
Saturday, May 04 2024
ಚಿಕಮಗಳೂರು

ಸಿ.ಟಿ.ರವಿ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ್ದ ಪ್ರಕರಣ, ಮೂವರ ವಿರುದ್ಧ ಎಫ್.ಐ.ಆರ್

Chikkamagaluru: An FIR has been registered against three persons for spreading fake news against CT Ravi.
Photo Credit : News Kannada

ಚಿಕ್ಕಮಗಳೂರು: ವೀರಶೈವ ಲಿಂಗಾಯಿತರಿಗೆ ಮಣೆ ಹಾಕಬೇಕಿಲ್ಲ ಎಂದು ಸಿ.ಟಿ.ರವಿ ಹೇಳಿದ್ದಾರೆ ಎಂದು ಸುಳ್ಳುಸುದ್ದಿ ಹಬ್ಬಿಸಿದ್ದ ಮೂವರು ಆರೋಪಿಗಳ ವಿರುದ್ಧ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿ.ಟಿ.ರವಿ ಅವರ ವಿರುದ್ಧ ಷಡ್ಯಂತ್ರ ನಡೆಸಿರುವ ಸುಳ್ಳು ಸುದ್ದಿಯಾಗಿದೆ. ಇದನ್ನು ಹಬ್ಬಿಸಿದವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದೆವು. ತನಿಖೆ ನಡೆಸಿರುವ ಪೊಲೀಸರು ದಾವಣಗೆರೆ ಜಿಲ್ಲೆ ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಹರೀಶ್ ಕೆಂಗಲಹಳ್ಳಿ, ಗುರುಪಾಟೀಲ್ ಹಾಗೂ ತುಮಕೂರಿನ ಸುವರ್ಣಗಿರಿ ಕುಮಾರ್ ಎಂಬುವರ ವಿರುದ್ಧ ಕೇಸು ದಾಖಲಿಸಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಮೂವರು ಆರೋಪಿಗಳು ಸೇರಿ ಜಿಲ್ಲಾ ಕಾಂಗ್ರೆಸ್ ನಾಯಕ ರಿಂದ ಟೂಲ್ ಕಿಟ್ ಪಡೆದು ಈ ರೀತಿ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣ ದಲ್ಲಿ ಹಬ್ಬಿಸಿದ್ದರು. ಕಾಂಗ್ರೆಸ್ ಪಕ್ಷ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಲು ಸಾಧ್ಯವಾಗದೆ. ಜಾತಿಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡಿದೆ.

ಕ್ಷೇತ್ರದ ಲಿಂಗಾಯುತರು ಇಂತಹ ಸುಳ್ಳು ಸುದ್ದಿಗೆ ಮಾರು ಹೋಗುವ ವರಲ್ಲ. ಬಿಜೆಪಿ ಪಕ್ಷ ಲಿಂಗಾಯತ ಸಮುದಾಯದ ನಾಯಕರನ್ನು ಗುರುತಿಸಿ ರಾಜ್ಯದಲ್ಲಿ ಉನ್ನತ ಸ್ಥಾನ ನೀಡಿದೆ. ಜಿಲ್ಲೆಯಲ್ಲೂ ಅನೇಕ ಸ್ಥಳೀಯ ಸಂಸ್ಥೆ, ನಿಗಮ ಮಂಡಳಿಯಲ್ಲಿ ಸ್ಥಾನ ಕಲ್ಪಿಸಿ ಹೃದಯ ವೈಶಾಲ್ಯತೆ ತೋರಿದೆ.

ಈ ಹಿಂದಿನ ಚುನಾವಣೆಯಲ್ಲಿ ಕೂಡ ಹಲವರು ಪೆನ್ನು ಪೇಪರ್ ಹಿಡಿದು ಲೆಕ್ಕಾಚಾರ ಹಾಕಿ ಚುನಾವಣೆಗೂ ಮುನ್ನ ಬಿಜೆಪಿ ಸೋಲಿಸುವಂತಹ ಕೆಲಸ ಮಾಡುತ್ತಿ ದ್ದರು. ಆದರೆ, ಫಲಿತಾಂಶ ಬಂದಾಗ ಸಿ.ಟಿ.ರವಿ ಅತ್ಯಧಿಕ ಮತದ ಅಂತರ ದಿಂದ ಗೆಲ್ಲುತ್ತಿದ್ದರು.ಅದೇ ರೀತಿ ಈ ಬಾರಿಯೂ ಆಗಲಿದೆ. ಕಾಂಗ್ರೆಸ್ ಅಪ ಪ್ರಚಾರ, ಸುಳ್ಳು ಸುದ್ದಿಗಳು ನಡೆ ಯುವುದಿಲ್ಲ ಎಂದರು.
ಮುಖಂಡರಾದ ಕವಿತಾಶೇ ಖರ್, ಕುರುವಂಗಿ ವೆಂಕಟೇಶ್, ಸೋಮಶೇಖರಪ್ಪ, ಪುಷ್ಪರಾಜ್ ಮತ್ತಿತರರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು