ಚಿಕ್ಕಮಗಳೂರು: ಸೋಲಿನ ಭೀತಿಯಿಂದ ಶಾಸಕ ಸಿ.ಟಿ.ರವಿ ಅವರು ಹಣ, ಹೆಂಡ, ಸೀರೆ ಹಂಚುವ ಮೂಲಕ ವಾಮ ಮಾರ್ಗದಲ್ಲಿ ಚುನಾವಣೆ ಎದುರಿ ಸಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿ ಎಚ್. ಡಿ.ತಮ್ಮಯ್ಯ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೨೦ ವರ್ಷದಿಂದ ಶಾಸಕರಾಗಿದ್ದ ಸಿ.ಟಿ.ರವಿ ಅವರು ಮಾಡಿರುವ ಅಭಿವೃದ್ಧಿ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಮತ ಕೇಳಬಹುದಿತ್ತು. ಅದನ್ನು ಬಿಟ್ಟು ಸೋಲಿನ ಭೀತಿಯಿಂದ ಮತದಾರರಿಗೆ ಹಣದ ಆಮಿಷ ತೋರಿಸಿ ಮತಸೆಳೆಯುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕ್ಷೇತ್ರದ ಇತಿಹಾಸದಲ್ಲಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಮಾಡುವುದು ಹೇಗೆ ಎಂದು ತೋರಿಸಿದ್ದೇ ಸಿ.ಟಿ.ರವಿ ಎಂದು ದೂರಿದ ಅವರು ನಗರದ ಎಂಜಿ.ರಸ್ತೆ, ಐಜಿ ರಸ್ತೆ ಅಭಿವೃದ್ಧಿ ಹೆಸರಲ್ಲಿ ಕಳಪೆ ಕಾಮಗಾರಿ ನಡೆಸಿರುವ ಬಗ್ಗೆ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಿದ್ದು ಈ ಬಗ್ಗೆ ತನಿಖೆ ನಡೆಯುತ್ತಿರುವುದೇ ಇವರ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಎಂಜಿ ರಸ್ತೆ ಫುಟ್ಪಾತ್ಗೆ ಹಾಕಿದ್ದ ಇಂಟರ್ಲಾಕ್ನ್ನು ತೆಗೆದು ಮತ್ತೆ ಅದನ್ನೆ ಜೋಡಿಸಿ ಹೊಸದಾಗಿ ಮಾಡಲಾಗಿದೆ ಎಂದು ಕಾಮಗಾರಿಯನ್ನು ತೋರಿಸಿ ಹಣ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಐಜಿ ರಸ್ತೆ ಫುಟ್ಪಾತ್ ಸಂಪೂರ್ಣ ಕಳಪೆಯಾಗಿದೆ.
ಬಿಳೇಕಲ್ಲು, ಕುರುವಂಗಿ ರಸ್ತೆಗೆ ಡಾಂಬರ್ ಹಾಕಿದ್ದು ಕಳಪೆ ಕಾಮ ಗಾರಿಯಿಂದ ರಸ್ತೆ ಕಿತ್ತುಹೋಗಿದೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳಲ್ಲಿ ಹಾಗೂ ನಗರದ ಎರಡು ಕೆರೆ ಅಭಿವೃದ್ಧಿಯಲ್ಲೂ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಸಗಣಿ ಬಾಚೋ ಹೆಣ್ಣು ಮಕ್ಕಳಿಗೆ ೫ ರೂ ಹಾಲಿನ ಸಬ್ಸಿಡಿ ಕೊಡುತ್ತಿ ದ್ದೇವೆ ಎಂದು ಹೇಳುವ ಮೂಲಕ ರಾಜ್ಯದ ರೈತ ಹೆಣ್ಣು ಮಕ್ಕಳಿಗೆ ರವಿ ಅಪಮಾನ ಮಾಡಿದ್ದಾರೆ. ಕೂಡಲೇ ಅವರು ಹಣ್ಣುಮಕ್ಕಳ ಕ್ಷಮೆ ಕೇಳ ಬೇಕು. ಇಲ್ಲದಿದ್ದರೆ ಪ್ರತಿಭಟನೆ ಮೂಲಕ ಉತ್ತರ ನೀಡಬೇಕಾಗುತ್ತದೆ ಎಂದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಮುಖಂಡ ರಾದ ಜಯರಾಜ್ಅರಸ್, ನಯಾ ಜ್, ಚಂದ್ರಪ್ಪ, ಪ್ರಕಾಶ್ರೈ, ತ್ರಿಭು ವನ್, ರೂಬಿನ್ ಮೊಸೆಸ್ ಇದ್ದರು.